ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಲಯದಲ್ಲಿ ಪರಮಪೂಜ್ಯ ಡಾ. ರಾಮರಾವ ಮಹಾರಾಜರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಶರಣಬಸಪ್ಪ ಬಿ ಹೊನ್ನಗೆಜ್ಜೆ ಅವರು ಡಾ. ರಾಮರಾವ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಇವರು ತುಂಬಾ ವಿಶಾಲ ಸ್ವಭಾವದವರು. ಯಾವುದೇ ಜಾತಿ ಭೇದವಿಲ್ಲದ ಕಷ್ಟ ಎಂದವರಿಗೆ ಸಹಾಯ ಹಸ್ತ ತೋರುವಂತ ವ್ಯಕ್ತಿಯನ್ನು ನಾನು ನಿಕಟದಿಂದ ನೋಡಿದ್ದೇನೆ. ಇಂತ ಸ್ವಭಾವದ ವ್ಯಕ್ತಿ ಸಿಗುವುದು ವಿರಳ, ಇವರ ಅಗಲಿಕೆ ನಮಗೆ ತಡೆಯಲಾರದಷ್ಟು ನೋವು ತಂದಿದೆ ಎಂದು ಸಂತಾಪ ಸೂಚಿಸಿದರು.
ಸ್ನಾತಕ ವಿದ್ಯಾರ್ಥಿನಿಯಾದ ಕು. ಆರತಿ ಕೂಡ ಇವರು ಬಂಜಾರ ಜಾತಿಗೆ ಸೇರಿದವರಾದರು ಯಾವುದೇ ಜಾತಿ ಭೇದವಿಲ್ಲದೆ ಪ್ರತಿಯೊಬ್ಬರಿಗೂ ನಿಕಟದಿಂದ ಪ್ರೀತಿ ಕಾಳಜಿಯನ್ನು ತೋರಿಸುವಂಥ ಸರಳ ಸಜ್ಜನ ವ್ಯಕ್ತಿಯನ್ನು ಕಳೆದು ಕೊಂಡ ನಾವು ಇಂದು ಅನಾಥರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಅಧ್ಯಕ್ಷೆ ಸುಷ್ಮಾವತಿ ಹೊನ್ನಗೆಜ್ಜೆ, ಪ್ರಾಂಶುಪಾಲ ಶರಣಬಸಪ್ಪ ಬಿ ಹೊನ್ನಗೆಜ್ಜೆ, ಸಿಬ್ಬಂದಿಗಳಾದ ಶಾಂತಲಾ ಎಂ ನಂದರಗಿ, ಸುಜಾತಾ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರಾದ ಕು.ಆರತಿ, ಕು. ಅನಿತಾ, ಕು.ಹರಿಶ್ಚಂದ್ರ, ಕು. ಶಿವಕುಮಾರ ಇದ್ದರು.
ಕಲಬುರಗಿ: ಇಂದು ಜಿಲ್ಲೆಯ ಅಂಧ ಬಾಲಕರ ಸಕಾ೯ರಿ ಶಾಲೆಗೆ ಹೊಸ ಕಟ್ಟಡದ ನಿಮಾ೯ಣ ಕಾಯ೯ಕ್ಕೆ ಸಂಬಂಧಿಸಿದಂತೆ KRIDL ENGINEERS ರವರೊಂದಿಗೆ…
ಜಿಲ್ಲಾಧಿಕಾರಿಗಳಿಂದ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ…
ಕಲಬುರಗಿ: ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹೆಕ್ಕಿ ತೆಗೆದ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯದ ಪಿತಾಮಹ ಎಂದು ಮುಖ್ಯಮಂತ್ರಿಗಳ…
ಕಲಬುರಗಿ: ಸ್ಥಳೀಯ ಕೆಬಿಎನ್ ವಿವಿಯ ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನವನ್ನು ಆಚರಿಸಲಾಯಿತು. ರೇಡಿಯೋ ಡಿಗ್ನೋಸಿಸ ವಿಭಾಗದ ಮಾಜಿ ಮುಖಸ್ಥ ಡಾ.…
ಕಲಬುರಗಿ : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ…
ಕಲಬುರಗಿ: ಕಂದಾಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ನೂತನ 18 ತಾಲೂಕು ಕೇಂದ್ರಗಳಲ್ಲಿ ಆಡಳಿತ ವಿಧಾನಸೌಧಗಳನ್ನು ನಿರ್ಮಿಸಲು ತಲಾ…