ಅಂಕಣ ಬರಹ

ವರ್ಷದ ಮೊದಲ ಹಬ್ಬ ಸಂಕ್ರಾಂತಿ ವಿಶೇಷತೆ

 

ಸಂಕ್ರಾಂತಿ ಬಂತು ಸುಗ್ಗಿ ತಂತು
ಎಲ್ಲರ ಚಳಿಯನ್ನು ಬಿಡಿಸಿ
ಸೂರ್ಯ ತನ್ನ ಪತವನ್ನ ಬದಲಿಸಿ
ಎಲ್ಲರಲ್ಲಿಯೂ ಬದಲಾವಣೆ ಬಯಸಿ
ಹಗಲು ಇರುಳನ್ನು ಹಿಗ್ಗಿಸಿ
ಎಳ್ಳು ಬೆಲ್ಲದಲ್ಲಿ ಸಿಹಿಯನ್ನು ಬೆರೆಸಿ
ಸಂಭ್ರಮಿಸಲು ಎಲ್ಲರ ತನು ಮನ ಒಂದು ಗುಡಿಸುವ ಮೊದಲ ಹಬ್ಬದ ಆಗಮನವೇ ಈ ಸಂಕ್ರಾಂತಿ ಹಬ್ಬವಾಗಿದೆ.

ವರ್ಷದ ಆರಂಭದಲ್ಲಿ ಬರುವ ಹಬ್ಬವೇ ಸಂಕ್ರಾಂತಿ ಹಬ್ಬಗಳಲ್ಲಿ ಹಬ್ಬವೆಂದರೆ ಸಂಕ್ರಾಂತಿ ಹಬ್ಬವೇ ತುಂಬಾ ಅದ್ದೂರಿ ಹಬ್ಬವಾಗಿದೆ.

ಸಾಮಾನ್ಯವಾಗಿ ಸಂಕ್ರಾಂತಿ ಎಂದರೆ ಎಲ್ಲರಿಗೂ ನೆನಪಾಗುವುದು ಎಳ್ಳು ಬೆಲ್ಲದ ಹಬ್ಬ ಎಂದು. ಅದೇ ರೀತಿ ರೈತಾಪಿ ಜನರು ತಾವು ಬೆಳೆದ ಬೆಳೆಗಳನ್ನು ಒಂದೆಡೆ ರಾಶಿ ಹಾಕಿ ಅದಕ್ಕೆ ಪೂಜೆ ಮಾಡುವ ವಾಡಿಕೆ ಇದೆ. ಹೀಗೆ ಮಾಡುವುದರಿಂದ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದು ಕರೆಯುತ್ತಾರೆ. ಹಿಂದಿನ ಕಾಲದಿಂದಲು ಆಚರಣೆಯಲ್ಲಿರುವಂತಹ ಪದ್ಧತಿ ಎಂದರೆ ಎಳ್ಳು ದಾನ ಮಾಡುವುದು ಎಳ್ಳು ಶನಿ ಗ್ರಹದ ದಾನ್ಯವಾಗಿದೆ ಹಳ್ಳಿ, ನಗರ್ ಪ್ರದೇಶಗಳಲ್ಲಿ ಏಳನ್ನು ದಾನ ಮಾಡಲು ಹೋದಾಗ ಅದನ್ನು ತೆಗೆದುಕೊಳ್ಳಲು ಹೆಚ್ಚು ಇಷ್ಟ ಪಡುವುದಿಲ್ಲ, ಏಕೆಂದರೆ ಆ ದಾನ್ಯವನ್ನು ಶನಿಗೆ ಹೋಲಿಸುತ್ತಾರೆ.

ಅದನ್ನು ತೆಗೆದುಕೊಂಡರೇ ನಮಗೆ ಪಾಪ, ದೋಷ ಉಂಟಾಗುತ್ತದೆ ಎಂಬ ನಂಬಿಕೆ ಇದೆ ಹೀಗೆ ಭಾವಿಸುವ ಕಾರಣದಿಂದ ಜನರು ಅದರ ಜೊತೆಗೆ ಬೆಲ್ಲ, ಕೊಬ್ಬರಿಯನ್ನು ಮಿಶ್ರ ಮಾಡಿ ನೀಡುತ್ತಾರೆ. ಈ ಸಂಕ್ರಾಂತಿಯ ಸಂದರ್ಭದಲ್ಲಿ ಬೆಳೆ ಬೆಳೆದು ಮಾರಾಟಕ್ಕೆ ಬಂದಿರುತ್ತವೆ. ಅದನ್ನು ದಾನ ಮಾಡುವುದರಿಂದ ಫಲ ಅಧಿಕವಾಗುವುದು ಎಂದು ಹೇಳುತ್ತಾರೆ.

ಈ ರೀತಿ ನಮ್ಮ ಭಾರತದಲ್ಲಿ ಆಚರಿಸುತ್ತಿರುವಂತಹ ಪ್ರತಿಯೊಂದು ಧರ್ಮದ ಹಬ್ಬಗಳಿಗೆ ತನ್ನದೇ ಆದ ಪೌರಾಣಿಕ ಇತಿಹಾಸ ಇರುತ್ತದೆ, ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡಗಳಿಂದಾಗಿ ಜೀವನದಲ್ಲಿ ಹಬ್ಬಗಳ ಆಚರಣೆ ಕಡಿಮೆಯಾಗುತ್ತಾ ಬರತಿದೆ ಇದರಿಂದಾಗಿ ಇಂದಿನ ಯುವಜನತೆಗೆ ನಮ್ಮ ಹಬ್ಬಗಳು ಯಾವುವು ಎಂಬುದು ತಿಳಿಯದಂತಾಗಿದೆ.

ಪರಂಪರೆಯಿಂದ ಆಚರಿಸಿಕೊಂಡು ಬಂದ ಹಬ್ಬಗಳತ್ತ ಗಮನಹರಿಸಿ ತಮ್ಮ ಮಕ್ಕಳಿಗೂ ಅದರ ಮಹತ್ವದ ಬಗ್ಗೆ ತಿಳಿಸಿ ಮುಂದಿನ ಯುವ ಪೀಳಿಗೆಗೆಮುಂದುವರಿಯುವಂತೆ ಮಾಡುವುದು ಎಲ್ಲರದು ಪ್ರಮುಖಕರ್ತವ್ಯವಾಗಬೇಕು. ನಾಡಿನ ವಿವಿಧ ಭಾಗಗಳಲ್ಲಿ ಹಲವಾರು ರೀತಿಯ ವಿಶೇಷವಾಗಿ ಪೂಜೆ ಪುನಸ್ಕಾರ ಮಾಡಿ ಸಿಹಿ ಅಡುಗೆ ಮಾಡಿ ವೈವಿದ್ಯಮಾಯವಾಗಿ ಆಚರಣೆ ಮಾಡಲಾಗುತ್ತದೆ.

ಈ ಹಬ್ಬದಂದು ನದಿಗಳಲ್ಲಿ ಸ್ನಾನ ಮಾಡಿ ಪೂಜೆ ಮುಗಿದ ನಂತರ ಊಟ ಮಾಡುವ ಸಂಸ್ಕೃತಿ ನಮ್ಮ ಭಾರತೀಯರದಾಗಿದೆ ಎಲ್ಲರು ಸುಖ ಸಮೃದ್ಧಿ ಇಂದ ಹಬ್ಬ ಆಚರಣೆ ಮಾಡಲಿ ಎನ್ನುವುದೇ ನನ್ನ ಆಶಯವಾಗಿದೆ ಮತ್ತೊಮ್ಮೆ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಈ ಹಬ್ಬವು ಸಮೃದ್ಧಿಯ ಸಂಕೇತವಾಗಿದೆ.

ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ
ಪತ್ರಿಕೋದ್ಯಮ ವಿದ್ಯಾರ್ಥಿನಿ ಶರಣಬಸವ ವಿಶ್ವ ವಿದ್ಯಾಲಯ ಕಲಬುರಗಿ.
emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

11 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago