ಬಿಸಿ ಬಿಸಿ ಸುದ್ದಿ

ಶೋಷಿತ ಸಮುದಾಯಗಳುಸಂವಿಧಾನದ ಸಂರಕ್ಷಣೆಗೆ ಮುಂದಾಗಬೇಕು: ನಿಜಲಿಂಗದೊಡ್ಮನಿ

ಜೇವರ್ಗಿ: ದೇಶದ ಶೋಷಿತ ಸಮುದಾಯಗಳು ಒಂದಾಗುವುದರ ಮೂಲಕ ಸಂವಿದಾನದ ಸಂರಕ್ಷಣೆಗೆ ಮುಂದಾಗಬೇಕು ಎಂದು ಸೊನ್ನ ಎಸ್ ಜಿ ಎಸ್ ವಿ ಪಪೂ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಕರೆ ನೀಡಿದರು.

ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಭಾರತ ಬಹುತ್ವದ ದೇಶವಾಗಿದೆ. ಎಲ್ಲಾ ಜಾತಿ, ವರ್ಗಗಳಿಗೆ ಸರಿಸಮನಾದ ಹಕ್ಕುಗಳು ನೀಡಲಾಗಿದೆ. ಸಾಮಾಜಿಕ, ಆರ್ಥಿಕವಾಗಿ ದಲಿತರು ಪ್ರಭಲರಾಗಬೇಕು. ಈ ದೇಶದ ಹಿತಕ್ಕಾಗಿ ಡಾ ಬಿ ಆರ್ ಅಂಬೇಡ್ಕರ್ ಅವರ ಶ್ರಮ ಅಪಾರವಾಗಿದೆ. ದೇಶದ ಸಮಸ್ತ ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಬಾಬಾ ಸಾಹೇಬರು ಮಾಡಿದ್ದಾರೆ. ಖಡ್ಗದಿಂದ ಮಾಡದ ಕೆಲಸವನ್ನು ಪೆನ್ನಿನಿಂದ ಮಾಡಿದ್ದಾರೆ. ಇಡೀ ವಿಶ್ವದ ಬಹುತೇಕ ಸಂವಿಧಾನವನ್ನು ಅಧ್ಯಯನ ಮಾಡಿದ ಬಾಬಾ ಸಾಹೇಬರು ಸರ್ವಶ್ರೇಷ್ಠ ಸಂವಿಧಾನ ರಚಿಸಿದ್ದಾರೆ ಎಂದರು.

ಈ ವೇಳೆ ಬಸವಕಲ್ಯಾಣದ ದಮ್ಮನಾಗ ಭಂತೇಜಿ, ಪರಸಭೆ ಮುಖ್ಯಾಧಿಕಾರಿ ಲಕ್ಷ್ಮೀಶ, ಮರೆಪ್ಪ ಬಡಿಗೇರ, ಭೀಮರಾಯ ನಗನೂರ, ಪುಂಡಲಿಕ ಗಾಯಕವಾಡ, ಮಲ್ಲಣ ಕೊಡಚಿ, ಮರೆಪ್ಪ ಕೂಡಲಿಗಿ, ದವಲಪ್ಪ ಮದನ, ಪಂಡಿತ ಮದಗುಣಕಿ, ಸುಭಾಷ್ ಚನ್ನೂರ, ಜೆಟ್ಟೆಪ್ಪ ಕೊಬ್ಬಿನ್, ನಿಜಲಿಂಗ ದೊಡಮನಿ, ಶರಣಬಸವ ಕಲ್ಲಾ, ಶಿವುಬಾಯಿ ಕೊಂಬಿನ್, ಗಂಗಾಬಾಯಿ ಜಟ್ನಾಳ, ಶ್ರೀಹರಿ ಕರಕಿಹಳ್ಳಿ, ರವಿ ಕುರಳಗೇರಾ, ಶಾಂತಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಕೆಲ್ಲೂರ, ಸಿದ್ರಾಮ ಯಳಸಂಗಿ, ಕರೆಪ್ಪ ಹಿಪ್ಪರಗಿ, ರಾಜಶೇಖರ ಶಿಲ್ಪಿ, ಗೊಲ್ಲಾಳಪ್ಪ ಯಾತನೂರ, ಶಿವಶರಣ ಮಾರಡಗಿ, ಮಲ್ಲಮ್ಮ ಕೊಬ್ಬನ್, ಜಗದೇಶ ಜಟ್ನಾಕರ್,ದೇವಿಂದ್ರ ವರ್ಮಾ, ಶರಣು ಬಡಿಗೇರಾ ಇದ್ದರು.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

1 hour ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

1 hour ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

4 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

4 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

5 hours ago