ಬೋವಿಗಲ್ಲಿ ಗೆಳೆಯರ ಬಳಗದಿಂದ ವೀರ ಯೋಧರಿಗೆ ಗೌರವ ಸನ್ಮಾನ

0
23

ಸುರಪುರ: ತಾಲೂಕಿನ ವಿವಿಧ ಗ್ರಾಮಗಳ ವೀರ ಯೋಧರಿಗೆ ನಗರದ ಬೋವಿಗಲ್ಲಿ ಗೆಳೆಯರ ಬಳಗದ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ತವರು ಗ್ರಾಮಗಳಿಗೆ ಬಂದು ಮರಳಿ ಕರ್ತವ್ಯಕ್ಕೆ ತೆರಳುತ್ತಿದ್ದ ತಾಲೂಕಿನ ೬ ಜನ ವೀರಯೋಧರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಎಲ್ಲರಿಗು ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧರು,ಇಂದು ನೀವು ನಮ್ಮೆಲ್ಲರಿಗೆ ಗೌರವಿಸಿ ಕರ್ತವ್ಯಕ್ಕೆ ಬೀಳ್ಕೊಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ.ನಾವು ನಿತ್ಯವು ಕೂಡ ನಿಮ್ಮಂತವರ ಹಾರೈಕೆಯೊಂದಿಗೆ ಸಂತೋಷ ದಿಂದ ದೇಶ ಕಾಯುವ ಕೆಲಸ ಮಾಡುತ್ತೇವೆ.ನಾವು ನಿಮ್ಮ ಸೇವೆಯನ್ನು ಗಡಿಯನ್ನು ಕಾಯುವ ಮೂಲಕ ಮಾಡಲು ಸಿಕ್ಕಿರುವುದು ನಮ್ಮ ಪುಣ್ಯವೆಂದು ಭಾವಿಸುತ್ತೇವೆ ಎಂದರು.

Contact Your\'s Advertisement; 9902492681

ಎಲ್ಲ ಯೋಧರನ್ನು ಸನ್ಮಾನಿಸಿ ಮಾತನಾಡಿದ ಅನೇಕ ಮುಖಂಡರು,ನಿಮ್ಮಂತಹ ವೀರ ಯೋಧರನ್ನು ನಾವು ನೋಡುತ್ತಿರುವುದೆ ನಮ್ಮ ಭಾಗ್ಯವಾಗಿದೆ,ನೀವು ಮಳೆ ಗಾಳಿ ಚಳಿ ಬಿಸಿಲು ಲೆಕ್ಕಿಸದೆ ನಮ್ಮನ್ನು ಕಾಯುತ್ತಿರುವಿರಿ ನಿಮ್ಮ ಸೇವೆಯನ್ನು ನಾವು ಎಷ್ಟು ಮಾಡಿದರು ಕಡಿಮೆಯೆ,ತಾಯಿ ಭಾರತ ಮಾತೆಯ ಆಶಿರ್ವಾದ ಸದಾ ನಿಮ್ಮ ಮೇಲಿದ್ದು ಎಲ್ಲರ ಕರ್ತವ್ಯವು ನಗುನಗುತಾ ಸಂತೋಷದಿಂದ ಮುಗಿಸಿ ಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬೋವಿಗಲ್ಲಿ ಗೆಳೆಯರ ಬಳಗದ ಅನೀಲ ಬಿಲ್ಹಾಲ ಗೋಪಾಲ ಭೀಮಣ್ಣ ವಾರಿ ಸಚಿನ ಕುಮಾರ್ ನಾಯಕ ಸಂತೋಷಗೌಡ ಸಮೀರ ಲಾಲು ಸೇರಿದಂತೆ ಇನ್ನೂ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here