ಇಂದು ಜಗತ್ತಿಗೆ ಬೇಕಾಗಿರುವುದು ಬಸವಧರ್ಮ: ಗೋವಿಂದ ಕಾರಜೋಳ

ಬಸವಕಲ್ಯಾಣ: ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ ಬಸವಕಲ್ಯಾಣ ಆಶ್ರಯದಲ್ಲಿ ೪೧ ನೇ ಶರಣಕಮ್ಮಟ ಅನುಭವಮಂಟಪ ಉತ್ಸವ-೨೦೨೦ ರ ಭಾಗವಾಗಿ ಅನುಭವಮಂಟಪ: ಅಂದು-ಇಂದು ಮತ್ತು ಎಂದೆಂದೂ ವಿಷಯ ಕುರಿತಾಗಿ ಗೋಷ್ಠಿ-೧ ಆಯೋಜಿಸಲಾಗಿತ್ತು.

ಈ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಸ್ವಗುರು ಬಸವತಂದೆಯವರು ೧೨ನೇ ಶತಮಾನದಲ್ಲಿ ಜಾತಿ ಲಿಂಗಭೇದ ವಿರಹಿತವಾಗಿರುವ ಹೊಸಧರ್ಮವನ್ನು ಕೊಟ್ಟರು ಅದುವೇ ಬಸವ ಧರ್ಮ ಅನ್ನುವ ಲಿಂಗಾಯತ ಧರ್ಮ. ಇಂದು ಜಗತ್ತಿಗೆ ಬಸವಧರ್ಮ ಬೇಕಾಗಿದೆ. ಬಸವಾದಿ ಶರಣರ ವಚನಗಳಲ್ಲಿ ಅಡಗಿರುವ ತತ್ವಗಳನ್ನು ಇಂದು ಅಂತರಾಷ್ಟ್ರೀಯ ಮಟ್ಟದ ಯು.ಎನ್.ಓ ಸಂಸ್ಥೆಯನ್ನು ಒಪ್ಪಿಕೊಂಡು ಜಗತ್ತಿನಾದ್ಯಂತ ಆಚರಣೆಯಲ್ಲಿ ತರುವುದಕ್ಕಾಗಿ ಪ್ರಯತ್ನಶೀಲವಾಗಿದೆ. ಶರಣರ ಕಾಯಕ ಮತ್ತು ದಾಸೋಹ ತತ್ವಗಳು ವಿಶ್ವದ ಅಮೂಲ್ಯ ಕೊಡುಗೆಗಳಾಗಿವೆ. ಈ ಮೂಲಕ ಆರ್ಥಿಕ ಸಮಾನತೆ ತರುವಲ್ಲಿ ಶರಣರ ಕ್ರಾಂತಿ ಯಶಸ್ವಿಯಾಗಿದೆ ಆ ಮೂಲಕ ವಿಶ್ವದ ಪ್ರತಿಯೊಬ್ಬ ಮಾನವನಿಗೆ ಬೇಕಾದ ವಚನ ಸಾಹಿತ್ಯ ವಿಶ್ವಮಾನ್ಯವಾಗಿದೆ. ನಾವು ಬಸವಾದಿ ಶರಣರ ಚಿಂತನೆಗಳನ್ನು ನಂಮ್ಮಿಂದಲೇ ಆಚರಣೆಯಲ್ಲಿ ತರುವ ಮೂಲಕ ೯೦೦ ವರ್ಷಗಳ ನಂತರವಾದರು ಬಸವಣ್ಣನವರ ಕನಸಿನ ಸಮಾಜವನ್ನು ನಿರ್ಮಿಸಿದರೆ ಜಗತ್ತೇ ಬಸವಮಯವಾಗುತ್ತದೆ ಎಂದರು.

ಗೋಷ್ಠಿಯ ವಿಷಯ ಕುರಿತಾಗಿ ಖ್ಯಾತ ಚಲನಚಿತ್ರ ನಟ ಚೇತನಕುಮಾರ ಬೆಂಗಳೂರು ಇವರು ಶರಣರ ಕ್ರಾಂತಿಯ ನಾಲ್ಕು ಮೂಖ್ಯ ಉದ್ದೇಶಗಳನ್ನು ಕುರಿತು ಮಾತನಾಡಿದರು. ಒಂದು ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ರೀತಿ ಅನುಪಮವಾದದ್ದು. ೧೨ನೇ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಯಲ್ಲಿ ಭಾಗಿಯಾದ ಶರಣರು ಹಿಂದುಳಿದ ಶೋಷಿತ ವರ್ಗದಿಂದ ಬಂದಿದ್ದರು. ಅವರೆಲ್ಲರನು ಅಪ್ಪಿಕೊಂಡು ಸಮಾನತೆಯನ್ನು ಸಾರಿದರು. ಸಹಭೊಜನದ ಜೊತೆಗೆ ಸಹ ಜೀವನವನ್ನು ನಡೆಸಲಿಕ್ಕೆ ಶರಣರು ಮಾಡಿದ ಕ್ರಾಂತಿ ಅಪೂರ್ವವಾದದ್ದು. ಎರಡನೇಯದ್ದು ಶರಣರು ಲಿಂಗಭೇದದ ವಿರುದ್ಧ ಧ್ವನಿ ಎತ್ತಿದರು. ಹೆಣ್ಣು ಶುದ್ರ ಅಲ್ಲ, ರಕ್ಕಸಿ ಅಲ್ಲ, ಮಾಯೆ ಅಲ್ಲ ಪ್ರತ್ಯಕ್ಷ ಕಪೀಲ ಮಲ್ಲಿಕಾರ್ಜುನ ಎನ್ನುವ ಎತ್ತರಕ್ಕೆ ಶರಣರು ಲಿಂಗ ಸಮಾನತೆಯನ್ನು ನೀಡಿದರು.

ಮೂರನೆಯದ್ದು ದೇವ ಮತ್ತು ಭಕ್ತರ ನಡುವೆ ಇರುವ ಪೂರೋಹಿತ ಶಾಹಿಯನ್ನು ಕಿತ್ತು ಹಾಕಿ ದೇವರ ಜೋತೆಗೆ ಭಕ್ತನ ನೇರ ಸಂವಾದಕ್ಕೆ ಇಷ್ಟಲಿಂಗವನ್ನು ನೀಡಿದರು. ನಾಲ್ಕನೆಯದ್ದು ಶರಣರು ಜನಭಾಷೆಯಾಗಿರುವ ಕನ್ನಡದಲ್ಲಿ ವಚನಗಳನ್ನು ಬರೆಯುವ ಮೂಲಕ ದೇವ ಭಾಷೆಯಾಗಿರುವ ಸಂಸ್ಕೃತ ಭಾಷೆಯ ವರ್ಚಸ್ಸನ್ನು ನಿರಾಕರಿಸಿರು. ಅಂದಿನ ಕಾಲದಲ್ಲಿ ಇಂತಹ ಪರಿವರ್ತನೆ ತರುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಬಸವಾದಿ ಶರಣರು ಅನುಭವಮಂಟಪ ಮೂಲಕ ಸಮಾನತೆ ತತ್ವ ಜಾರಿಗೆ ತಂದು ಅಸ್ಪೃಶ್ಯತೆ ನಿರ್ಮೂಲನೆ ಮಾಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಅವರ ವಚನಗಳು ಮೂಢನಂಬಿಕೆ ನಿರ್ಮಿಸುವಲ್ಲಿ ಮತ್ತು ನಿಜವಾದ ದೇವರ ಕಲ್ಪನೆ ಕೊಡುವಲ್ಲಿ ಸಮರ್ಥವಾಗಿವೆ ಎಂದರು. ಶರಣು ವಿಶ್ವ ವಚನ ಫೌಂಡೇಷನ್ ಮೈಸೂರಿನ ಡಾ.ವಚನಕುಮಾರ ಸ್ವಾವಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ನುಡಿ ಉಳಿಸಿ ಬೆಳೆಸಿದ ಕೀರ್ತಿ ಡಾ.ಚನ್ನಬಸವ ಪಟ್ಟದ್ದೇವರ ಸಲ್ಲುತ್ತದೆ. ಅನುಭವಮಂಟಪ ನಿರ್ಮಿಸಿ ಆ ಮೂಲಕ ಶರಣ ಸಂಸ್ಕೃತಿ ಬೆಳೆಸಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಕಲುಬುರಗಿಯ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಗೋಷ್ಠಿ ಅಧ್ಯಕ್ಷತೆ ವಹಿಸಿ ಜನಕಲ್ಯಾಣದ ತಪೋಭೂಮಿಯಾಗಿ ಬಸವಕಲ್ಯಾಣವನ್ನು ಪರಿವರ್ತಿಸಿದ ಶರಣರ ಕಾರ್ಯ ಎಂದೆಂದಿಗೂ ಮರೆಯುವಂತಿಲ್ಲ. ಬದುಕಿನ ಸಾರ್ಥಕತೆಗೆ ವಚನಗಳು ದಾರಿದೀಪವಾಗಿವೆ. ಈ ವಚನಗಳ ಪರಂಪರೆ ಇನ್ನೂ ಮುಂದುರೆದಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಆ ನಿಟ್ಟಿನಲ್ಲಿ ಸಿದ್ಧಯ್ಯ ಪುರಾಣಿಕ ಮುಂತಾದವರನ್ನು ಸ್ಮರಿಸಬಹುದು. ನಾಡಿನ ಪ್ರತಿಯೊಂದು ಸಮುದಾಯದ ಜೊತೆಗೆ ಪ್ರೀತಿಯನ್ನು ಗಳಿಸುವಲ್ಲಿ ಲಿಂಗಾಯತರು ಒಗ್ಗೂಡಿದಾಗ ಶರಣರ ಶ್ರಮ ಸಾರ್ಥಕವಾಗುವುದು ಎಂದರು.

ಈ ಗೋಷ್ಠಿಯ ಸನ್ನಿಧಾನ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಶಾಖಾಮಠದ ಪೂಜ್ಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶರಣರ ಪಾರಿಭಾಷಿಕ ಶಬ್ದಗಳಾದ ಕಾಯಕ-ದಾಸೋಹ-ಅಂತರಂಗ ಶುದ್ಧಿ, ಬಹಿರಂಗಶುದ್ಧಿ ಇತ್ಯಾದಿ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸಹಾಯಕವಾಗಿವೆ. ಅನುಭವಮಂಟಪ ಪದ ಬಳಕೆಯಾದದ್ದು ಶರಣೆ ನೀಲಮ್ಮನವರ ವಚನದಲ್ಲಿ ಕಾಣಬಹುದು. ಆ ಮೂಲಕ ಸುಜ್ಞಾನವೆಂಬ ಬೆಳಕು ವಿಶ್ವದೆಲ್ಲೆಡೆ ಹರಡಿತು. ಲಿಂಗದೀಕ್ಷೆ ಪಡೆದವರು ಶರಣರ ಸಂಸ್ಕೃತಿ ಅಳವಡಿಸಿಕೊಂಡು ಸಾರ್ಥಕವಾಗಿ ಬದುಕಿದರು.

ಉತ್ತಂಗಿ ಚನ್ನಪ್ಪನವರು ಅನುಭವಮಂಟಪದ ವಾಸ್ತವತೆ ಕುರಿತು ತಿಳಿಸಿದ್ದು ಮಹತ್ವ ಪಡೆದಿದೆ. ಭಕ್ತಿಯ ಶಕ್ತಿ ಬಸವಣ್ಣನವರಾಗಿದ್ದು ಅರಿವು ಆಚಾರದ ಬೆಳೆ ಬೆಳೆದರು. ಹಾರಕೂಡ ಸಂಸ್ಥಾನ ಹಿರೇಮಠದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಬಸವಭಕ್ತಿ ಇಲ್ಲದ ಜೀವನ ವ್ಯರ್ಥ ಎನಿಸುತ್ತದೆ. ನಮ್ಮ ಒಂದು ರಾಷ್ಟ್ರಕ್ಕೆ ಅಲ್ಲ ಇಡೀ ವಿಶ್ವಕ್ಕೆ ಬೇಕಾದ ಸಾಹಿತ್ಯ ಶರಣರ ವಚನ ಸಾಹಿತ್ಯವಾಗಿದೆ ಎಂದರು. ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಬಸವಾದಿ ಶರಣರ ಅನುಭವಮಂಟಪವು ವಿಶ್ವದ ಪ್ರಥಮ ಸಂಸತ್ತು ಎನಿಸಿದೆ ಎಂದರು.

ಅನುಭವಮಂಟಪ ಸದಸ್ಯ ರವಿ ಕೊಳಕೂರು ಸ್ವಾಗತಿಸಿದರು. ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರಿಂದ ವಚನ ಸಂಗೀತ ನಡೆಯಿತು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

6 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

9 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

14 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

14 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

16 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420