#ಸಿಡಿದೆದ್ದ ರೈತ

ಪಂಜಾಬಿನ ರಣರಗದಲ್ಲಿ ರೈತ ಕಹಳೆ
ಅನ್ನದಾತನ ಎದೆ ಸೀಳಲು ತೂರಿಬಂದಿವೆ
ಸರಕಾರದ ಬಂದೂಕಿನ ಗುಂಡು ಮೊಳೆ
ಸಿಡಿಮದ್ದುಗಳಿಗೆ ಹೆದರಿ ಹಿಂಜರಿಯದೆ
ರಕ್ತದೆಣ್ಣೆಯಲ್ಲಿ ಹಚ್ಚಿದ್ದಾರವರು ಹೋರಾಟದ ದೀಪ
ಆರದಿರಲಿ ಉರಿಯುತ್ತಿರಲಿ ಹೀಗೆ ಕ್ರಾಂತಿಯ ಜ್ವಾಲೆ….

ಸಂಭ್ರಮದ ದೀಪಾವಳಿಯಲ್ಲ ಇದು
ಆಳುವ ಸರ್ಕಾರಗಳ ರಕ್ತದೋಕುಳಿ
ಅನ್ನ ಉತ್ತಿದವರ ಹೆಣ ಉರುಳಿಸಲು ನಿಂತಾರವರು
ಸಾವು ಬೆನ್ನಿಗೆ ಕಟ್ಟಿ ಮಾಡಿ ಮುಗಿಲೆತ್ತರಕ್ಕೆ ಮುಷ್ಠಿ ಕೂಗ್ಯಾರಿವರು
ಆರದಿರಲಿ ಉರಿಯುತ್ತಿರಲಿ ಹೀಗೆ ಕ್ರಾಂತಿಯ ಜ್ವಾಲೆ….

ಜಲಫಿರಂಗಿಯ ಒತ್ತಡದಲ್ಲೂ ಅವರದ್ದು ದಿಟ್ಟ ನಡಿಗೆ
ಗುಂಡುಗಳು ತೂರಿ ಬಂದರೂ
ಹೆದರದೆ ನುಗ್ಗಿ ಬಂದ ಧೀರರವರು
ಧಿಕ್ಕಾರದ ಘೋಷಣೆಯೇ ಶಕ್ತಿ ಅವರಿಗೆ
ನೀರಲಿ ನೆಂದರೂ ನಡುಗದೆ ಗುಡುಗಿದ ನೇಗಿಲ ಯೋಗಿಗಳು
ಹಚ್ಚಿದ್ದಾರೆ ಹೋರಾಟದ ಹಣತೆ
ಆರದಿರಲಿ ಉರಿಯುತ್ತಿರಲಿ ಹೀಗೆ ಕ್ರಾಂತಿಯ ಜ್ವಾಲೆ…

ಇಂದಲ್ಲ ನಾಳೆ ಸಾವು ಬಂದೇ ಬರುತ್ತದೆ
ಹಿಂದೆ ಸರಿಯುವ ಮಾತೇಕೆ ?
ಆಳುವವರ ರೂಪದಲ್ಲಿ ಮುಂದಿದ್ದಾರೆ ಶೋಷಕರು
ರಕ್ಷಣೆಯ ನೆಪದಲ್ಲಿ ಬೆವರಿನ ನೆತ್ತರು ಹೀರುವ ಖಾಕಿಗಳು
ಅನ್ಯಾಯ ಕೇಕೆ ಹಾಕುತ್ತಿರುವಾಗ ಅಂಜುವುದೇಕೆ ಅಳಕುವುದೇಕೆ ?
ನಿಮ್ಮ ದನಿಗೆ ನಮ್ಮ ದನಿಯ ಸೇರಿಸಿ ಸಿಡಿಯೋಣ
ಇತಿಹಾಸ ಬರೆದು ಹುತಾತ್ಮರಾಗೋಣ…

ಮಡಿವಾಳಪ್ಪ ಹೇರೂರ
ವಾಡಿ (ಜಂಕ್ಷನ್) 9845238667
ಕಲಬುರಗಿ ಜಿಲ್ಲೆ

emedialine

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

59 mins ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

13 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

15 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

15 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

15 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

16 hours ago