ಚಿಂಚೋಳಿ: ತಾಲೂಕಿನ ಗ್ರಾಮ ಪಂಚಾಯತ ಚುನಾವಣೆ ಘೋಷಣೆ ಯಾಗಿರುವ ಹಿನ್ನಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಮತ್ತು ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೌಡಿಶೀಟರಗಳನ್ನು ಠಾಣೆಗೆ ಕರೆಸಿ ಪೇರೆಡ್ ಮಾಡಿಸಲಾಯಿತು.
ರೌಡಿಶೀಟರಗಳಿಗೆ ಖಡಕ್ ವಾನಿರ್ಂಗ್ ನೀಡಿದ ಡಿವೈಎಸ್ಪಿವೀರಭದ್ರಯ್ಯ ಅವರು, ಯಾವುದೇ ಅಹಿತಕರ ಘಟನೆಗೆ ಆಸ್ಪದನೀಡುವುದಿಲ್ಲ ಶಾಂತಿಗೆ ಬಂಗತರುವುದಿಲ್ಲ ಎಂದು ಛಾಪಕಾಗದದ ಮೇಲೆ ಮುಚ್ಚಳಿಕೆಯನ್ನು ಬರೆದು ತಹಶೀಲ್ದಾರ್ ಕಛೇರಿಯಲ್ಲಿ ಒಪ್ಪಿಸುವಂತೆ ಸೂಚಿಸಿದರು.
ಒಂದು ವೇಳೆ ಏನಾದರು ಘಟನೆ ಜರುಗಿದರೆ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚಿಂಚೋಳಿ ಠಾಣೆಗೆ ಒಳಪಡುವ ಸ್ಟೇಷನ್ ಗಳು ಮಿರಿಯಾಣ, ಕುಚಾಂವರ, ಸುಲೇಪೇಟ, ಚಿಮ್ಮಾನಚೋಡ,ರಟಕಲ್, ಎಲ್ಲಾ ಠಾಣೆಯಲ್ಲಿ ಬರುವ ರೌಡಿಶೀಟರಗಳನ್ನು ಕರೆಸಿ ಇದೆತಿಂಗಳು ನಡೆಯುವ ಸಾರ್ವತ್ರಿಕ ಚುನಾವಣೆ 22, 27,ರಲ್ಲಿ ತಾವು ಯಾವುದೇ ಮತದಾರರ ಮೇಲೆ ಒತ್ತಡ ಹಾಕಬಾರದು ಮತ ಇವರಿಗೆ ಚಲಾಯಿಸಿ ಅವರಿಗೆ ಚಲಾಯಿಸಿ ಎಂದು ಹಾಗೂ ತಮ್ಮ ಬುದ್ದಿಯಿಂದ ನೀವು ಒಳ್ಳೆಯ ಸನ್ನಡತೆಯಿಂದ ನಡೆಯಬೇಕು ಯಾವುದೇ ಗಲಾಟೆಯಲ್ಲಿ ಭಾಗವಹಿಸಬಾರದು ಶಾಂತಿಯಿಂದ ಇರಬೇಕು ತಾವು ಏನಾದರು ಗಲಾಟೆ ಮಾಡುವುದು ನಮ್ಮ ಗಮನಕ್ಕೆ ಬಂದರೆ ನಿಮ್ಮಗೆ ಬೀಡುವುದಿಲಾ ಎಂದು ಡಿವೈಎಸ್ಪಿ ಹೇಳಿದರು.
ತಾಲೂಕಿನ ರೌಡಿಶೀಟರಗಳು ಚಿಂಚೋಳಿ ಠಾಣೆಯಲ್ಲಿ 55, ಮಿರಿಯಾಣ 20,ಕುಚಾಂವರಂ 20, ಸುಲೇಪೇಟ 20,ರಟಕಲ್ 25, ರೌಡಿಶೀಟರಗಳು ಇವರಲ್ಲಿ 6ಜನ ವಯಾವೃದರು ಇದ್ದಾರೆ ಇವರ ಚಟುವಟಿಕೆಗಳನ್ನು ಪರೀಶೀಲಿಸಿ ಕೈ ಬೀಡಲಾಗುವುದು.
ಸೇಡಂ ಮತ್ತು ಚಿಂಚೋಳಿಯಲ್ಲಿ ಬರುವ ಬಂದುಕು ಪಿಸ್ತೂಲ್ ಪರವಾನಿಗೆ ಪಡೆದಿದ್ದ ಎಲ್ಲಾ ಬಂದುಕುಗಳು ಠಾಣೆಗೆ ಒಪ್ಪಿಸಲಾಗಿದೆ ಎಂದು ಡಿವೈಎಸ್ಪಿ ಈ ಎಸ್ ವೀರಭದ್ರಯ್ಯ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ದಂಡಾಧೀಕಾರಿಗಳಾದ ಅರುಣಕುಮಾರ ಕುಲಕರ್ಣಿ, ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ್, ಸುಲೇಪೇಟ ಸಿಪಿಐ ವಿಜಯ ಮಹಾಂತೇಶ ಮಠಪತಿ, ಚಿಂಚೋಳಿ ಪಿಎಸ್ಐ ರಾಜಶೇಖರ ರಾಠೋಡ, ಮಿರಿಯಾಣ ಪಿಎಸ್ಐ ಸಂತೋಷ ರಾಠೋಡ, ಸುಲೇಪೇಟ ಪಿಎಸ್ಐ ಚೇತನ್ ಚೀದರಿ,ಕುಚಾಂವರಂ ಪಿಎ ಕುಪೇಂದ್ರ,ರಟಕಲ್ ಪಿಎಸ್ಐ ಶಿವಶಂಕರ ಕೆ.ಸುಬೇದಾರ. ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…