ಕಲಬುರಗಿ: ಕೇಂದ್ರ ಸರಕಾರ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂದು ಹಲವು ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿದವು, ಬಂದ್ ಕರೆಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಿಪಿಐಎಂ ಸೇರಿದಂತೆ ದೇಶದ ಬಹುತೇಕ ಸಂಘಟನೆಗಳು ಪ್ರಗತಿ ಪರ ಸಂಘಟನೆಗಳು ಬಂಬಲ ವ್ಯಕ್ತಪಡಿಸಿವೆ.
ಆದರೆ ಬಿಜೆಪಿ ನೂತನ ಕಾಯ್ದೆಗೆ ಪರ ಪ್ರಚಾರ ಮಾಡಲು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದವು, ಅದರಂತೆ ಕಲಬುರಗಿ ಜಿಲ್ಲೆಯಲ್ಲೂ ಜೆಲ್ಲೆಯ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ಕರೆದಿದ್ದರು.
ಈ ಕುರಿತಂತೆ ಕೃಷಿ ಕಾನೂನುಗಳ ವಿರುದ್ಧ ಹೊರಾಟ ಮಾಡುತ್ತಿರುವುದನ್ನ ಖಂಡಿಸಿ ಮಾತನಾಡಿದಾಗ ಕೃಷಿ ಕಾಯ್ದೆ ಅನುಕೂಲವಿದೆ ಎಂದಷ್ಟೇ ಹೇಳಿದಾಗ ಅದಕ್ಕೆ ಮರುತ್ತರವಾಗಿ ಕೃಷಿ ಮತ್ತು ಎಪಿಎಂಸಿ ಕಾಯ್ದೆಗಳ ಕುರಿತು ತಿದ್ದುಪಡಿಗಳಾಗಿರುವ ನಿಯಮಗಳ ಕುರಿತು ಮಾತನಾಡಿ ಎಂದು ಹೇಳಿದಾಗ ಅದಕ್ಕೆ ಮರುಉತ್ತರಿಸದೇ ಸುಮ್ಮನಾದರು.
ಅದರ ಬದಲಾಗಿ ನೂತನ ಕಾಯ್ದೆಯಲ್ಲಿ ಸಣ್ಣ ರೈತರಿಗಾಗುವ ಪ್ರಯೋಜನೆಗಳಾದ್ರು ಏನು ಎಂದು ಪತ್ರಕರ್ತರೊಬ್ಬರು ಕೇಳಿದಾಗ ಪ್ರಶ್ನೆ ಉತ್ತರಿಸಕ್ಕಾಗದೆ ಕಕ್ಕಾಬಿಕಿಯಾದ ಘಟನೆ ನಡೆಯಿತು.
ಮುಖಂಡರು ನೂತನ ಮಸೂದೆಗಳ ಸರಿಯಾಗಿ ಅಧ್ಯಯನ ಮಾಡದೆ ಸುದ್ದಿಗೋಷ್ಠಿಗೆ ಆಗಮಿಸಿದರೆಂಬಂತೆ ಗೋಷ್ಠಿಯಲ್ಲಿ ಕಂಡಿತು. ಕಾಯ್ದೆಗಳ ಕುರಿತು ಪ್ರಶ್ನೆಗಳನ್ನು ಕೇಳಿದಾಗ
ಉತ್ತರಿಸಲಿಕ್ಕಾಗದೇ ತಡಬಡಿಸಿ ಸುದ್ದಿಗೋಷ್ಠಿಯಿಂದ ಹೊರಹೋದ ಘಟನೆ ನಡೆಯಿತು.
ಗೋಷ್ಠಿಯಲ್ಲಿ ಜಿಲ್ಲೆಯ ಅಧ್ಯಕ್ಷರು ಮತ್ತು ಪಕ್ಷದ ರೈತ ಮೋರ್ಚಾದ ಮುಖಂಡರಿದ್ದರೂ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲವೆಂದು ಬೇಸತ್ತು ಗೋಷ್ಠಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಎದ್ದು ಹೋದರು.
ಕೃಷಿ ಮಸೂದೆಗಳ ಪರ ಪ್ರಚಾರ ಮಾಡಲು ಕೆಲವೊಂದು ಬಿಜೆಪಿಯ ಐಟಿ ಸೇಲ್ ಬಳಸುವ ಸುಳ್ಳು ಪ್ರಚಾರಗಳ ವಂದತಿಗಳ ಮಾಹಿತಿ ಇಟ್ಟುಕೊಂಡು ಕೃಷಿ ಮಸೂದೆ ಪರ ಪ್ರಚಾರಕ್ಕಿಳಿಯುತ್ತಿದೆ ಎಂಬ ಮಾತುಗಳು ಆ ಕ್ಷಣದಲ್ಲಿ ಹರದಾಡಿದವು.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…