ಸುರಪುರ: ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಳಿಗ್ಗೆ ೧೧ ಗಂಟೆಯ ವೇಳೆಗೆ ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ಮುಖಂಡರು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಮೂಲಕ ದರಬಾರ ಮಾರ್ಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಮೂಲಕ ಹನುಮಾನ ಟಾಕೀಸ್ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಹಾತ್ಮ ಗಾಂಧಿವೃತ್ತದಲ್ಲಿ ಎರಡು ಗಂಟೆಗಳಿಗು ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಅನೇಕ ಮುಖಂಡರು ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯು ಸಂಪೂರ್ಣವಾಗಿ ಜನವಿರೋಧಿಯಾಗಿದೆ,ಯಾವುದೆ ಒಬ್ಬ ವ್ಯಕ್ತಿಯ ಆಹಾರದ ಆಯ್ಕೆ ಆತನ ಖಾಸಗಿ ವಿಚಾರವಾಗಿದ್ದು ಇದನ್ನು ನಿರ್ಬಂಧಿಸಲು ಯಾರಿಗೂ ಹಕ್ಕಿಲ್ಲ.ಅಲ್ಲದೆ ಇಂದು ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿ ಮತ್ತು ಸಂಘ ಪರಿವಾರದ ಜನರು ತಮ್ಮದೆ ಸರಕಾರಗಳಿರುವ ರಾಜ್ಯಗಳಲ್ಲಿ ನಡೆಯುವ ಗೋಹತ್ಯೆಯನ್ನು ತಡೆಯಲಿ,ಮುಖ್ಯವಾಗಿ ದೇಶದಲ್ಲಿ ಅತಿ ಹೆಚ್ಚು ಗೋಹತ್ಯೆ ಮಾಡಿ ಮಾಂಸ ವಿದೇಶಕ್ಕೆ ರಫ್ತು ಮಾಡುವ ಕಂಪನಿಗಳೇ ಇವರವುಗಳಿರುವಾಗ ಗೋಹತ್ಯೆಯ ನಿಷೇಧದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎನಿಸಲಿದೆ.
ಅಲ್ಲದೆ ರೈತರು ಗೋವನ್ನು ಸಾಕುತ್ತಾರೆ ಅದು ಹೈನುಗಾರಿಕೆಗೆ ಯೋಗ್ಯವಲ್ಲದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು,ಇನ್ನು ತಮ್ಮ ಜಾನುವಾರುಗಳನ್ನು ತಾವು ಮಾರಾಟ ಮಾಡಲು ಸರಕಾರದ ಪರವಾನಿಗೆ ಪಡೆಯುವಂತೆ ನಿಯಮ ಕಾನೂನು ಬಾಹಿರ,ಅಲ್ಲದೆ ಜಾನುವಾರು ಸಾಗಾಟ ಕೇವಲ ೧೫ ಕಿಲೋ ಮೀಟರ್ಗೆ ಸೀಮಿತಗೊಳಿಸಿ ಇದಕ್ಕಿಂತಲು ಹೆಚ್ಚಿನ ದೂರಕ್ಕೆ ಪರವಾನಿಗೆ ಪಡೆಯುವಂತಹ ಕಾನೂನು ಒಪ್ಪಲು ಸಾಧ್ಯವಿಲ್ಲ ಎಂದರು.ಮುಂದುವರೆದು ಮಾತನಾಡಿದ ಅನೇಕ ಮುಖಂಡರು ಬಿಜೆಪಿ ಎಂದರೆ ಬ್ರಿಟೀಷರ ರೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದೆ ಇಂತಹ ಕಾನೂನುಗಳು ನೂರು ತಂದರು ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೇದಾರ ಸೋಮನಾಥ ನಾಯಕ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಾಜಾ ವೇಣುಗೋಪಾಲ ನಾಯಕ ಮಲ್ಲಯ್ಯ ಕಮತಗಿ ದೇವಿಂದ್ರಪ್ಪ ಪತ್ತಾರ ರಾಜಾ ಸುಶಾಂತ ನಾಯಕ ಭೀಮರಾಯ ಸಿಂಧಗೇರಿ ರಾಹುಲ್ ಹುಲಿಮನಿ ವೆಂಕೋಬ ದೊರೆ ಮಲ್ಲಿಕಾರ್ಜುನ ಕ್ರಾಂತಿ ಮಾನಪ್ಪ ಕಟ್ಟಿಮನಿ ಮಲ್ಲಪ್ಪ ಹುಬ್ಬಳ್ಳಿ ದಾವೂದ್ ಪಠಾಣ್ ನಿಂಗಣ್ಣ ಗೋನಾಲ ಖಾಜಾ ಖಲೀಲ ಅರಕೇರಿ ರಾಜು ಕಟ್ಟಿಮನಿ ರಾಮಣ್ಣ ಕಲ್ಲದೇವನಹಳ್ಳಿ ಶಿವಲಿಂಗ ಹಸನಾಪುರ ಶಿವಶರಣಪ್ಪ ವಾಡಿ ಯಲ್ಲಪ್ಪ ಚಿನ್ನಾಕಾರ ಎಮ್ ಪಟೇಲ್ ಖಾಜಾ ಅಜ್ಮೀರ್ ವೀರಭದ್ರಪ್ಪ ತಳವಾರಗೇರಾ ತಿಪ್ಪಣ್ಣ ಶೆಳ್ಳಗಿ ಅಬೀದ್ ಪಗಡಿ ಜೆಟ್ಟೆಪ್ಪ ನಾಗರಾಳ ಗೋಪಾಲ ಚಿನ್ನಾಕಾರ ಸೇರಿದಂತೆ ಅನೇಕರಿದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…