ಜಗತ್ತಿನಲ್ಲಿ ಜಾತಿಯಿಂದ ಅಳೆಯಲಾಗದ ವಿಷಯ ಎಂದರೆ ವಿದ್ಯೆ ಒಂದೆ:ಶಾಸಕ ರಾಜುಗೌಡ

0
47

ಸುರಪುರ: ಜಗತ್ತಿನಲ್ಲಿ ಎಲ್ಲಾ ವಿಷಯಗಳಿಗೂ ಇಂದು ಜಾತಿ ಪರಿಗಣನೆಯಾಗುತ್ತಿದೆ.ಆದರೆ ಜಾತಿಯಿಂದ ಅಳೆಯಲಾಗದ ಒಂದೆ ಸಂಗತಿ ಎಂದರೆ ವಿದ್ಯೆ ಮಾತ್ರ.ಅಂತಹ ವಿದ್ಯಾರ್ಥಿಗಳಿಗೆ ಇಂದು ಸನ್ಮಾನಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದುಶಾಸಕ ಹಾಗು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರೀ ಮಹರ್ಷಿ ಭಗೀರಥ ಉಪ್ಪಾರ ಸಮಾವೇಶ ಹಾಗು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದು ತಾವೆಲ್ಲರು ಬಯಸುತ್ತಿರುವಂತೆ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನನ್ನ ವಿರೋಧವಿಲ್ಲ.ನಾನು ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉಪ್ಪಾರ ಸಮಾಜ ಎಸ್ಟಿಗೆ ಸೇರಿಸಲು ಮನವಿ ಮಾಡಿದ್ದು,ಯಾವುದೇ ಸಮಾಜವನ್ನು ಎಸ್ಟಿಗೆ ಸೇರಿಸಲು ಆದರೆ ಒಳ ಮೀಸಲಾತಿ ಜಾರಿಗೊಳಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಉಪ್ಪಾರ ಸಮಾಜದ ಸ್ವಾಮೀಜಿಗಳಾದ ದೇವದುರ್ಗ ತಾಲೂಕಿನ ಮಲದಕಲ್ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರುಗಳು ಮಾತನಾಡಿ,ಇಂದು ಜಗತ್ತನ್ನು ಜ್ಞಾನ ಆಳುತ್ತಿದೆ.ಅಂತಹ ಜ್ಞಾನವನ್ನು ಎಲ್ಲರಿಗೂ ಅವಶ್ಯವಾಗಿದೆ.ಭಗೀರಥ ಸಮಾಜದ ಎಲ್ಲರು ನಿಮ್ಮ ಮಕ್ಕಳಿಗೆ ಉನ್ನತವಾದ ಶಿಕ್ಷಣವನ್ನು ಕೊಡಿಸಿ,ಕೇವಲ ಮೆಕಾಲೆ ಶಿಕ್ಷಣದಿಂದ ಹಣ ಕೆಲಸ ದೊರೆಯುತ್ತದೆ,ಆದರೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಮುಖ್ಯವಾಗಿದೆ, ಸಂಸ್ಕಾರವಂತ ಮಕ್ಕಳು ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗು ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಜೀವಪ್ಪ ಮುತ್ಯಾ ಚಿಕ್ಕನಹಳ್ಳಿ ರಾಮಣ್ಣ ಮುತ್ಯಾ ಚಂದಲಾಪುರ ಸಮಾಜದ ಮುಖಂಡರಾದ ಶ್ರೀನಿವಾಸ ಅಮ್ಮಾಪುರ ಗೋಪಣ್ಣ ದೊಡ್ಮನಿ ವೆಂಕಟೇಶ ನೀರಡಗಿ ಮೌನೇಶ ಎಸ್.ಡಿ.ಗೋನಾಲ ದೇವಿಂದ್ರಪ್ಪ ಸಾಹುಕಾರ ಹಾಗು ದೊಡ್ಡ ದೇಸಾಯಿ ದೇವರಗೋನಾಲ ಬಸನಗೌಡ ಅಳ್ಳಿಕೋಟಿ ಸಿದ್ದನಗೌಡ ಕರಿಬಾವಿ ಸಣ್ಣ ದೇಸಾಯಿ ಮೇಲಪ್ಪ ಗುಳಗಿ ಭೀಮಣ್ಣ ಚಿಕ್ಕನಹಳ್ಳಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಶಂಭುಲಿಂಗ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಈಶ್ವರ ಶಹಾಪುರಕರ್ ನುಡಿನಮನ ಸಲ್ಲಿಸಿದರು,ಶರಣು ಮಾಲಗತ್ತಿ ಸ್ವಾಗತ ಗೀತೆ ಹಾಡಿದರು,ಅನಿಲ ಕುಮಾರ ಶಿಕ್ಷಕ ಸ್ವಾಗತಿಸಿದರು,ಶರಣು ದೇವರಗೋನಾಲ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಂಕರ ಬಡಿಗೇರ ದೇವಿಂದ್ರಕುಮಾರ ಅಮ್ಮಾಪುರ ವಾಸುದೇವ ಸಮೇದ ಗೋವಿಂದರಾಜ ಶಹಾಪುರಕರ್ ಯಂಕಣ್ಣ ಗದ್ವಾಲ ಧರಿಯಪ್ಪ ಬೂದಿಹಾಳ ರಮೇಶ ಶಹಾಪುರಕರ್ ಚಿದಾನಂದ ಪೇಠ ಅಮ್ಮಾಪುರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here