ಬಿಸಿ ಬಿಸಿ ಸುದ್ದಿ

ಜಗತ್ತಿನಲ್ಲಿ ಜಾತಿಯಿಂದ ಅಳೆಯಲಾಗದ ವಿಷಯ ಎಂದರೆ ವಿದ್ಯೆ ಒಂದೆ:ಶಾಸಕ ರಾಜುಗೌಡ

ಸುರಪುರ: ಜಗತ್ತಿನಲ್ಲಿ ಎಲ್ಲಾ ವಿಷಯಗಳಿಗೂ ಇಂದು ಜಾತಿ ಪರಿಗಣನೆಯಾಗುತ್ತಿದೆ.ಆದರೆ ಜಾತಿಯಿಂದ ಅಳೆಯಲಾಗದ ಒಂದೆ ಸಂಗತಿ ಎಂದರೆ ವಿದ್ಯೆ ಮಾತ್ರ.ಅಂತಹ ವಿದ್ಯಾರ್ಥಿಗಳಿಗೆ ಇಂದು ಸನ್ಮಾನಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದುಶಾಸಕ ಹಾಗು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರೀ ಮಹರ್ಷಿ ಭಗೀರಥ ಉಪ್ಪಾರ ಸಮಾವೇಶ ಹಾಗು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದು ತಾವೆಲ್ಲರು ಬಯಸುತ್ತಿರುವಂತೆ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನನ್ನ ವಿರೋಧವಿಲ್ಲ.ನಾನು ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉಪ್ಪಾರ ಸಮಾಜ ಎಸ್ಟಿಗೆ ಸೇರಿಸಲು ಮನವಿ ಮಾಡಿದ್ದು,ಯಾವುದೇ ಸಮಾಜವನ್ನು ಎಸ್ಟಿಗೆ ಸೇರಿಸಲು ಆದರೆ ಒಳ ಮೀಸಲಾತಿ ಜಾರಿಗೊಳಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಉಪ್ಪಾರ ಸಮಾಜದ ಸ್ವಾಮೀಜಿಗಳಾದ ದೇವದುರ್ಗ ತಾಲೂಕಿನ ಮಲದಕಲ್ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರುಗಳು ಮಾತನಾಡಿ,ಇಂದು ಜಗತ್ತನ್ನು ಜ್ಞಾನ ಆಳುತ್ತಿದೆ.ಅಂತಹ ಜ್ಞಾನವನ್ನು ಎಲ್ಲರಿಗೂ ಅವಶ್ಯವಾಗಿದೆ.ಭಗೀರಥ ಸಮಾಜದ ಎಲ್ಲರು ನಿಮ್ಮ ಮಕ್ಕಳಿಗೆ ಉನ್ನತವಾದ ಶಿಕ್ಷಣವನ್ನು ಕೊಡಿಸಿ,ಕೇವಲ ಮೆಕಾಲೆ ಶಿಕ್ಷಣದಿಂದ ಹಣ ಕೆಲಸ ದೊರೆಯುತ್ತದೆ,ಆದರೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಮುಖ್ಯವಾಗಿದೆ, ಸಂಸ್ಕಾರವಂತ ಮಕ್ಕಳು ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಜೀವಪ್ಪ ಮುತ್ಯಾ ಚಿಕ್ಕನಹಳ್ಳಿ ರಾಮಣ್ಣ ಮುತ್ಯಾ ಚಂದಲಾಪುರ ಸಮಾಜದ ಮುಖಂಡರಾದ ಶ್ರೀನಿವಾಸ ಅಮ್ಮಾಪುರ ಗೋಪಣ್ಣ ದೊಡ್ಮನಿ ವೆಂಕಟೇಶ ನೀರಡಗಿ ಮೌನೇಶ ಎಸ್.ಡಿ.ಗೋನಾಲ ದೇವಿಂದ್ರಪ್ಪ ಸಾಹುಕಾರ ಹಾಗು ದೊಡ್ಡ ದೇಸಾಯಿ ದೇವರಗೋನಾಲ ಬಸನಗೌಡ ಅಳ್ಳಿಕೋಟಿ ಸಿದ್ದನಗೌಡ ಕರಿಬಾವಿ ಸಣ್ಣ ದೇಸಾಯಿ ಮೇಲಪ್ಪ ಗುಳಗಿ ಭೀಮಣ್ಣ ಚಿಕ್ಕನಹಳ್ಳಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಶಂಭುಲಿಂಗ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಈಶ್ವರ ಶಹಾಪುರಕರ್ ನುಡಿನಮನ ಸಲ್ಲಿಸಿದರು,ಶರಣು ಮಾಲಗತ್ತಿ ಸ್ವಾಗತ ಗೀತೆ ಹಾಡಿದರು,ಅನಿಲ ಕುಮಾರ ಶಿಕ್ಷಕ ಸ್ವಾಗತಿಸಿದರು,ಶರಣು ದೇವರಗೋನಾಲ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಂಕರ ಬಡಿಗೇರ ದೇವಿಂದ್ರಕುಮಾರ ಅಮ್ಮಾಪುರ ವಾಸುದೇವ ಸಮೇದ ಗೋವಿಂದರಾಜ ಶಹಾಪುರಕರ್ ಯಂಕಣ್ಣ ಗದ್ವಾಲ ಧರಿಯಪ್ಪ ಬೂದಿಹಾಳ ರಮೇಶ ಶಹಾಪುರಕರ್ ಚಿದಾನಂದ ಪೇಠ ಅಮ್ಮಾಪುರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

emedialine

Recent Posts

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

53 seconds ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

4 mins ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

11 mins ago

ಸಮಸ್ತ ಲಿಂಗಾಯತರ ಪ್ರಗತಿಗೆ ಲಿಂಗಾಯತ ಸ್ವತಂತ್ರ ಧರ್ಮ ಅಗತ್ಯ: ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…

1 hour ago

ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯ ಶ್ರೀ ಪುರಸ್ಕೃತ ಡಾ. ಶರಣಬಸಪ್ಪ ಕ್ಯಾತನಾಳ ಪುರಸ್ಕಾರ

ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…

2 hours ago

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

4 hours ago