ಬಿಸಿ ಬಿಸಿ ಸುದ್ದಿ

ಕೆಲಸ ಕಸಿದ ಎಸಿಸಿ ಕಂಪನಿ ವಿರುದ್ಧ ಪ್ರತಿಭಟನೆ

ಕಲಬುರಗಿ: ಕೊರೊನಾ ವೈರಸ್ ನಿಯಮಗಳನ್ನು ಮುಂದಿಟ್ಟು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿ ನಮ್ಮನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಎಸಿಸಿಯ ಲಾಭದಾಯಕ ಮನಸ್ಥಿಯಿಂದಾಗಿ 3000 ಗುತ್ತಿಗೆ ಕಾರ್ಮಿಕರ ಭವಿಷ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ನೆಲ, ಜಲ, ಕಲ್ಲು ಪಡೆದು ನಮ್ಮನ್ನೇ ಕತ್ತು ಹಿಡಿದು ಹೊರ ತಳ್ಳುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ತಿಂಗಳಿಗೆ 26 ಹಾಜರಿ ಕೆಲಸ ನೀಡುವ ಬದಲು ಪುರುಷ ಕಾರ್ಮಿಕರಿಗೆ ಹತ್ತು ದಿನ, ಮಹಿಳಾ ಕಾರ್ಮಿಕರಿಗೆ ನಾಲ್ಕು ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಕೂಡಬೇಕಾದ ದುಸ್ಥಿತಿ ಬಂದಿದೆ. ಸಿಮೆಂಟ್ ಉತ್ಪಾದನೆ ಮೊದಲಿಗಿಂತಲೂ ಉತ್ತಮವಾಗಿದೆ. ದೇಶದ ನಾಲ್ಕು ಕಂಪನಿಗಳಿಗೆ ಕ್ಲಿಂಕರ್ ಸಾಗಾಣಿಕೆಯಾಗುತ್ತಿದೆ. ಪ್ರತಿದಿನ 50 ಬೋಗಿಯುಳ್ಳ ಎರಡು ಗೂಡ್ಸ್ ರೈಲುಗಳ ಮೂಲಕ ಸಿಮೆಂಟ್ ರಫ್ತು ಮಾಡಲಾಗುತ್ತಿದೆ. ಆದಾಯಕ್ಕೇನು ಕೊರತೆಯಿಲ್ಲ. ಕಂಪನಿ ನಷ್ಟದಲ್ಲಿದೆ ಎಂದು ಹೇಳುವ ಮೂಲಕ ಎಸಿಸಿ ಆಡಳಿತ ಕಾರ್ಮಿಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ. ಕಾರ್ಮಿಕರಿಗೆ  ಸಿಗಬೇಕಾದ ಕಾನೂನಾತ್ಮಕ ಸೌಲಭ್ಯಗಳನ್ನು ನೀಡುವಲ್ಲಿ ಎಸಿಸಿ ಕಂಪನಿ ವಿಫಲವಾಗಿದೆ ಎಂದರು.

ಬೆವರು ಸುರಿಸಿ ಕಂಪನಿ ಕಟ್ಟಿರುವ ಕಾರ್ಮಿಕರನ್ನೇ ಕಂಪನಿ ಕಾಲುಕಸದಂತೆ ಕಾಣುತ್ತಿದೆ. ನ್ಯಾಯಬದ್ಧ ಬೇಡಿಕೆಯಿಟ್ಟು ಹೋರಾಡಿದರೆ ನಾನಾ ರೀತಿಯ ಬೆದರಿಕೆ ಹಾಕುತ್ತಿದೆ. ಕಾರ್ಮಿಕರು ಎಸಿಸಿಯಿಂದ ಶೋಷಣೆಗೊಳಗಾಗಿದ್ದಾರೆ. ಬಡ ಕಾರ್ಮಿಕರ ಬದುಕಿನ ಮೇಲೆ ಎಸಿಸಿ ಅಧಿಕಾರಿಗಳು ಕಾಲಿಟ್ಟಿದ್ದಾರೆ. ನಮಗೆ ಕಾರ್ಮಿಕರ ಅವಶ್ಯಕತೆ ಇಲ್ಲ. ಎಷ್ಟು ಬೇಕು ಅಷ್ಟು ಮಂದಿಯನ್ನು ಕೆಲಸಕ್ಕೆ ಕರಿಯುತ್ತೇವೆ. ಬಂದ್ರೆ ಬನ್ನಿ ಬರದಿದ್ದರೆ ಬಿಡಿ. ಕಾರ್ಮಿಕರಿಲ್ಲದೆಯೂ ಕಂಪನಿ ನಡೆಸುವುದು ಹೇಗೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಧರ್ಪದಿಂದ ಹೇಳುತ್ತಾರೆ ಎಂದು ಆರೋಪಿಸಿ, ಎಸಿಸಿಗೆ ಯಾರೂ ಹೇಳೋರಿಲ್ಲ ಕೇಳೋರಿಲ್ಲ ಎಂದು ಗುತ್ತಿಗೆ ಕಾರ್ಮಿಕರು ಕಿಡಿಕಾರಿದರು. ಕೂಡಲೇ ನಮಗೆ ಪ್ರತಿ ನಿತ್ಯ ಕಡ್ಡಾಯವಾಗಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

ಸಾವಿರಾರು ಜನ ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago