ಕಲಬುರಗಿ: ಸಂವಿಧಾನ ಜಾರಿಗೆ ಬಂದು 70 ವರ್ಷ ಕಳೆದರೂ ಸಹ ಜಾತಿವಾದಿಗಳ ಕುತಂತ್ರದಿಂದ ದಲಿತರು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂದು ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಅಪ್ಪುಗೆರೆ ಸೋಮಶೇಖರ ವಿಷಾಧ ವ್ಯಕ್ತಪಡಿಸಿದರು.
ಯಡ್ರಾಮಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವ್ರತ್ತದಲ್ಲಿ ಏರ್ಪಡಿಸಿದ್ದ ಜೀ ವಾಹಿನಿಯ ಮಹಾನಾಯಕ ಧಾರವಾಹಿಯ ಬ್ಯಾನರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಆಳ್ವಿಕೆ ಮಾಡಿದ ಯಾವ ಪಕ್ಷವೂ ಈ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಬಾಬಾ ಸಾಹೇಬರು ಈ ದೇಶದ ಎಲ್ಲ ಜನರಿಗೂ ಅನ್ವಯವಾಗುವಂತಹ ಸಂವಿಧಾನ ರಚಿಸಿದ್ದಾರೆ. ಆದರೆ ಕೆಲವು ಜಾತಿವಾದಿಗಳು ಕೇವಲ ಶೋಷಿತರಿಗಾಗಿ ಸಂವಿಧಾನ ಬರೆಯಲಾಗಿದೆ ಎಂದು ಬಿಂಬಿಸುತ್ತಿರುವುದು ದುರಂತ. ಬಾಬಾ ಸಾಹೇಬರಿಗೆ ಹಲವು ರೀತಿಯ ಅವಮಾನಗಳನ್ನು ನೀಡಲಾಗಿದೆ. ಆದರೂ ಸಹ ಈ ದೇಶದ ಜನ ಒಪ್ಪುವಂತಹ ಕೆಲಸ ಮಾಡಿದ್ದಾರೆ. ದೇಶದ ಜನ ಬಾಬಾ ಸಾಹೇಬರ ಚಿಂತನೆಗಳನ್ನು ಓದಬೇಕು. ಬಾಬಾ ಸಾಹೇಬರನ್ನು ಅರ್ಥಮಾಡಿಕೊಳ್ಳದ ದಲಿತರಿಂದಲೂ ಸಮಾಜಕ್ಕೆ ಅಪಾಯವಿದೆ ಎಂದರು. ದೇಶದ ಮಹಿಳೆಯರುˌ ಶೋಷಿತರು ಹಾಗೂ ಸರ್ವಜನ ಸುಖವಾಗಿ ಬಾಳುತ್ತಿರುವುದು ಬಾಬಾ ಸಾಹೇಬರ ಕೊಡುಗೆಯ ಫಲ ಎಂದರು.
ಈ ಸಂದರ್ಭದಲ್ಲಿ ಭಂತೇಜಿ ಧಮ್ಮನಾಗ ನಾಗಪುರˌ ಚಿಗರಳ್ಳಿಯ ಸಿದ್ಧಬಸವ ಕಬೀರಾನಂದ ಸ್ವಾಮೀಜಿˌ ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿˌ ಶಾಸಕ ಡಾ.ಅಜಯಸಿಂಗ್ˌ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳˌ ವಿಜಯ ಕೇದಾರಲಿಂಗಯ್ಯ ಹಿರೇಮಠˌ ಶಾಂತಗೌಡ ದುಮ್ಮದ್ರಿˌ ರಮೇಶ ಬಾಬು ವಕೀಲˌ ಜಿಪಂ ಸದಸ್ಯ ದಂಡಪ್ಪ ಸಾಹು ಕುರಳಗೇರಾˌ ಚಂದ್ರಶೇಖರ ಹರನಾಳˌ ಮರೆಪ್ಪ ಬಡಿಗೇರˌ ಹಯ್ಯಾಳಪ್ಪ ಗಂಗಾಕರˌಶಾಂತಪ್ಪ ಯಲಗೋಡˌ ಗುರಣ್ಣ ಕಾಚಾಪುರˌ ಡಾ.ಪ್ರಕಾಶ ಬಡಿಗೇರˌ ಗುರಣ್ಣ ಐನಾಪುರˌ ಡಾ.ಅಶೋಕ ದೊಡ್ಮನಿˌ ಬಸವರಾಜ ಕಲಕೇರಿˌ ಅಶ್ವಿನ ಶರ್ಮಾˌ ಗೊಲ್ಲಾಳಪ್ಪ ಗೆಜ್ಜಿˌ ಮಲ್ಲಿಕಾರ್ಜುನ ಯತ್ನಾಳˌ ಮಹೇಂದ್ರ ಬಾಲೂರˌ ಮಂಜುನಾಥ ಗಂಗಾಕರ ಸೇರಿದಂತೆ ಇತರರು ಇದ್ದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…