ಕಲಬುರಗಿ: ಪಂಚಾಯ್ತಿ ಕದನದಲ್ಲಿ ಶವವಾಗಿರುವ ಜೇವರ್ಗಿ ತಾಲೂಕಿನ ಜೈನಾಪುರ ಊರಿನ ಬಾಲಕಿ ಭಾರತಿ ಸಾವಿಗೆ ಕಾರಣರಾಗಿರುವ ಪಿಎಸ್ಐ ಮಂಜುನಾಥ ಹೂಗಾರ ಅವರನ್ನು ಅಮಾನತು ಮಾಡಬೇಕು. ಘಟನೆಯಲ್ಲಿ ಪೆÇಲೀಸ್ ಇಲಾಖೆ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ಏನೂ ಅರಿಯದ ಮುಗ್ಧ ಬಾಲಕಿಯನ್ನು ಜೈಲಿಗೆ ಕಳುಹಿಸಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿz್ದÁರೆ.
ಬಾಲಕಿ ಸಾವನ್ನಪ್ಪಿ ಒಂದೂವರೆ ದಿನ ಕಲಎದರೂ ಪೆÇಲೀಸ್ ಇಲಾಖೆ ಶಿಸ್ತುಕ್ರಮದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಜೇವರ್ಗಿ ವಿಚಾರದಲ್ಲಿ ಪೆÇಲೀಸ್ ಇಲಾಖೆಯಲ್ಲಿ ವಿಚಿತ್ರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಪವಾಹ ಸಂದರ್ಭದಲ್ಲಿ ನೀರಲ್ಲಿ ಫೆÇೀಟೋ ಕ್ಲಿಕ್ಕಿಸಿಕೊಂಡರು, ವಿಡಿಯೋ ಮಾಡಿಕೊಂಡರೆಂದು ವೈರಲ್ ಆದ ವಿಡಿಯೋ ನೋಡಿದ ತಕ್ಷಣ ನೆಲೋಗಿ ಪಿಎಸ್ಐ ಆಗಿದ್ದ ಮಲ್ಲಣ್ಣ ಅವರನ್ನು ಅಮಾನತು ಮಾಡುವ ಇಲಾಖೆಗೆ ಬಾಲಕಿ ಶವವಾಗಲು ಕಾರಣ ಎಂಬ ಗುರುತರ ಆರೋಪ ಹೊತ್ತಿರುವ ಜೇವರ್ಗಿ ಪಿಎಸ್ಐ ಅಮಾನತು ಮಾಡಲು ಯಾಕಾಗುತ್ತಿಲ್ಲ. ಇದರ ಹಿಂದೆ ರಾಜಕೀಯ ಕೇವಾಡವಿದೆ. ಆಡಲಿತ ಪಕ್ಷದವರ ಕುಮ್ಮಕ್ಕಿದೆ ಎಂದು ದೂರಿದ್ದಾರೆ.
ಪ್ರತಿಭಟನೆ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರ ಹೆಸರನ್ನು ಪ್ರಸ್ತಾಪಿಸದೆ ಜೈನಾಪುರ ಘಟನೆಯಲ್ಲಿ ಎಫ್ಐಆರ್ ಮಾಡೆಂದು ಪೆÇಲೀಸರಿಗೆ ಗಂಟು ಬಿದ್ದವರು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ತಾವು ಇಂತಹ ದ್ವೇಷದ ರಾಜಕೀಯಕ್ಕೆ ಎಂದಿಗೂ ಕುಮ್ಮಕ್ಕು ನಿಡೋದಿಲ್ಲವೆಂದು ಹೇಳುತ್ತಲೇ ಹೆಸರು ಪ್ರಸ್ತಾಪಿಸದೆ ಮಾಜಿ ಸಾಸಕ ದೊಡ್ಡಪ್ಪಗೌಡರ ವರುದ್ಧ ಹರಿ ಹಾಯ್ದರು.
ಪಂಚಾಯ್ತಿ ಚುನಾವಣೆಯಲ್ಲಿ ಜಗಳಗಳು ಇರುತ್ತವೆ. ಠಾಣೆಯ ಹಂತದಲ್ಲೇ ಬಗೆಹರಿಸಿರಿ ಎಂದು ಮಂಜೂನಾಥ ಹೂಗಾರ್ಗೆ ತಾವು ಮನವಿ ಮಾಡಿದ್ದರೂ ಅದನ್ನು ಕೇಳದೆ ಬಂಧಿಸಿ ತಂದಿದ್ದಾರೆ. ಮಹಿಳೆÉಯರ ಜೊತೆಗೇ ಮಕ್ಕಳನ್ನು ಕರೆತಂದು ಆರೋಗ್ಯ ಪರೀಕ್ಷೆ ಮಾಡಿಸದೆ, ಹಲ್ಲೆ ಮಾಡಿ ಜೈಲಿಗೆ ತಳ್ಳಿದ್ದಾರೆ. ಅದರಿಂದಲೇ ಮಗು ಸಾವಾಗಿದೆ ಎಂದರು.
ಜಿಲ್ಲಾ ಎಸ್ಪಿ ಡಾ. ಸೀಮಿ ಮರಿಯಮ್ ಅವರು ವಿಚಾರಣೆ ಮಾಡಿ ಪಿಎಸ್ಐ ವಿಚಾರದಲ್ಲಿ ಕ್ರಮ ಜರುಗಿಸೋದಾಗಿ ಹೇಳುತ್ತಾರೆ, ನೆಲೋಗಿ ಪಿಎಸ್ಐ ವಿಚಾರದಲ್ಲಿ ವಿಚಾರಣೆಯನ್ನೇ ಮಾಡಲಿಲ್ಲ ಯಾಕೆ? ವಿಡಿಯೋ ನೋಡಿ ಅಮಾನತು ಮಾಡಿದವರಿಗೆ ಬಾಲಕಿ ಶವ ಕಾಣೋದಿಲ್ಲವೆ, ಈ ಸರಕಾರ, ಇಲ್ಲಿನ ಪೆÇಲೀಸ್ ಇಲಾಖೆ ಕುರುಡಾಗಿದೆ ಎಂದು ಡಾ. ಅಜಯ್ ಸಿಂಗ್ ಜರಿದರು. ಹಲ್ಲೆಗೊಳಗಾದ ಸಂತೋಷ ಕುಟುಂಬ ಕಾಂಗ್ರೆಸ್ ಕಾರ್ಯಕರ್ತರು. ಅದಕ್ಕೇ ಪಂಚಾಯ್ತಿ ಜಗಳದಲ್ಲಿ ರಾಜಕೀಯ ಬೆರೆಸಿ ಬೇಕೆಂದೇ ಹಲ್ಲೆ ಮಾಡಲಾಗಿದೆ.
ಈ ಪರಿ ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ರಾಜಕೀಯ ಮಾಡಲಿ, ಆದರೆ ದ್ವೇಷದ ರಾಜಕೀಯ ತಮ್ಮ ಕುಟುಂಬದ ಜಾಯಮಾನದಲ್ಲೇ ಬಂದಿಲ್ಲ. ತಮ್ಮ ತಂದೆ ಧರಂಸಿಂಗ್ 36 ªಷರ್À ಜೇವರ್ಗಿಯಲ್ಲಿ ಇಂತಹ ಯಾವ ರಾಜಕೀಯ ಮಾಡಿಲ್ಲ. ತಾವು ಕಲೆದ 6 ವರ್ಷದ ತಮ್ಮ ಶಾಸಕರ ಅವದಿಯಲ್ಲಿ ಇಂತಹ ಯಾವ ಕೆಲಸ ಮಾಡಿಲ್ಲ. ಆದರೆ ಆಡಲಿತದಲ್ಲಿರುವ ಪಕ್ಷದವರು ಮಾಜಿ ಶಾಸಕರು, ಸಹೋದರರು ಇಂತಹ ದ್ವೇಷದ ರಾಜಕೀಯ ತಾಲೂಕನಲ್ಲಿ ಮಾಡುತ್ತಿದ್ದಾರೆ, ಇದನ್ನೆಲ್ಲ ಜೇವರ್ಗಿ ಜನ ಗಮನಿಸುತ್ತಿದ್ದಾರೆಂದು ಡಾ. ಜಯ್ ಹೇಳಿದ್ದಾರೆ.
5 ಗಂಟೆ ರಸ್ತೆಯಲ್ಲೇ ಕುಲಿತ ಡಾ. ಅಜಯ್ ಸಿಂಗ್! ಬಾಲಕಿ ಬಾರತಿ ಶವವಿಟ್ಟು ನಡೆದ ಧರಣಿಯ ಸ್ಥಳಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಡಾ. ಅಜಯ್ ಸಿಂಗ್ ಅಲ್ಲೇ 5 ಗಂಟೆ ಕುಲಿತರು. ಜಿಲ್ಲಾ ಎಸ,್ಪ 3 ಬಾರಿ ಬಂದು ಹೋಗಿ ಸಂಧಾನಕ್ಕೆ ಯತ್ನಿಸಿದರೂ ಪಿಎಸ್ಐ ಅಮಾನತು ಆಗೋವರೆಗೂ ಧರಣಿ ನಿಲ್ಲೋದಿಲ್ಲವೆಂದು ಡಾ. ಅಡಯ್ ರಸ್ತೆಯಲ್ಲೇ 5 ಗಂಟೆ ಕಳೆದರು. ಶಾಸಕರ ನಿಲುವಿಗೆ ಕೋಲಿ ಸಮಾಜದ ಮುಖಂಡರು, ಜೈನಾಪುರ ಜನತೆ, ಜೇವರ್ಗಿ ಜನ ಹೆಮ್ಮೆಪಟ್ಟರು. ಮೃತ ಬಾಲಕಿಗೆ ಸರಕಾರದಿಂದ ನ್ಯಾಸಮ್ಮತ ಪರಿಹಾರ ದೊರಕಿಸುವ ಯತ್ನ ತಾವು ಮಾಡೋದಾಗಿಯೂ ಡಾ. ಅಜಯ್ ಸಿಂಗ್ ಬರವಸೆ ನೀಡಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…