ಮಾಜಿ ಸಿಎಂ ವಿರೇಂದ್ರ ಪಾಟೀಲ್, ಧರಂಸಿಂಗ್ ಅವರ ಭಾವಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆ

ಕಲಬುರಗಿ: ಇದೇ ಡಿ. 18 ರಂದು ಇಲ್ಲಿನ ಹೈಕಶಿ ಸಂಸ್ಥೆಯ ಪಿಡಿಎ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ರಾಜ್ಯ ಕಂಡ ಮಾಜಿ ಸಿಎಂಗಳಾದ ದಿ. ವಿರೇಂದ್ರ ಪಾಟೀಲ್ ಹಾಗೂ ದಿ. ಧರಂಸಿಂಗ್ ಅವರುಗಳ ಸವಿ ನೆನಪಿಗಾಗಿ ಭಾವಚಿತ್ರ ಸಹಿತ ವಿಶೇಷ ಅಂಚೆ ಲಕೋಟೆ ಸಿದ್ಧಗೊಂಡಿದ್ದು ಅವರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ದಿ. ವೀರೇಂದ್ರ ಪಾಟೀಲ್ 2 ಬಾರಿ ನಾಡಿನ ಸಿಎಂ ಆಗಿ ದಕ್ಷ ಆಡಲಿತ ನೀಡಿದವರಾದರೆ, ದಿ. ಧರಂಸಿಂಗ್ ಅವರೂ ರಾಜ್ಯದ ಮೊದಲ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿ ಜನಪರ ಆಡಳಿತಕ್ಕೆ ಹೆಸರಾದವರು. ಇವರಿಬ್ಬರು ನಾಡಿಗಷ್ಟೇ ಅಲ್ಲ ಕಲಬುರಗಿ ಜಿಲ್ಲೆಗೂ ನೀಡಿರುವ ಕೊಡುಗೆ ಅಪಾರ. ಇವರ ಕೊಡುಗೆಗಳನ್ನು ಸ್ಮರಿಸುವ ಹಾಗೂ ಇವರ ನೆನಪು ಸದಾಕಾಲ ಉಳಿಯುವಂತಾಗಲು ಅಂಚೆ ವಿಶೇಷ ಲಕೋಟೆ ಸಿದ್ಧಗೊಂಡಿವೆ.

ದಿ. ವಿರೇಂದ್ರರ ಅಂಚೆ ಲಕೋಟೆಯನ್ನು ಅವರ ಪುತ್ರಿ ಲಲಿತಾ ಜವಳಿ ಹಾಗೂ ದಿ. ಧರಂಸಿಂಗ್ ಅವರ ಅಂಚೆ ಲಕೋಟೆಯನ್ನು ಅವರ ಧರ್ಮಪತ್ನಿಯಾದ ಶ್ರೀಮತಿ ಪ್ರಭಾವತಿ ಧರಂಸಿಂಗ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ ದಿ. ವಿರೇಂದ್ರ ಪಾಟೀಲರ ಪುತ್ರ, ಮಾಜಿ ಶಾಸಕ ಕೈಲಾಶ  ಪಾಟೀಲ್, ಅವರ ಅಳಿಯ ಡಾ. ಬಿಜಿ, ಜವಳಿ, ಮೊಮ್ಮಗ ನಿತಿನ್ ಜವಳಿ ಮತ್ತು ದಿ. ಧರಂಸಿಂಗ್ ಅವರ ಪುತ್ರ, ಜೇವರ್ಗಿ ಶಾಕರಾದ ಡಾ. ಅಜಯ್ ಸಿಂಗ್, ಎಂಎಲ್ಸಿಗಳಾದ ವಿಜಯ್ ಸಿಂಗ್ ಪಾಲ್ಗೊಳ್ಳುತ್ತಿದ್ದಾರೆ.

ಸಮಾರಂಭದಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಎಂವೈ ಪಾಟೀಲ್, ಖನೀಜ್ ಫಾತೀಮಾ, ಅಂಚೆ ಇಲಾಖೆಯ ಅದಿಕಾರಿ  ಬಿಆರ್ ನನಜಗಿ, ಹೈಕಶಿ ಸಂಸ್ಥೆ ಅಧ್ಯಕ್ಷ ಡಾ. ಬೀಮಾಶಂಕರ ಬಿಲಗುಂದಿ ಸೇರಿದಂತೆ ದಿ. ವಿರೇಂದ್ರ ಪಾಟೀಲರು ಮತ್ತು ದಿ. ಧರಂಸಿಂಗ್ ಅವರ ಅಭಿಮಾನಿಗಳು, ಕುಟುಂಬ ವರ್ಗದವರುಪಾಲ್ಗೊಳ್ಳುತ್ತಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420