ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಗಂದಗೆ ಪೆನಾಲ್ನಿಂದ ಆಯ್ಕೆಯಾದ ನೂತನ ಸದಸ್ಯರಿಗೆ ಸಾಮೂಹಿಕವಾಗಿ ಅಭಿನಂದಿಸಿ ಶಾಲು ಹೊದಿಸಿ ಸತ್ಕರಿಸಲಾಯಿತು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜಶೇಖರ್ ಮಂಗಲಗಿ ಅವರು ಮಾತನಾಡಿ, ವಿವಿಧ ಇಲಾಖೆಗಳ ಒಟ್ಟು ೬೨ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಗಂದಗೆ ಪೆನಾಲ್ನಿಂದ ೫೦ ಸದಸ್ಯರು ಆಯ್ಕೆಯಾಗಿದ್ದು, ಸರ್ಕಾರಿ ನೌಕರ ಸಂಘದ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ ಎಂದರು.
ನೂತನವಾಗಿ ಆಯ್ಕೆಯಾದ ಆರೋಗ್ಯ ಇಲಾಖೆಯ ಓಂಕಾರ್ ಮಲ್ಲಿಗೆ, ಜಿಲ್ಲಾ ಆಸ್ಪತ್ರೆಯ ಪ್ರಕಾಶ್ ಮಡಿವಾಳ್, ಪ್ರಾಥಮಿಕ ಶಾಲೆಗಳ ಪ್ರಭುಲಿಂಗ್, ಗ್ರಾಹಕ ನ್ಯಾಯಾಲಯದ ಸಿದ್ದಮ್ಮ, ಆಯುಷ್ ಇಲಾಖೆಯ ಡಾ. ವೈಶಾಲಿ ಎಸ್. ಮತ್ತು ಸಾಂಖಿಕ ಇಲಾಖೆಯ ಶರಣಯ್ಯ ಎಸ್. ಮಠಪತಿಯವರು ಮಾತನಾಡಿ, ತಮ್ಮ ತಮ್ಮ ಚುನಾವಣೆಯ ಅನುಭವಗಳನ್ನು ಹಂಚಿಕೊಂಡಾಗ ಸಭೆಯು ನಗೆಗಡದಲ್ಲಿ ತೆಲಾಡಿತು. ಮುಂದುವರೆದು ರಾಜೇಂದ್ರಕುಮಾರ ಗಂದಗೆಯವರ ನೇತ್ರತ್ವದಲ್ಲಿ ಜಿಲ್ಲೆಯ ನೌಕರರ ಸಮಸ್ಯೆ ಬಗೆಹರಿಸಲು ಒಗಟ್ಟಿನಿಂದ ಹೋರಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರಕುಮಾರ್ ಗಂದಗೆಯವರು ಮಾತನಾಡಿ, ಕಳೆದ ಅವಧಿಯಲ್ಲಿ ತಮ್ಮ ತಂಡವು ಮಾಡಿದ ಕೆಲಸಗಳನ್ನು ಮೆಚ್ಚಿಕೊಂಡು ಜಿಲ್ಲೆಯ ಸರ್ಕಾರಿ ನೌಕರರು ದಾಖಲಾತ್ಮಕವಾದ ತಮ್ಮ ತಂಡದ ೫೦ ಸದಸ್ಯರನ್ನು ಗೆಲ್ಲಿಸಿ ಆಶಿರ್ವದಿಸಿದ್ದಾರೆ. ಸರ್ಕಾರಿ ನೌಕರರ ವಿಶ್ವಾಸವನ್ನು ಉಳಿಸಿಕೊಂಡು ಪ್ರಮಾಣಿಕವಾಗಿ ಸರ್ಕಾರಿ ನೌಕರರ ಸೇವೆಯಲ್ಲಿ ತೊಡಗಿಸಿಕೊಳ್ಳುವೆನೆಂದು ಹೇಳಿದರು. ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ತಂಡವೇ ಗೆಲ್ಲುವುದು ನಿಶ್ಚಿತವೆಂದು ಘೋಷಿಸಿದರು.
ರಾಜಕುಮಾರ್ ಪಾಟೀಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಚಪ್ಪ ಪಾಟೀಲ್, ಪ್ರಕಾಶ್ ಮಾಳಗೆ, ಮಾಣಿಕಪ್ಪ ಗೋರನಾಳೆ, ರಾಜೇಂದ್ರ ಜೊನ್ನಿಕೇರಿ, ಕುಶಾಲರಾವ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…