ಶಹಾಬಾದ:ಬೆಳಗಾವಿ ಜಿಲ್ಲೆ ರಾಮಗುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿ ಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ನಗರದ ಅಖಿಲ ಭಾರತ ವೀರಶೈವ ಮಹಾಸಭಾ, ಹಳೆಶಹಾಬಾದ ವೀರಶೈವ ಸಮಾಜ ಹಾಗೂ ಬಸವಾಭಿಮಾನಿಗಳ ವತಿಯಿಂದ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿಲಾಯಿತು.
ಇಡೀ ಮನುಜ ಕಲಕ್ಕೆ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದ ಮತ್ತು ಮಾನವೀಯತೆ ಸಂದೇಶ ಸಾರಿದ ಬಸವಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿರುವುದು ನಿಜಕ್ಕೂ ಖಂಡನಾರ್ಹವಾದುದು. ಇಡೀ ವಿಶ್ವವೇ ಬಸವಣ್ಣನವರ ವಿಚಾರಗಳನ್ನು ಒಪ್ಪಿಕೊಂಡಿದೆ.ಅಲ್ಲದೇ ಇಂಗ್ಲೇಡ್ನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪನೆ ಮಾಡಿ ಅವರನ್ನು ಗೌರವಿಸಲಾಗಿದೆ.ಆದರೆ ನಮ್ಮ ರಾಜ್ಯದಲ್ಲಿ ಇಂತಹ ಮಹಾ ಮಾನವತವಾದಿ, ವಿಶ್ವಗುರು ಬಸವಣ್ಣನವರ ಬಗ್ಗೆ ತಿಳಿಯದೇ ಈ ರೀತಿಯ ಕೆಲಸ ಮಾಡಿರುವುದು ಸರಿಯಿಲ್ಲ.ಕೂಡಲೇ ಪ್ರತಿಮೆಗಳ ಬಳಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು.ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.ಅಲ್ಲದೇ ಮೂರ್ತಿಯನ್ನು ಪುನರ್ ಸ್ಥಾಪನೆ ಮಾಡಬೇಕು. ಇಲ್ಲದಿದ್ದರೇ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿಜಯಕುಮಾರ ಮುಟ್ಟತ್ತಿ,ಶಿವಕುಮಾರ ಇಂಗಿನಶೆಟ್ಟಿ, ಅಣವೀರ ಇಂಗಿನಶೆಟ್ಟಿ,ಅರುಣಕುಮಾರ ಪಟ್ಟಣಕರ್,ಸೂರ್ಯಕಾಂತ ಕೋಬಾಳ, ಮಲ್ಲಿನಾಥ ಗಚ್ಚಿನಮಠ,ಶಂಕರ ಕುಂಬಾರ, ಈಶ್ವರ ಇಂಗಿನಶೆಟ್ಟಿ, ವಿಶ್ವರಾಧ್ಯ ಬೀರಾಳ, ಶರಣಬಸಪ್ಪ ಜೇರಟಗಿ, ಅಣ್ಣಪ್ಪ ದಸ್ತಾಪೂರ,ಸಾಹೇಬಗೌಡ ಬೋಗುಂಡಿ, ನಾಗಣ್ಣ ರಾಂಪೂರೆ, ಸೋಮಶೇಖರ ನರಿಬೋಳ, ಸೋಮಶೇಖರ ಅಣಬಿ, ವಿರೇಶ ಬಂದಳ್ಳಿ, ಚನ್ನಪ್ಪ ಕುಂಬಾರ, ಶಾಂತಯ್ಯಸ್ವಾಮಿ, ರೇವಣಸಿದ್ದಪ್ಪ,ಸಂಗಮೇಶ ಪಟ್ಟೇದಾರ, ಆನಂದ ಸೂಲಹಳ್ಳಿ, ರಾಜಶೇಖರ ಬೆಳಗುಂಪಾ, ರಾಜು ಕೋಬಾಳ,ಮಹಾರುದ್ರ ಇಂಗಿನಶೆಟ್ಟಿ, ಶಿವಪ್ರಸಾದ ಸೇರಿದಂತೆ ಇತರರು ಇದ್ದರು.
ಹಳೆ ಶಹಾಬಾದ: ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಗಿರಿಮಲ್ಲಪ್ಪ ವಳಸಂಗ, ವೈಜನಾಥ ಹುಗ್ಗಿ, ಮಲ್ಲಿಕಾರ್ಜುನ ವಾಲಿ, ಬಸವರಾಜ ತರನಳ್ಳಿ, ಕುಪೇಂದ್ರ ತುಪ್ಪದ, ಚನ್ನೂ ಸಿನ್ನೂರ, ಕುಪೇಂದ್ರ ತುಪ್ಪದ, ಸಂತೋಷ ಪಾಟೀಲ, ನಿರಂಜನ ತುಪ್ಪದ ಸೇರಿದಮರೆ ಅನೇಕರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…