ಬಿಸಿ ಬಿಸಿ ಸುದ್ದಿ

ಅಟ್ಟದ ಮೇಲೆ ಬೆಟ್ಟದಂತ ವಿಚಾರ ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮ

ಕಲಬುರಗಿ: ನಗರದ ಸರಸ್ವತಿ ಗೋದಾಮ ಹತ್ತಿರ ಶ್ರೀ ಸಿದ್ದಲಿಂಗೇಶ್ವರ ಬುಕ್  ಮಾಲ್ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಅಟ್ಟದ ಮೇಲೆ ಬೆಟ್ಟದಂತ ವಿಚಾರ ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮ ಹಮ್ಮಿಕೊಳಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀನಿವಾಸರವರ ಅಕ್ಕತಂಗಿಯರು ಎನ್ನುವ ಕೃತಿಯ ಕುರಿತು ಮಾತನಾಡಿ ರಷ್ಯನ್ ಭಾಷೆಯಲ್ಲಿದ್ದ ಈ ಕೃತಿ ಇಂಗ್ಲಿಷಿಗೆ ತರ್ಜುಮೆಗೊಂಡು ಕೆ ವಿ ಸುಬ್ಬಣ್ಣನವರ ಒತ್ತಾಸೆಯಿಂದ ಇಂಗ್ಲಿಷ್ ನಿಂದ ಕನ್ನಡಕ್ಕೆ ವೈದೇಹಿಯವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಮೂವರು ಅಕ್ಕತಂಗಿಯರು ರಷ್ಯನ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು ಬಸವಣ್ಣನವರ ಕಾಯಕ ಸಿದ್ಧಾಂತದ ತಳಹದಿಯ ಮೇಲೆ ಜೀವನ ನಿರ್ವಹಣೆ ಮಾಡುತ್ತಿರುವುದನ್ನು ಗಮನಿಸಬಹುದು ದುಡಿದು ತಿನ್ನಬೇಕು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳ ಬೇಕು ಎಂಬ ತತ್ವದ ಮೇಲೆ ನಾಟಕದಲ್ಲಿನ ಪಾತ್ರಗಳು ಸೃಷ್ಟಿಸಿದ್ದು ವಾಸ್ತವ ಜಗತ್ತಿಗೆ ಇದೊಂದು ರೀತಿಯ ಪಾಠವಾಗಿದೆ ಜೀವನದ ನೈಜತೆಯನ್ನು ಈ ಕೃತಿಯಲ್ಲಿ ಕಂಡುಕೊಳ್ಳಬಹುದು ಎಂದಿದ್ದಾರೆ.

ಅಲ್ಲದೆ ಮೂವರು ಅಕ್ಕ-ತಂಗಿಯರು ಬದುಕಿನಲ್ಲಿ ಸೋಲು ಅವಮಾನ ಹಾಗೂ ತಿರಸ್ಕಾರಗಳು ಎಂಥವರನ್ನೂ ಕೂಡ ದೃತಿಗೇಡಿಸುತ್ತವೆ  ಇನ್ನು ಕೆಲವರನ್ನು ನಿರಾಶಾವಾದದ ಕಂದ ಕಕ್ಕೆ ತಳ್ಳಿ ಮೇಲಕ್ಕೇ ಬರದಂತೆ ಮಾಡಿಬಿಡುತ್ತವೆ ಇನ್ನು ಕೆಲವರಿಗೆ ಗೆಲುವಿನ ಮೆಟ್ಟಿಲುಗಳಾಗಿ ಉತ್ತುಂಗಕ್ಕೇರಲು ನೆರವಾಗುತ್ತದೆ ಎನ್ನುವ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡು ತಿರಸ್ಕಾರ ಅವಮಾನಗಳ ನಡುವೆಯೂ ಸಾವಿರಾರು  ಮಹಿಳೆಯರಿಗೆ ಮಾದರಿಯಾಗಿರುವುದು ಈ ಕೃತಿಯಲ್ಲಿ ನಾವು ಕಂಡುಕೊಳ್ಳಬಹುದು ಎಂದಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಮಾತನಾಡಿ ಮೂವರು ಅಕ್ಕ-ತಂಗಿಯರು ಕೃತಿ ವಾಸ್ತವಿಕ ಬದುಕಿಗೆ ತೀರ ಹತ್ತಿರ ವೆನಿಸುತ್ತಿದೆ ದುಡಿಯುವ ವರ್ಗಕ್ಕೆ ಅಕ್ಕತಂಗಿಯರು ಮಾದರಿಯಾಗಿದ್ದಾರೆ ಎಂದರು ಕಾರ್ಯಕ್ರಮದ ಕುರಿತು ಸಂಚಾಲಕರಾದ ಡಾ. ಶಿವರಾಜ್ ಪಾಟೀಲ್ ಅವರು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶಕರಾದ ಬಸವರಾಜ ಕೊನೆಕ ರವರು ಮಾತನಾಡಿ ನಮ್ಮ ಪ್ರಕಾಶನದಿಂದ ಹೊರಬಂದ ಮೌಲಿಕ ಕೃತಿಗಳನ್ನು ವಿಮರ್ಶಕರಿಂದ ವಿಮರ್ಶಿಸಿ ಪುಸ್ತಕ ರೂಪದಲ್ಲಿ ಹೊರ ತರುವುದರ ಮೂಲಕ ಒಂದು ಉತ್ತಮ ವೇದಿಕೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸುಬ್ಬರಾವ್ ಕುಲಕರ್ಣಿ, ಕಾವ್ಯಶ್ರೀ ಮಹಾ ಗಾಂಕರ್, ಡಾ. ಚಿ.ಸಿ ನಿಂಗಣ್ಣ ಸಂಧ್ಯಾ ಹೊನಗುಂಟಿಕರ್   ಡಾ. ಆನಂದ ಸಿದ್ದ ಮಣಿ,ಡಾ. ಶ್ರೀಶೈಲ ನಾಗರಾಳ, ಬಿ. ಎಚ್ ನಿರಗುಡಿ, ಬಿ.ಎಸ್. ಮಾಲಿಪಾಟೀಲ್ ಸಿ.ಎಸ್.ಮಾಲಿಪಾಟೀಲ್ ಜಿ.ಎಸ್ ಮಾಲಿಪಾಟೀಲ್ ಡಾ. ಶಿವಶರಣಪ್ಪ ಮೋಟಕಪಲ್ಲಿ,ಸಿದ್ದಲಿಂಗ ಕೊನೆ ಕ, ಶರಣು ಕೊನೆ ಕ, ಮೊದಲಾದವರು ಇದ್ದರು ಡಾ. ಚಿ.ಸಿ ನಿಂಗಣ್ಣ ಸ್ವಾಗತಿಸಿದರು ಡಾ.ಶರಣಬಸಪ್ಪ ವಡ್ಡನ್ ಕೇರಿ ನಿರೂಪಿಸಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

8 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

8 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

10 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

10 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

10 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

11 hours ago