ಕಲಬುರಗಿ: ಕೋವಿಡ್-19 ಹಿನ್ನೆಯಲ್ಲಿ ಈದ್ ಏ ಮಿಲಾದುನ್ ನಬಿ ಆಚರಣೆ ಕುರಿತು ರಾಜ್ಯ ಸರಕಾರ ಮತ್ತು ವಕ್ಫ್ ಬೋರ್ಡ್ ಕೆಲವು ನಿಯಮಗಳು ಹೊರತಂದಿದ್ದು, ಇದೀಗ ಈ ನಿಯಮಗಳ ವಿರುದ್ಧ ಕಲಬುರಗಿ ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಹಬ್ಬದ್ ಪ್ರಯುಕ್ತ ಜುಲೂಸ್ ಮೆರವಣೆಗೆ ನಿಷೇಧ ಹೇರಿದ ರಾಜ್ಯ ವಾಕ್ಫ್ ಮಂಡಳಿಯ ವಿರುದ್ಧ ಮುಸ್ಲಿಂ ಸಂಘಟನೆಗಳು ಸಂಜೆ 7 ಗಂಟೆಯಿಂದ ನಗರದ ಮುಸ್ಲಿಂ ಚೌಕ್ ನಲ್ಲಿ ಪ್ರತಿಭಟನೆ ನಡೆಸಿ ಜುಲೂಸ್ ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಮಿಲಿ ಕೌನ್ಸಿಲ್ ಸದಸ್ಯರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಅವರು ಮಾತನಾಡಿ ವಕ್ಫ್ ಬೋರ್ಡ್ ಹಬ್ಬ ಆಚರಣೆ ನಿಯಮಗಳು ನಾವು ನಂಬುದಿಲ್ಲ. ವಾಕ್ಫ್ ಬೋರ್ಡ್ ರಾಜ್ಯ ಸರಕಾರದ ಕೈಗೊಂಬೆಯಾಗಿದೆ. ಇಸ್ಲಾಮಿಕ್ ಹಬ್ಬ ಆಚರಣೆಗಳ ಕುರಿತು ವಾಕ್ಫ್ ನಿಯಮ ರೂಪಿತಿರುವುದು ಖಂಡಿನೀಯವಾಗಿದೆ. ನಿಯಮ ನಿಬಂಧನೆಗಳ ಕುರಿತು ರಚಿಸುವ ಯಾವುದೆ ಅಧಿಕಾರಿ ವಾಕ್ಫ್ ಬೋರ್ಡ್ ಗೆ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈದ್ ಪ್ರಯುಕ್ತ ಜಾರಿಗೊಳಿಸಿದ ನೂತನ ನಿಯಮವಳಿಗಳನ್ನು ಪ್ರತಿಭಟನಾಕಾರರು ಪ್ರತಿಗಳನ್ನು ಹರಿದು ಹಾಕುವ ಮೂಲಕ ಈದ್ ಮಿಲಾದ್ ಜುಲೂಸ್ ಅಚರಿಸೆ ಆಚರಿಸುತ್ತೇವೆ ಎಂದು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ವಾಹಾಜ್ ಬಾಬಾ, ರಹೀಮ್ ಮೀರ್ಚಿ, ಇಮ್ತೀಯಾಜ್ ಸಿದ್ದಿಖಿ, ಮೊಹಮ್ಮದ್ ಕಲೀಮ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…