ಸುರಪುರ: ತಾಲೂಕಿನ ವಿವಿಧ ಗ್ರಾಮಗಳ ವೀರ ಯೋಧರಿಗೆ ನಗರದ ಬೋವಿಗಲ್ಲಿ ಗೆಳೆಯರ ಬಳಗದ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ತವರು ಗ್ರಾಮಗಳಿಗೆ ಬಂದು ಮರಳಿ ಕರ್ತವ್ಯಕ್ಕೆ ತೆರಳುತ್ತಿದ್ದ ತಾಲೂಕಿನ ೬ ಜನ ವೀರಯೋಧರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಎಲ್ಲರಿಗು ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧರು,ಇಂದು ನೀವು ನಮ್ಮೆಲ್ಲರಿಗೆ ಗೌರವಿಸಿ ಕರ್ತವ್ಯಕ್ಕೆ ಬೀಳ್ಕೊಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ.ನಾವು ನಿತ್ಯವು ಕೂಡ ನಿಮ್ಮಂತವರ ಹಾರೈಕೆಯೊಂದಿಗೆ ಸಂತೋಷ ದಿಂದ ದೇಶ ಕಾಯುವ ಕೆಲಸ ಮಾಡುತ್ತೇವೆ.ನಾವು ನಿಮ್ಮ ಸೇವೆಯನ್ನು ಗಡಿಯನ್ನು ಕಾಯುವ ಮೂಲಕ ಮಾಡಲು ಸಿಕ್ಕಿರುವುದು ನಮ್ಮ ಪುಣ್ಯವೆಂದು ಭಾವಿಸುತ್ತೇವೆ ಎಂದರು.
ಎಲ್ಲ ಯೋಧರನ್ನು ಸನ್ಮಾನಿಸಿ ಮಾತನಾಡಿದ ಅನೇಕ ಮುಖಂಡರು,ನಿಮ್ಮಂತಹ ವೀರ ಯೋಧರನ್ನು ನಾವು ನೋಡುತ್ತಿರುವುದೆ ನಮ್ಮ ಭಾಗ್ಯವಾಗಿದೆ,ನೀವು ಮಳೆ ಗಾಳಿ ಚಳಿ ಬಿಸಿಲು ಲೆಕ್ಕಿಸದೆ ನಮ್ಮನ್ನು ಕಾಯುತ್ತಿರುವಿರಿ ನಿಮ್ಮ ಸೇವೆಯನ್ನು ನಾವು ಎಷ್ಟು ಮಾಡಿದರು ಕಡಿಮೆಯೆ,ತಾಯಿ ಭಾರತ ಮಾತೆಯ ಆಶಿರ್ವಾದ ಸದಾ ನಿಮ್ಮ ಮೇಲಿದ್ದು ಎಲ್ಲರ ಕರ್ತವ್ಯವು ನಗುನಗುತಾ ಸಂತೋಷದಿಂದ ಮುಗಿಸಿ ಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೋವಿಗಲ್ಲಿ ಗೆಳೆಯರ ಬಳಗದ ಅನೀಲ ಬಿಲ್ಹಾಲ ಗೋಪಾಲ ಭೀಮಣ್ಣ ವಾರಿ ಸಚಿನ ಕುಮಾರ್ ನಾಯಕ ಸಂತೋಷಗೌಡ ಸಮೀರ ಲಾಲು ಸೇರಿದಂತೆ ಇನ್ನೂ ಅನೇಕರಿದ್ದರು.
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…