ದಿನಪತ್ರಿಕೆ ತರುವ ಹುಡುಗರನ್ನು ಗೌರವಿಸಿ: ಪವಾರ

ಕಲಬುರಗಿ: ದಿನಪತ್ರಿಕೆ ರೂಪದಲ್ಲಿ ಪ್ರಪಂಚದ ಜ್ಞಾನವನ್ನು ಹೊತ್ತು ಬೆಳ್ಳಂಬೆಳಗ್ಗೆ ಮನೆ ಬಾಗಿಲಿಗೆ ಬರುವ ಹುಡುಗರನ್ನು ಓದುಗರು ಗೌರವದಿಂದ ಕಾಣಬೇಕು ಎಂದು ಪುರಸಭೆ ಉಪಾಧ್ಯಕ್ಷ ತಿಮ್ಮಯ್ಯ ಪವಾರ ಹೇಳಿದರು.

ವಾಡಿ ಪಟ್ಟಣದ ಪುರಸಭೆಯಲ್ಲಿ ಗುರುವಾರ ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅವರ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ದಿನಪತ್ರಿಕೆಗಳ ವಿತರಕರಿಗೆ ಚಳಿಗಾಲದ ಸುರಕ್ಷತೆಗಾಗಿ ಶ್ವೆಟರ್ ವಿತರಣಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಅನೇಕ ಮಹಾನ್ ವ್ಯಕ್ತಿಗಳು ಬಾಲ್ಯದ ದಿನಗಳಲ್ಲಿ ಹಾಲು ದಿನಪತ್ರಿಕೆಗಳನ್ನು ವಿತರಿಸಿ ಎತ್ತರಕ್ಕೆ ಬೆಳೆದವರಿದ್ದಾರೆ. ಒಂದು ದಿನಪತ್ರಿಕೆ ಮುದ್ರಣಗೊಂಡು ಓದುಗರ ಕೈಸೇರುವ ಪ್ರಸಂಗದ ಹಿಂದೆ ನೂರಾರು ಜನರ ಪರಿಶ್ರಮವಿರುತ್ತದೆ.

ಮುದ್ರಣಗೊಂಡ ಪತ್ರಿಕೆಯನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಹುಡುಗರು ಪಡಬಾರದ ಕಷ್ಟ ಪಟ್ಟಿರುತ್ತಾರೆ ಎಂಬುದನ್ನು ಓದುಗರು ಮರೆಯಬಾರದು. ಮಳೆಯಿರಲಿ ಚಳಿಯಿರಲಿ ನಿಗದಿತ ಸಮಯಕ್ಕೆ ಓದುಗನಿಗೆ ಪತ್ರಿಕೆ ತಲುಪಿಸುವ ಹುಡುಗರ ಸಾಹಸ ಮೆಚ್ಚುವಂತಹದ್ದು. ಬೆಳಗಾಗುವಷ್ಟರಲ್ಲೇ ಪತ್ರಿಕೆಗಳನ್ನು ತಲುಪಿಸಿ ನಿಟ್ಟುಸಿರುವ ಬಿಡುವ ಹುಡುಗರ ಕಷ್ಟಕ್ಕೆ ಪ್ರತಿಯೊಬ್ಬರೂ ಮರುಗಲೇಬೇಕು. ಪತ್ರಿಕೆ ಬರುವುದು ತುಸು ತಡವಾದರೆ ಚಟಪಡಿಸುವ ಓದುಗರು, ಅವರನ್ನು ಸಹನೆಯಿಂದ ವಿಚಾರಿಸುವುದನ್ನು ಕಲಿಯಬೇಕು ಎಂದರು.

ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಮಾತನಾಡಿ, ವರದಿಗಾರನಿಂದ ಸಿದ್ಧವಾಗುವ ಒಂದು ಸುದ್ದಿ ಸಂಪಾದಕರಿಂದ ಮಾನ್ಯತೆ ಪಡೆದು ಮುದ್ರಣವಾಗಿ ನಮ್ಮ ಕೈಸೇರುವುದರ ಹಿಂದೆ ವಿತರಕರ ಸೇವೆ ದೊಡ್ಡದಿದೆ. ದಿನಪತ್ರಿಕೆ ಓದದೆ ನಮಗೆ ದಿನವೇ ಹೋಗುವುದಿಲ್ಲ. ಕಡಿಮೆ ಕಾಸಿಗಾಗಿ ದುಡಿಯುವ ದಿನಪತ್ರಿಕೆಗಳ ವಿತರಕರು ಚಳಿಗಾಲ ಮತ್ತ ಮಳೆಗಾಲಗಳಲ್ಲಿ ಆರೋಗ್ಯ ಸುರಕ್ಷತೆಗೆ ಹೆಚ್ಚು ಅಧ್ಯತೆ ನೀಡಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಸಹ ಕಾರ್ಯದರ್ಶಿ ಮಡಿವಾಳಪ್ಪ ಹೇರೂರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಸಂಘಟನಾಧಿಕಾರಿ ಚಂದ್ರಕಾಂತ ಪಾಟೀಲ, ಕಾಶೀನಾಥ ಧನ್ನಿ, ಕೆ.ವಿರೂಪಾಕ್ಷಿ, ಪುರಸಭೆ ಸದಸ್ಯರಾದ ಶರಣು ನಾಟೀಕಾರ, ಮಲ್ಲಯ್ಯ ಗುತ್ತೇದಾರ, ವಿಶಾಲ ನಂದೂರಕರ, ಮುಖಂಡರಾದ ತುಕಾರಾಮ ರಾಠೋಡ, ವಿಜಯಕುಮಾರ ಸಿಂಗೆ, ಅಶ್ರಫ್ ಖಾನ್, ಪರಶುರಾಮ ಕಟ್ಟಿಮನಿ, ಶರಣಪ್ಪ ವಾಡೇಕರ, ಅಬ್ರಾಹಂ ರಾಜಣ್ಣ ಪಾಲ್ಗೊಂಡಿದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

45 mins ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

6 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

17 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

19 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

19 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420