ಭಾಲ್ಕಿ: ಮರ ಮರ ಮಥನಿಸಿ ಇಡೀ ಅರಣ್ಯ ಸುಡುವಂತೆ ಶರಣರ ಅನುಭಾವದಿಂದ ಭವದುಃಖ ಸುಡುತ್ತದೆ. ಬದುಕು ಸಮಾಧಾನದಿಂದ ಮುನ್ನಡೆಯುತ್ತದೆ ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಲಾದ ಮಾಸಿಕ ಶಿವಾನುಭವಗೋಷ್ಠಿಯ ದಿವ್ಯ ಸನ್ನಿಧಾನವಹಿಸಿ ಪೂಜ್ಯರು ಆಶೀರ್ವಚನಗೈದರು. ನೇತೃತ್ವ ವಹಿಸಿದ್ದ ಪೂಜ್ಯ ಗುರುಬಸವ ಪಟ್ಟದ್ದೇವರು ಭಾರತ ದೇಶದ ಸಂತ ಮಹಾಂತರಲ್ಲಿ ಶರಣರ ಪಾತ್ರ ಹಿರಿದಾಗಿದೆ. ಸಮ್ಮುಖ ವಹಿಸಿದ್ದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಭೌತಿಕ ಸುಖ ದುಃಖ ಕೊಡುತ್ತದೆ. ಅದರ ಬೆನ್ನು ಹತ್ತದೆ ಆಧ್ಯಾತ್ಮ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು.
ಇಂದಿನ ಕಾರ್ಯಕ್ರಮದ ಭಕ್ತಿದಾಸೋಹ ವಹಿಸಿಕೊಂಡಿದ್ದ ಶಾಮಲಾ ವೈಜಿನಾಥರಾವ ಮೇತ್ರೆ ಅವರಿಗೆ ಪೂಜ್ಯರು ಗೌರವಿಸಿದರು. ಮೇತ್ರೆ ಪರಿವಾರದ ಎಲ್ಲರು ಭಾಗವಹಿಸಿದರು. ಲಕ್ಷ್ಮಿ ಸಂಗಮೆ, ಸರಸ್ವತಿ ಬಿರಾದಾರ ಮತ್ತು ಅಕ್ಕನಬಳಗದ ಶರಣೆಯರಿಂದ ವಚನ ಭಜನೆ ನಡೆಯಿತು. ಬಾಬು ಬೆಲ್ದಾಳ ಸ್ವಾಗತಿಸಿದರು. ವೀರಣ್ಣ ಕುಂಬಾರ ನಿರೂಪಿಸಿದರು. ರಾಜು ವಂದಿಸಿದರು.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…