ಕರವೇ ಕನ್ನಡಿಗ ಬಣ ಮರಾಠರಿಗೆ ಅಭಿವೃದ್ಧಿ ನಿಗಮಕ್ಕೆ ಬೆಂಬಲ

ಕಲಬುರಗಿ: ಕರ್ನಾಟಕ ರಾಜ್ಯದ ಮರಾಠ ಅಭಿವೃದ್ಧಿ ನಿಗಮ ಮಂಡಳಿ ಮುಂದುವರೆಸಲು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಮರಾಠಿಗರ ಸೇವೆ ಅನನ್ಯವಾಗಿದೆ. ಕನ್ನಡ ಮರಾಠಿಗರು ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಅಭಿವೃದ್ಧಿಗೆ ಮೂಂಚುಣಿಯಲ್ಲಿದ್ದಾರೆ. ಛತ್ರಪತಿ ಶಾಹು ಮಹಾರಾಜರು ದಲಿತರಿಗೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ರಿಗೆ ಸಾಮಾಜಿಕ ನ್ಯಾಯದಡಿ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ನೀಡಿದ ಪ್ರಥಮ ಅರಸರಾಗಿದ್ದಾರು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಅಂಬೇಡ್ಕರ್ ಅವರನ್ನು ಕಳಿಸಿದ್ದು ಇತಿಹಾಸವಿದೆ. ಸಾಮಾಜಿಕ ಕಂದಾಚಾರಗಳನ್ನು ಹೊಡದೂಡಿಸಿ ಸಮಾನ ಸಮಾಜ ನಿರ್ಮಿಸುವಲ್ಲಿ ಶಾಹು ಮಹಾರಾಜರ ಪಾತ್ರ ಪ್ರಮುಖವಾಗಿದೆ. ಕನ್ನಡ ಸಾಹಿತ್ಯ ಮತ್ತು ಭಾಷೆ ಬೆಳೆಸುವಲ್ಲಿ ಮರಾಠಿಗರ ಪಾಲು ಮಹತ್ವದಾಗಿದೆ ಎಂದರು.

ಭಾರತ ಬಹುಭಾಷಿಕರ, ಬಹುಧರ್ಮಿಯರ, ಬಹು ಸಂಸ್ಕ್ರತಿಯ ದೇಶವಾಗಿದೆ. ನಮ್ಮ ನಾಡಿನ ಮರಾಠಿಗರು ಕನ್ನಡಿಗರು, ಭಾಷೆ ಮತ್ತು ಸಂಸ್ಕ್ರತಿಯ ವಿಭಜನೆಯಿಂದ ದೇಶದ ಭಾವೈಕತೆಗೆ ಧಕ್ಕೆಯಾಗುತ್ತದೆ. ಆರ್ಥಿಕವಾಗಿ ಅಸಹಾಯಕರಾದ ಮರಾಠಿಗರಿಗೆ ಈ ನಿಗಮದಿಂದ ಅವರ ಜೀವನ ಸದೃಡಗೊಳ್ಳುತ್ತದೆ ಎಂದರು.

ಕನ್ನಡದ ನೆಲ,ಜಲ,ಭಾಷೆಗಾಗಿ ಕರ್ನಾಟಕದಲ್ಲಿದ್ದ ಮರಾಠಿಗರು ಯಾವತ್ತೂ ನಾಡಿಗಾಗಿ ದುಡಿದವರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಾರ್ವಜನಿಕ ರಜೆ ಮಾಡಿ ಆಚರಿಸುತ್ತಿರುವುದು ಸಹೋದರತೆಗೆ ಉದಾಹರಣೆಯಾಗಿದೆ. ಗಡಿ ಪ್ರದೇಶಗಳಲ್ಲಿ ಅನೇಕ ಕನ್ನಡ ಶಾಲೆಗಳು ಮಹಾರಾಷ್ಟ್ರದಿಂದ ಅನುದಾನ ಪಡೆದುಕೊಂಡಿವೆ. ಛತ್ರಪತಿ ಶಿವಾಜಿ ಮಹಾರಾಜರ ಕುಟುಂಬಸ್ಥರು ಕರ್ನಾಟಕದವರು ಎಂಬ ಸತ್ಯ ಸಂಗತಿ ಎಲ್ಲರಿಗೂ ಗೊತ್ತಾಗಲಿ. ಶಿವಾಜಿ ಮಹಾರಾಜರು ಎಲ್ಲ ಧರ್ಮಿಯರನ್ನು ಪ್ರೀತಿ , ಮಮತೆಯಿಂದ ಕಂಡು ಭಾವೈಕ್ಯತೆ ಜೀವನ ಸಾಗಿಸಿ ದೇಶಕ್ಕೆ ಮಾದರಿ ಸಾಮ್ರಾಜ್ಯ ಕಟ್ಟಿದವರು ಎಂದರು.

ಪಕ್ಷಾತೀತ ಮರಾಠ ಅಭಿವೃದ್ಧಿ ನಿಗಮಕ್ಕೆ ಕರವೇ ( ಕನ್ನಡಿಗರ ಬಣ) ಬೆಂಬಲ ನೀಡುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ತಿಳಿಸಿದ್ದಾರೆ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

5 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

8 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

13 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

15 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420