ಡಾ. ರಾಮರಾವ ಮಹಾರಾಜರರಿಗೆ ಶ್ರದ್ಧಾಂಜಲಿ

0
55

ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಲಯದಲ್ಲಿ ಪರಮಪೂಜ್ಯ ಡಾ. ರಾಮರಾವ ಮಹಾರಾಜರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಶರಣಬಸಪ್ಪ ಬಿ ಹೊನ್ನಗೆಜ್ಜೆ ಅವರು ಡಾ. ರಾಮರಾವ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಇವರು ತುಂಬಾ ವಿಶಾಲ ಸ್ವಭಾವದವರು. ಯಾವುದೇ ಜಾತಿ ಭೇದವಿಲ್ಲದ ಕಷ್ಟ ಎಂದವರಿಗೆ ಸಹಾಯ ಹಸ್ತ ತೋರುವಂತ ವ್ಯಕ್ತಿಯನ್ನು ನಾನು ನಿಕಟದಿಂದ ನೋಡಿದ್ದೇನೆ. ಇಂತ ಸ್ವಭಾವದ ವ್ಯಕ್ತಿ ಸಿಗುವುದು ವಿರಳ, ಇವರ ಅಗಲಿಕೆ ನಮಗೆ ತಡೆಯಲಾರದಷ್ಟು ನೋವು ತಂದಿದೆ ಎಂದು ಸಂತಾಪ ಸೂಚಿಸಿದರು.

Contact Your\'s Advertisement; 9902492681

ಸ್ನಾತಕ ವಿದ್ಯಾರ್ಥಿನಿಯಾದ ಕು. ಆರತಿ ಕೂಡ ಇವರು ಬಂಜಾರ ಜಾತಿಗೆ ಸೇರಿದವರಾದರು ಯಾವುದೇ ಜಾತಿ ಭೇದವಿಲ್ಲದೆ ಪ್ರತಿಯೊಬ್ಬರಿಗೂ ನಿಕಟದಿಂದ ಪ್ರೀತಿ ಕಾಳಜಿಯನ್ನು ತೋರಿಸುವಂಥ ಸರಳ ಸಜ್ಜನ ವ್ಯಕ್ತಿಯನ್ನು ಕಳೆದು ಕೊಂಡ ನಾವು ಇಂದು ಅನಾಥರಾಗಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾಲಯದ ಅಧ್ಯಕ್ಷೆ ಸುಷ್ಮಾವತಿ ಹೊನ್ನಗೆಜ್ಜೆ, ಪ್ರಾಂಶುಪಾಲ ಶರಣಬಸಪ್ಪ ಬಿ ಹೊನ್ನಗೆಜ್ಜೆ, ಸಿಬ್ಬಂದಿಗಳಾದ ಶಾಂತಲಾ ಎಂ ನಂದರಗಿ, ಸುಜಾತಾ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರಾದ ಕು.ಆರತಿ, ಕು. ಅನಿತಾ, ಕು.ಹರಿಶ್ಚಂದ್ರ, ಕು. ಶಿವಕುಮಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here