ಯಾದಗಿರಿ: ಜಿಲ್ಲೆಯ ಸುರಪುರ ದಲ್ಲಿ ಇಂದು ಡಾ ಸಿ ಎಸ್ ದ್ವಾರಕಾನಾಥ್ ಆಯೋಗವು ಸರ್ಕಾರಕ್ಕೆ ನೀಡಿರುವ ವರದಿಯನ್ನು ಜಾರಿಗೊಳಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ಸುರಪುರ ತಾಲೂಕ ಘಟಕದ ವತಿಯಿಂದ ಪ್ರತಿಭಟಿಸಿದರು.
ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಆವರಣ ದಿಂದ ಆರಂಭವಾದ ಪ್ರತಿಭಟನೆಯು ಮುಖ್ಯ ರಸ್ತೆಯ ಮುಖಾಂತರ ಶ್ರೀ ಮಹಾತ್ಮ ಗಾಂಧೀಜಿ ವೃತ್ತದಿಂದ ನೇರವಾಗಿ ತಹಶೀಲ್ದಾರರ ಕಛೇರಿಗೆ ತೇರಳಿ ತಸಿಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪಿಂಜಾರ ನದಾಫ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಡಾ ಅಬ್ದುಲ್ ರಜಾಕ್ ನದಾಫ ಮಾತನಾಡಿದ ಅವರು 25 ವರ್ಷಗಳಿಂದ ವಂಚನೆಗೆ ಒಳಗಾಗುತ್ತಿರುವ ನಮ್ಮ ಸಮುದಾಯ ರಸ್ತೆಗೆ ಇಳಿದು ಹೋರಾಟ ಮಾಡಲು ಧೈರ್ಯ ವಿಲ್ಲಾ ಅದನ್ನು ದುರುಪಯೋಗ ಎಂದು ಭಾವಿಸದೆ ಸರ್ಕಾರ ಆದಷ್ಟು ಬೇಗನೆ ನಮ್ಮ ಮನವಿಗೆ ಸ್ಪಂದಿಸ ಬೇಕು ಎಂದರು.
ಇದೇ ರೀತಿ ಮುಂದುವರೆದರೆ ರಾಜ್ಯಾದಂತ ಪಿಂಜಾರ ಸಮುದಾಯ ಅನಿವಾರ್ಯವಾಗಿ ಬೀದಿಗಿಳಿದು ಹಕ್ಕನ್ನು ಪಡೆಯುವ ಸಂದರ್ಭ ಬರಬಹುದು ಅದಕ್ಕೆ ಸಮುದಾಯದ ಯುವಕರು ಎಲ್ಲರೂ ಒಗ್ಗಟ್ಟಿನಲ್ಲಿ ಮುಂದೆ ಸಾಗೋಣವೆಂದರು.
ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಅಧ್ಯಕ್ಷ ಅಹ್ಮದ್ ಪಠಾಣ್ ಮಾತನಾಡಿ ಭೌಗೋಳಿಕ ಸ್ವರೂಪದಲ್ಲಿ ಪಿಂಜಾರ ನದಾಫ ಸಮಾಜ ಆರ್ಥಿಕ ಕೃಷಿ ಕಾರ್ಮಿಕ ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಲಾಗಿ ಸಂಪೂರ್ಣವಾಗಿ ಹಿಂದುಳಿದಿದೆ ರಾಜ್ಯದಲ್ಲಿ 38 ಲಕ್ಷಕ್ಕೂ ಹೆಚ್ಚು ಜನಾಂಗವಿದ್ದು ಪ್ರತಿಶತ 80 ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಉಗ್ರವಾಗಿ ಮಾತನಾಡಿ ಇದನ್ನು ಸಮುದಾಯಕ್ಕೆ ಸರಕಾರ ತೋರಿಸುತ್ತಿರುವ ನಿಸ್ಕಾಳಜಿಯನ್ನು ಸಹಿಸುವುದಿಲ್ಲ ಎಂದು ಮಾತನಾಡಿದರು.
ಇನ್ನೋರ್ವ ಅಥಿತಿ ಅಖಿಲ ಭಾರತ ಮಹಾಮಂಡಳದ ಶಹಾಪುರ ತಾಲೂಕ ಅಧ್ಯಕ್ಷ ನದಾಫ್ ಮಾತನಾಡಿ
ಪಿಂಜಾರ ನದಾಫ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಡಾ ಸಿ ಎಸ್ ದ್ವಾರಕಾನಾಥ್ ವರದಿಯನ್ನು ಶೀಘ್ರ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಹುಣಸಗಿ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಡಿ ಸುರಪುರ ಮಾತನಾಡಿ ಶಾಲಾ ವಿದ್ಯಾರ್ಥಿಗಳಿಗಳಲ್ಲಿ ಜಾತಿ ನೋಂದಣಿ ತಪ್ಪಾದಲ್ಲಿ ಅದನ್ನು ಪಂಚನಾಮೆ ಮೂಲಕ ಸರಿಪಡಿಸುವಲ್ಲಿ ಸರ್ಕಾರ ಆದೇಶ ನೀಡಬೇಕು ಸಮುದಾಯದಲ್ಲಿರುವ ಬಡವರಿಗೆ ನಾನಾ ವಸತಿ ಯೋಜನೆ ಅಡಿಯಲ್ಲಿ ನಿವೇಶನ ಒದಗಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಹಾಗೂ ಸಚಿವ ಸಂಪುಟದಲ್ಲಿ ಡಾ ಸಿ ಎಸ್ ದ್ವಾರಕಾನಾಥ್ ವರದಿ ಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಜಿಲ್ಲಾ ಉಪಾಧ್ಯಕ್ಷ ಎಚ್ ನಾಗರಾಳ ಪ್ರಧಾನ ಕಾರ್ಯದರ್ಶಿ ಬಾವಾಸಾಬ ಪರಸನಹಳ್ಳಿ ಕಾರ್ಯದರ್ಶಿ ಶರಮುದ್ದೀನ ಶಖಾಪುರ ಹುಣಸಗಿ ತಾಲೂಕ ಘಟಕದ ಅಧ್ಯಕ್ಷ ಬಂದಗಿಸಾಬ ಎಚ್ ಅಗ್ನಿ ಉಪಾಧ್ಯಕ್ಷ ಕಾಸಿಂಸಾಬ ಎಸ್ ಕಕ್ಕಲದೊಡ್ಡಿ ಕಾರ್ಯದರ್ಶಿ ಹುಸೇನಸಾಬ್ ಎಂ ಗಾದಿ ರಾಜೇಸಾಬ ಬಿ ನದಾಫ ದಾವಲಸಾಬ ಕಕ್ಕೇರಾ ನಬಿಸಾಬ ದೇವಾಪುರ ಜೆ ಕಾಜೇಸಾಬ್ ನಾಗರಾಳ ದಸ್ತಗಿರ ಶಹಾಪುರ ಹಾಗೂ ವಿವಿಧ ಹಳ್ಳಿಗಳಿಂದ ಸಮಾಜದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…