ಶ್ರೀ ಮಹರ್ಷಿ ವಾಲ್ಮೀಕಿಯವರ, ಸರದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನೋತ್ಸವ ಆಚರಣೆ

ಕಲಬುರಗಿ: ಸಂಸ್ಕೃತ ಕವಿ, ಶ್ರೀ ಮಹರ್ಷಿ ವಾಲ್ಮೀಕಿಯವರ ಹಾಗೂ ಉಕ್ಕಿನ ಮನುಷ್ಯ, ಸ್ವತಂತ್ರ ಭಾರತದ ಪ್ರಥಮ ಗ್ರಹಮಂತ್ರಿಯಾದ ಶ್ರೀ ಸರದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನೋತ್ಸವದ ಅಂಗವಾಗಿ ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಲಯದಲ್ಲಿ ಆಚರಿಸಲಾಯಿತು.

ಪ್ರಾಂಶುಪಾಲರಾದ  ಶರಣಪ್ಪ  ಬಿ ಹೊನ್ನಗೆಜ್ಜೆ ಅವರು ಮಾತನಾಡುತ್ತಾ ಸಂಸ್ಕೃತ ಕವಿ ಹಾಗೂ ಮಹರ್ಷಿ ವಾಲ್ಮೀಕಿ ಹಾಗೂ ಉಕ್ಕಿನ ಮನುಷ್ಯ ಶ್ರೀ ಸರದಾರ್ ವಲ್ಲಭಭಾಯಿ ಪಟೇಲ್‌ರವರು ಮನುಕುಲದ  ದಾರಿದೀಪ ಎನ್ನಲು ಹೆಮ್ಮೆಯನಿಸುತ್ತದೆ.

ಇವರುಗಳ ಪ್ರಕಾರ ಅಧಿಕಾರಕ್ಕಿಂತ ಸನ್ನಡತೆ ರೂಢಿಸಿಕೊಂಡು ಮತ್ತು ನೀಡಿದ ವಾಗ್ವಾದವನ್ನು ಈಡೇರಿಸುವುದೇ ಜನಪ್ರತಿನಿಧಿಗಳ ಧರ್ಮ ಎಂಬುದು ಇವರ ಮೂಲ ವಾಗ್ವಾದವಾಗಿತ್ತು. ಜಾತಿರಹಿತ, ವರ್ಗರಹಿತ, ಶೋಷಣೆರಹಿತ, ಸಮಪಾಲು – ಸಮಬಾಳು, ಸಮಾನ ಅವಕಾಶದ ಸಮಾಜವೇ ರಾಮರಾಜ್ಯ ಎಂಬುದನ್ನು ಮನುಕುಲಕ್ಕೆ ತೋರಿಸಿದರೂ ಇದು ಇನ್ನು ಜಾರಿಗೆಯಲ್ಲಿರದಿದ್ದನ್ನು ಕಂಡು ಅಸಮಧಾನವೆನಿಸುತ್ತದೆ.

ಅಲ್ಲದೆ ಧರ್ಮಿಷ್ಟರು ಅಬಲರ ಪರವಾಗಿ ನಿಲ್ಲುವುದೇ ಮನುಷ್ಯ ಧರ್ಮ ಎಂದು ಸಾರಿ ಸಾರಿ ಹೇಳಿದ ಇವರ ಮಾತು ಇಂದು ತತ್ವವಿರುದ್ಧವಾಗಿ ತಾಂಡವವಾಡುತ್ತಿದೆ.  ಅಷ್ಟೇ ಅಲ್ಲ ಆಂಜನೆಯನು ಲಕ್ಷ್ಮಣನ ಪ್ರಾಣ ಉಳಿಸಲು ಸಂಜೀವಿನಿ ಪರ್ವತವನ್ನು ತಂದು ಪ್ರಾಣ ಉಳಿಸಿದ ಪ್ರಸಂಗದ ಮೂಲಕ ಯಾವ ಸಮಾಜ ಪರಿಸರವನ್ನು ಕಾಪಾಡುತ್ತದೋ ಆ ಪರಿಸರ ಪ್ರತಿಯೊಬ್ಬರ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ.

ಆದರೆ ಇಂದು ಪ್ರತಿಯೊಬ್ಬರು ದುರಾಸೆಗೆ ಬಲಿಯಾಗಿ ಪರಿಸರವನ್ನು ನಾಶಮಾಡಿ ಕರೋನಾ ದಂತಹ ಮಹಾಮಾರಿ ಕಾಯಿಲೆಗೆ ತುತ್ತಾಗಿ ಕಷ್ಟಪಡುವ ಪರಿಸ್ಥಿತಿ ಎದುರಿಸಬೇಕಾದ ದುಸ್ಥಿತಿ ನಾವೇ ಮಾಡಿಕೊಂಡಿದ್ದಲ್ಲವೇ ?  ತಂದೆಗೆ ಕೊಟ್ಟ ಮಾತು, ಸಹೋದರ ಪ್ರೀತಿ, ವಾತ್ಸಲ್ಯ, ದೇಶದ ಮೇಲಿರುವ ಅಭಿಮಾನ, ಏಕತೆ ಎಲ್ಲವನ್ನು ಮರೆತು ನಾವು ಇಂದು ನಾನು ನನ್ನದು ಎಂದು ಒಣಪ್ರತಿಷ್ಟೆಯಿಂದ ಮೆರೆಯುತ್ತಿದೆ ಮನುಕುಲ.

ಇಂತಹ ಆದರ್ಶಗಳನ್ನು ಪ್ರಚಲಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡು ಪ್ರತಿಯೊಬ್ಬ ಪ್ರಜೆಯು ಧರ್ಮದ ಹಾದಿಯಲ್ಲಿ ಮುನ್ನಡೆದರೆ ಗಾಂಧೀಜಿಯವರು ಕಂಡ ರಾಮರಾಜ್ಯ  ಎಂಬ ಕನಸು ನನಸಾಗಲು ಸಾಧ್ಯ. ಎಂದು ಹೊನ್ನಗೆಜ್ಜೆ ಹೇಳಿದರು.

ಅಧ್ಯಕ್ಷರಾದ ಸುಶ್ಮಾವತಿ, ಸಿಬ್ಬಂದಿ ವರ್ಗದವರಾದ ಶಾಂತಲಾ ನಂದರಗಿ, ಕು. ಸೌಂದರ್ಯ ಹಾಗೂ ಸುಜಾತಾ ಉಪಸ್ಥಿತರಿದ್ದರು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

2 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

13 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

15 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

16 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

16 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420