ಕಲಬುರಗಿ: ನಗರದ ತಾಜ ಸುಲ್ತಾನಪುರ ಸಿಮಾಂತರದಲ್ಲಿ ಇಗಡ್ಡೆಪ್ಪ ಮುತ್ಯಾನ ಗುಡಿಯ ಹತ್ತಿರ ಕೈಯಲ್ಲಿ ಮಾರಕಾಸ್ತ್ರಗಳ ಮೂಲಕ ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಸವ ನಗರ ನಿವಾಸಿ ಪ್ರಶಾಂತ ಪರಶ್ಯಾ ರಜನಿಕಾಂತ ಐಗೋಳೆ, ಸುಂದರ ನಗರ ನಿವಾಸಿ ಅಭೀಷೇಕ ಸೋಮಣ್ಣಾ ರಾಜೋಳ ಡಬರಾಬಾದ ಆಶ್ರಯ ಕಾಲನಿಯ ಶಿವಾನಂದ ಬಾಬುರಾವ ಔಪಂಟಗಿಮ, ಸುವರ್ಣಾ ನಗರದ ಚಂದ್ರಾಮ ಸಿದ್ಧಪ್ಪ ಮ್ಯಾದರ ಹಾಗೂ ಫೀಲ್ಜರಬೇಡ ಅಶ್ರಯ ಕಾಲನಿಯ ವಿಜಯ ಸಂಜು ಬಂಧಿತ ಆರೋಪಿಗಳು.
ಪೊಲೀಸ ಆಯುಕ್ತರಾದ ಎನ್. ಸತೀಶ್ ಕುಮಾರ, ಐ.ಪಿ.ಸಿ. ಡಿ.ಸಿ.ಪಿ. (ಕಾ.ಸು.) ಕಲಬುರಗಿ ನಗರ, ಡಿ. ಕಿಶೋರಬಾಬು ಅವರ ಮಾರ್ಗದರ್ಶನದ ಆಶೋಕ ನಗರ ಪೊಲೀಸ್ ಪಿ.ಎಸ್.ಐ (ಕಾ.ಸು.) ವಾಹೀದ ಹುಸೇನ ಕೊತ್ವಾಲ್, ರೌಡಿ ನಿಗ್ರಹ ದಳದ ಸಿಬ್ಬಂದಿ ತೌಶೀಫ್, ಶ್ರೀಶೈಲ್, ಬೀರಣ್ಣಾ, ಶಿವಾಸಂದ ಗೋಪಾಲ್, ಮಲ್ಲಿಕಾರ್ಜುನ ಜಾನಿ, ಈರಣ್ಣಾ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎರಡು ಚಾಕು. ಒಂದು ಬಡಿಗೆ, ಎರಡು ರಾಡು, ಒಂದು ಖಾರದ ಪಾಕೇಟ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಿರೋ ಹೊಂಡಾ ಮೋಟಾರ ಸೈಕಲ ಜಪ್ತಿ ಮಾಡಿ ಆರೋಪಿಗಳನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಶಾಂತ್ ಪರಶ್ಯ ಕುಖ್ಯಾತ ರೌಡಿ ಶೀಟರ ಅಗಿದ್ದು, ಇತನ ವಿರುದ್ಧ ಕಂಬರಗಿ ನಗರ ವಿವಿಧ ಶಾಣೆಗಳಲ್ಲಿ ಕೊಲೆ, ದರೋಡ, ಸುಲಿಗೆ, ಪ್ರಯತ್ನದಂತಹ ಒಟ್ಟು 17 ಪ್ರಕರಣಗಳು ದಾಖಲಾಗಿವೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…