ಬಿಸಿ ಬಿಸಿ ಸುದ್ದಿ

ಜನಮನ ಸೆಳೆದ ಶಾಸಕ ಡಾ. ಅಜಯ್ ಸಿಂಗ್ ಗ್ರಾಮ ವಾಸ್ತವ್ಯ

ಕಲಬುರಗಿ: ತಮ್ಮ 47 ನೇ ಹುಟ್ಟುಹಬ್ಬ ಆಚರಣೆ ಕೈಬಿಟ್ಟು ಹಳ್ಳಿಗಳತ್ತ ಹೆಜ್ಜೆ ಹಾಕಿರುವ ಡಾ. ಅಜಯ್ ಸಿಂಗ್ ಇದೇ ಮೊದಲ ಬಾರಿಗೆ ತಮ್ಮ ಮತಕ್ಷೇತ್ರ ಜೇವರ್ಗಿಯ ಜೇರಟಗಿ ಊರಲ್ಲಿ ವಾಸ್ತವ್ಯ ಮಾಡುವ ಮೂಲಕ ತಮ್ಮ ಕನಸಿನ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ್ದು ಮೊದಲ ಪ್ರಯತ್ನದಲ್ಲೇ ಜನಮನ ಸೆಳೆಯುವಲ್ಲಿ ಯಶ ಕಂಡಿದ್ದಾರೆ.

ಗ್ರಾಮ ವಾಸ್ತವ್ಯದಿಂದ ಆತ್ಮಿಯತೆ ಹೆಚ್ಚುತ್ತದೆ ಎಂದು ಹೇಳುತ್ತ ಹಳ್ಳಿಗಳತ್ತ ಚಿತ್ತ ನೆಟ್ಟಿರುವ ಡಾ. ಅಜಯ್ ಸಿಂಗ್ ಅವರನ್ನು ಜೇರಟಗಿಗೆ ಆತ್ಮೀಯವಾಗಿ ಬರಮಾಡಿಕೊಂಡ ಜನತೆ ಊರಲ್ಲಿನ ಹಲವಾರು ಸಮಸ್ಯೆಗಳನ್ನು ಗಮನಕ್ಕೆ ತರುವ ಮೂಲಕ ಪರಿಹಾರಕ್ಕೆ ಆಗ್ರಹಿಸಿದರು.

ಮೋದೀನ್ ಸಾಬ್ ಹಣಗಿಕಟ್ಟಿ ಮನೆಯಲ್ಲಿ ವಾಸ್ತವ್ಯ, ರಮೇಶ, ಸಿದ್ದರಾಮ ಹೊಸ್ಮನಿ ಮನೆಯಲ್ಲಿ ಉಪಹಾರ ಸೇವಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರುವಲ್ಲಿಯೂ ಯಶ ಕಂಡ ಡಾ. ಅಜಯ್ ಸಿಂಗ್ ಪ್ರತಿ ತಿಂಗಳು ವಾಸ್ತವ್ಯ ಮಾಡೋದಾಗಿಯೂ ಗೋಷಿಸಿ ಕ್ಷೇತ್ರದ ಜನರ ಗಮನ ಸೆಳೆಯುವಲ್ಲಿ ಯಶ ಕಂಡಿದ್ದಾರೆ ಎನ್ನಬಹುದು.

ಸಾಕಷ್ಟು ಅನುದಾನ ಬಂದರೂ ಜನರ ಬೇಕು- ಬೇಡ ಅರಿಯದೆ ಸರಿಯಾದ ರೀತಿಯಲ್ಲಿ ಅದನ್ನು ವೆಚ್ಚ ಮಾಡಲು ಆಗದು. ವಾಸ್ತವ್ಯ ಹೊಸ ನುಭವ ನೀಡಿದೆ. ತಂದೆಯವರಾದ ದಿ. ಧರಂಸಿಂಗ್ ಕಟಿರೊಟ್ಟಿ, ಶೇಂಗಾ ಹಿಂಡಿ ತಂದು ಉಣ್ಣಿಸುವ ಮೂಲಕ ಹಳ್ಳಿ ಜನರ ಗೋಳು ಹೇಳುತ್ತಿದ್ದರು. ಹುಟ್ಟಿದಾಗಿನಿಂದ ಇಂದಿಗೂ ಹಳ್ಳಿಯಲ್ಲಿ ಮಲಗಿದ್ದಿಲ್ಲ. ಜೇರಟಗಿಯಲ್ಲಿ ಮಲಗುವ ಮೂಲಕ ಬದುಕಿನಲ್ಲಿ ಹೊಸ ಪಾಠ, ಅನುಭವ ನನ್ನದಾಗಿಸಿಕೊಂಡಿರುವೆ ಎಂದೂ ಡಾ. ಅಜಯ್ ಹೇಳುವ ಮೂಲಕ ತಮ್ಮ ಹೊಸ ಯೋಜನೆಯೊಂದಿಗೆ ಜನರಿಗೆ ಹತ್ತಿರವಾಗುತ್ತ ಹೊರಟಿದ್ದಾರೆ.

ಶಾಸಕರು ಮತ ಹಾಕಿದ ಮೇಲೆ ಊರಿಗೇ ಬರೋದಿಲ್ಲ. ಆದರೆ ಡಾ. ಅಜಯ್ ಸಿಂಗ್ ನಮ್ಮೂರಿಗೆ ಬಂದಿದ್ದಾರೆ. ಇದು ಸಂತಸ ತಂದಿದೆ ಎಂದು ಊರಿನವರೇ ಆದ ವಿಜಯಪುರದಲ್ಲಿ ಉಪನ್ಯಾಸಕರಾಗಿರುವ ಮಾಲೀಪಾಟೀಲ್ ಹೇಳಿದರೆ, ಡಾ. ಅಜಯ್ ಸಿಂಗ್ ನಮ್ಮೂರಿಗೆ ಬಂದು ಸಮಸ್ಯೆ ಕೇಳಿz್ದÉೀ ಖುಷಿಯಾಗಿದೆ ಎಂದು ಮೊಹಮದ್ ಗಪೂರ್ ಹೇಳಿದ್ದಾರೆ. ಇದಲ್ಲದೆ ರಮೇಶ ಹೊಸ್ಮನಿ, ಸಿದ್ದರಾಮ ಸೇರಿದಂತೆ ಅನೇಕರು ಡಾ. ಅಜಯ್ ಸಿಂಗ್ ಅವರಿಗೆ ಅಭಿನಂದಿಸಿದ್ದಾರೆ.

ನಮ್ಮ ದೇಶ ಅಭಿವೃದ್ದಿಯಾಗಬೇಕ್ಕಾದರೆ ಹಳ್ಳಿಗಳ ಅಭಿವೃದ್ದಿಯಾಗಬೇಕು. ಗ್ರಾಮ ವಾಸ್ತವ್ಯದಿಂದ ಜನರ ಜೊತೆಯಲ್ಲಿ ಬೆರೆತು ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತ್ತಾಗುತ್ತದೆ. ಹಾಗೆ ವಾಸ್ತವ್ಯ ಮಾಡುವುದರಿಂದ ಅಲ್ಲಿನ ಜನರ ನಡುವೆ ಅತ್ಮೀಯತೆ ಹೆಚ್ಚುತ್ತದೆ. ಇಡೀ ವರ್ಷ ಪೂರ್ತಿ ಮಹಾ ಮಾರಿ ಕರೊನಾ ಆವರಿಸಿ ಇಡಿ ದೇಶದ ಜನ ತ್ತರಿಸುವಂತ್ತಾಗಿ ಜನ ಜೀವನವೆ ಅಸ್ತವ್ಯಸ್ತವಾದಂತ್ತಾಗಿತ್ತು. 13 ನೂರಕಿಂತ ಹೆಚ್ಚಿನ ಜನರಿಗೆ ಕರೊನಾ ಲಸಿಕೆಯನ್ನು ನೀಡಿದ್ದೆವೆ. ಅಭಿವೃದ್ದಿಯ ಕಾರ್ಯಗಳು ನಿರಂತರ ಪ್ರಕ್ರಿಯೆ ಇದು ಇಂದು ನಾನು ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. -ಡಾ. ಅಜಯ್ ಸಿಂಗ್, ಶಾಸಕರು, ಜೇವರ್ಗಿ

emedialine

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

6 hours ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

18 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

19 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

20 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

20 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

20 hours ago