ಸುರಪುರ: ತಾಲೂಕಿನ ಬೋನಾಳ ಗ್ರಾಮದ ರೈತ ಹಣಮಪ್ಪ ಜೆಟ್ಟೆಪ್ಪ ಎಂಬುವವರು ತಮ್ಮ ಜಮೀನಲ್ಲಿ ಬೆಳೆದಿದ್ದ ಭತ್ತ ಬುಧವಾರ ಸುರಿದ ಮಳೆ ಗಾಳಿಯಿಂದಾಗಿ ಸಂಪೂರ್ಣ ನೆಲಕಚ್ಚಿದ್ದು ರೈತ ಬೆಳೆ ಹಾನಿಯಿಂದಾಗಿ ತೀವ್ರ ದುಃಖಕ್ಕೀಡಾಗಿದ್ದಾನೆ.
ಬೆಳೆ ನಷ್ಟದ ಕುರಿತು ರೈತ ಹಣಮಪ್ಪ ಮಾತನಾಡಿ,ಆರು ಎಕರೆಯಲ್ಲಿ ಸಾಲ ಮಾಡಿ ಬೀಜ ಗೊಬ್ಬರ ತಂದು ಭತ್ತ ಬೆಳೆದಿದ್ದೆ ಇನ್ನೇನು ಒಂದು ತಿಂಗಳಲ್ಲಿ ಭತ್ತ ಕೈಗೆ ಬಂದು ಸಾಲ ತೀರಲಿದೆ ಎಂದು ನೆಮ್ಮದಿಯಲ್ಲಿರುವಾಗ ನಮ್ಮ ಬದುಕಿನ ನಾಶಕ್ಕೆ ಬಂದ ಗಾಳಿ ಮಹಾ ಮಳೆಯಿಂದಾಗಿ ಎಲ್ಲ ಭತ್ತವು ಈಗ ನೆಲಕಚ್ಚಿ ಮಣ್ಣು ಪಾಲಾಗಿದೆ.ಭತ್ತ ಈಗ ಕಾಳು ಕಟ್ಟುತ್ತಿದ್ದ ಸಮಯಕ್ಕೆ ನೆಲಕ್ಕೆ ಬಿದ್ದಿದ್ದರಿಂದ ಭತ್ತ ಕಾಳು ಆಗುವುದೇ ಅನುಮಾನವಾಗಿದೆ.
ಸಾಲ ಮಾಡಿ ಕೃಷಿ ಮಾಡಿದರೆ ಈಗ ಇಂತಹ ದುಸ್ಥಿತಿ ಬಂದಿದೆ ಮುಂದೆ ಸಾಲ ಹೇಗೆ ತೀರಿಸುವುದೆಂದು ದೊಡ್ಡ ಚಿಂತೆಯಾಗಿದೆ.ಸರಕಾರ ಕೂಡಲೆ ನಮ್ಮ ನೆರವಿಗೆ ಬರಬೇಕು ಇಲ್ಲವಾದಲ್ಲಿ ನನಗೆ ಸಾವೇ ಗತಿಯಾಗಲಿದೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…