ಬಿಸಿ ಬಿಸಿ ಸುದ್ದಿ

ಆಲ್ದಾಳ ಗ್ರಾಮದಲ್ಲಿನ ಮತದಾನ ಕೇಂದ್ರ ಸ್ಥಳ ಬದಲಿಸಿದರೆ ಉಗ್ರ ಹೋರಾಟ: ರಮೇಶ ದೊರೆ

ಸುರಪುರ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಮತದಾನ ಕೇಂದ್ರ ೪೮ರ ಸ್ಥಳ ಬದಲಾವಣೆಯನ್ನು ಚುನಾವಣಾ ಆಯೋಗ ಕೈಬಿಡಬೇಕೆಂದು ಆಗ್ರಹಿಸಿ ಆಲ್ದಾಳ ಗ್ರಾಮಸ್ಥರು ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಮಾತನಾಡಿ,ಕಳೆದ ನಾಲ್ಕು ದಶಕದಿಂದ ಆಲ್ದಾಳ ಗ್ರಾಮದಲ್ಲಿನ ಮತದಾನ ಬೂತ್ ಸಂಖ್ಯೆ ೪೮ನ್ನು ಗ್ರಾಮದ ವಾರ್ಡ ಸಂಖ್ಯೆ ೨ರ ಅಂಗನವಾಡಿ ಕೇಂದ್ರದಲ್ಲಿಯೆ ತೆರೆಯಲಾಗುತ್ತದೆ,ಆದರೆ ಈಗ ಬೂತ್ ಸಂಖ್ಯೆ ೪೮ನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದಾಗಿ ತಿಳಿದುಬಂದಿದೆ.ಇದರಿಂದ ಗ್ರಾಮದಲ್ಲಿನ ಎರಡೂ ಬೂತ್‌ಗಳನ್ನು ಒಂದೆಕಡೆಗೆ ತೆರೆದಲ್ಲಿ ಗ್ರಾಮದಲ್ಲಿನ ಮತದಾರರು ಮತದಾನಕ್ಕೆ ಒಂದೇ ಕಡೆ ಹೋಗಲು ತೊಂದರೆಯಾಗಲಿದೆ.ಅಲ್ಲದೆ ಎರಡೂ ಬೂತ್‌ಗಳನ್ನು ಒಂದೇಕಡೆಗೆ ತೆರೆದಲ್ಲಿ ಜನಜಂಗುಳಿ ಸೇರಿ ಸಮಸ್ಯೆಯಾಗುತ್ತದೆ.

ಅಲ್ಲದೆ ಸದ್ಯ ಕೊರೊನಾ ಸಂದರ್ಭವಿರುವುದರಿಂದ ಜನರು ಸಾಮಾಜಿಕ ಅಂತರವನ್ನು ಕಾಪಾಡುವುದು ಮುಖ್ಯವಾಗಿದೆ,ಹೀಗಿರುವಾಗ ಸದ್ಯ ಇರುವ ಸ್ಥಳವನ್ನು ಬೇರೆಡೆಗೆ ಸ್ಥಳಾಂತರ ಮಾಡುವುದರ ಹಿಂದೆ ಏನಾದರು ಹುನ್ನಾರ ಇರಬಹುದೆಂದು ಅನುಮಾನ ಮೂಡುತ್ತಿದೆ.ಆದ್ದರಿಂದ ಯಾವುದೇ ಕಾರಣಕ್ಕು ಬೂತ್ ೪೮ನ್ನು ಸದ್ಯ ಇರುವ ವಾರ್ಡ ಸಂಖ್ಯೆ ೨ರ ಹೊಸ ಅಂಗನವಾಡಿ ಕೇಂದ್ರದಲ್ಲಿಯೇ ಮುಂದು ವರೆಸಬೇಕು ಬದಲಾಯಿಸಿದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಜೊತೆಗೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೈಜನಾಥ ಸಾಹುಕಾರ ಅಯ್ಯಣ್ಣಗೌಡ ಕಿಲ್ಲೆದಾರ ಸಿದ್ದಪ್ಪ ಪೂಜಾರಿ ತಿರುಪತಿ ಹುದ್ದಾರ ತಿಪ್ಪಣ್ಣ ಹುಲ್ಕಲ್ ದುರ್ಗಪ್ಪ ಹುಲ್ಕಲ್ ಬಸವರಾಜ ಸಕ್ರೆಪರ್ ಮಂಜುನಾಥ ಹುದ್ದಾರ ಗೋವಿಂದರಾಜ ಹುದ್ದಾರ ಶರಣಪ್ಪ ಹುದ್ದಾರ ನಾಗರಾಜ ಹುದ್ದಾರ ಶಂಕ್ರಪ್ಪ ಹುಲ್ಕಲ್ ಮಲ್ಲಪ್ಪ ಹುದ್ದಾರ ಸೋಮಣ್ಣ ಸೇರಿದಂತೆ ಅನೇಕರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

2 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

2 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

4 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

4 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

4 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

5 hours ago