ಬಿಸಿ ಬಿಸಿ ಸುದ್ದಿ

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಎಲ್ಲರು ಕೈ ಜೋಡಿಸಿ: ಶಾಸಕ ರಾಜುಗೌಡ

ಸುರಪುರ: ನಗರದ ಬಡಿಗೇರ ಬಾವಿ ಬಳಿಯಲ್ಲಿ ನೂತನವಾಗಿ ಆರ್‌ಎಸ್‌ಎಸ್ ಶಾಖಾ ಕಚೇರಿಯನ್ನು ಆರಂಭಿಸಲಾಯಿತು.ಕಚೇರಿಯನ್ನು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ, ಶ್ರೀರಾಮ ಮಂದಿರ ಈ ದೇಶದ ಹೆಮ್ಮೆಯ ಪ್ರತೀಕವಾಗಿದೆ.ಅದನ್ನು ದೇಶದ ಎಲ್ಲಾ ಜನರು ಭಕ್ತಿ ಮತ್ತು ಅಭಿಮಾನದಿಂದ ನಿರ್ಮಿಸಲು ಕೈ ಜೋಡಿಸಬೇಕು ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನವನ್ನು ಈಗಾಗಲೆ ಹುಣಸಗಿ ಮತ್ತು ದೇವಾಪುರದಲ್ಲಿ ಸಭೆ ನಡೆಸಿ ಚಟುವಟಿಕೆ ಆರಂಭಿಸಲಾಗಿದ್ದು,ಅದರಂತೆ ಸುರಪುರದಲ್ಲಿಯೂ ಇದೇ ೧೬ನೇ ತಾರೀಖಿನಂದು ಬೃಹತ್ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಅಲ್ಲದೆ ಈ ಸಭೆಯಲ್ಲಿ ಎಲ್ಲಾ ಮುಖಂಡರು ಭಾಗವಹಿಸಿ ನಿಧಿ ಸಮರ್ಪಣಾ ಅಭಿಯಾನವನ್ನು ಯಶಸ್ಸುಗೊಳಿಸುವಂತೆ ತಿಳಿಸಿದರು.

ನಂತರ ಮುಖಂಡರಾದ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ,ಶ್ರೀರಾಮ ಮಂದಿರವನ್ನು ನಿರ್ಮಿಸುವುದು ಸುಮಾರು ಐದು ನೂರು ವರ್ಷಗಳ ಕನಸಾಗಿದೆ,ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಗಾಗಲೆ ಚಾಲನೆ ನೀಡಿದ್ದಾರೆ.ಆದ್ದರಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇದೇ ೧೫ನೇ ತಾರೀಖಿನಿಂದ ಫೇಬ್ರವರಿ ೫ರ ವರೆಗೆ ಅಭಿಯಾನವನ್ನು ನಡೆಸಿ ನಿಧಿ ಸಂಗ್ರಹವನ್ನು ಮಾಡಲಾಗುವುದು,ಇದಕ್ಕೆ ಯಾವುದೇ ಪಕ್ಷ ಜಾತಿ ಧರ್ಮದ ಭೇದವಿಲ್ಲ ಎಲ್ಲರ ಮನೆಗಳಿಗು ಹೋಗಿ ನಿಧಿ ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.

ಅಲ್ಲದೆ ಶ್ರೀರಾಮನನ್ನು ತಮ್ಮ ರಾಮಾಯಣ ಕೃತಿಯ ಮೂಲಕ ಜಗತ್ತಿಗೆ ತಿಳಿಸಿದ ಶ್ರೀ ಮಹರ್ಷಿ ವಾಲ್ಮೀಕಿಯ ಮಂದಿರವನ್ನು ನಿರ್ಮಿಸುವ ಕುರಿತು ಸಂಘ ಪರಿವಾರ ಮುಂದಾಗಲಿದೆ ಮತ್ತು ನಮ್ಮ ಸುರಪುರ ನಗರದ ಶಿಬಾರಬಂಡಿಯಲ್ಲಿನ ಶ್ರೀರಾಮನ ಬಾಣವಿರುವ ಮಂದಿರ ಪ್ರವಾಸಿ ತಾಣವಾಗಿ ಅಭೀವೃಧ್ಧಿಗೊಳಿಸಲು ಮುಖಂಡರ ಗಮನ ಸೆಳೆಯುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಉಪಾಧ್ಯಕ್ಷ ಮಹೇಶ ಪಾಟೀಲ್ ಹಾಗು ಮುಖಂಡರಾದ ಹೆಚ್.ಸಿ.ಪಾಟೀಲ್ ಬಸನಗೌಡ ಹಳ್ಳಿಕೋಟಿ ಸಂಘ ಪರಿವಾರದ ನಾಗರಾಜ ಮಕಾಶಿ ಪರಶುರಾಮ ಬೈಲಕುಂಟಿ ಗುರುನಾಥ ರೆಡ್ಡಿ ಗಿರಿಧರ ಹೂಗಾರ ಹಣಮಂತ್ರಾಯ ಮಂಜಲಾಪುರ ಶಿವಲಿಂಗ ಶ್ರೀಕಾಂತ ಮೇದಾ ವಸೀಮ್ ಅಕ್ರಮ ಶಿವು ಕೊಂಗಂಡಿ ಸಿದ್ರಾಮ ಸೇರಿದಂತೆ ಅನೇಕರಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

1 hour ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

1 hour ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago