ನೌಕರರ ಸಂಘದ ಚುನಾವಣೆ: ಗಂದಗೆ ಪೆನೆಲ್‌ನಿಂದ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ

0
65

ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಗಂದಗೆ ಪೆನಾಲ್‌ನಿಂದ ಆಯ್ಕೆಯಾದ ನೂತನ ಸದಸ್ಯರಿಗೆ ಸಾಮೂಹಿಕವಾಗಿ ಅಭಿನಂದಿಸಿ ಶಾಲು ಹೊದಿಸಿ ಸತ್ಕರಿಸಲಾಯಿತು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜಶೇಖರ್ ಮಂಗಲಗಿ ಅವರು ಮಾತನಾಡಿ, ವಿವಿಧ ಇಲಾಖೆಗಳ ಒಟ್ಟು ೬೨ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಗಂದಗೆ ಪೆನಾಲ್‌ನಿಂದ ೫೦ ಸದಸ್ಯರು ಆಯ್ಕೆಯಾಗಿದ್ದು, ಸರ್ಕಾರಿ ನೌಕರ ಸಂಘದ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ ಎಂದರು.

Contact Your\'s Advertisement; 9902492681

ನೂತನವಾಗಿ ಆಯ್ಕೆಯಾದ ಆರೋಗ್ಯ ಇಲಾಖೆಯ ಓಂಕಾರ್ ಮಲ್ಲಿಗೆ, ಜಿಲ್ಲಾ ಆಸ್ಪತ್ರೆಯ ಪ್ರಕಾಶ್ ಮಡಿವಾಳ್, ಪ್ರಾಥಮಿಕ ಶಾಲೆಗಳ ಪ್ರಭುಲಿಂಗ್, ಗ್ರಾಹಕ ನ್ಯಾಯಾಲಯದ ಸಿದ್ದಮ್ಮ, ಆಯುಷ್ ಇಲಾಖೆಯ ಡಾ. ವೈಶಾಲಿ ಎಸ್. ಮತ್ತು ಸಾಂಖಿಕ ಇಲಾಖೆಯ ಶರಣಯ್ಯ ಎಸ್. ಮಠಪತಿಯವರು ಮಾತನಾಡಿ, ತಮ್ಮ ತಮ್ಮ ಚುನಾವಣೆಯ ಅನುಭವಗಳನ್ನು ಹಂಚಿಕೊಂಡಾಗ ಸಭೆಯು ನಗೆಗಡದಲ್ಲಿ ತೆಲಾಡಿತು. ಮುಂದುವರೆದು ರಾಜೇಂದ್ರಕುಮಾರ ಗಂದಗೆಯವರ ನೇತ್ರತ್ವದಲ್ಲಿ ಜಿಲ್ಲೆಯ ನೌಕರರ ಸಮಸ್ಯೆ ಬಗೆಹರಿಸಲು ಒಗಟ್ಟಿನಿಂದ ಹೋರಾಡೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರಕುಮಾರ್ ಗಂದಗೆಯವರು ಮಾತನಾಡಿ, ಕಳೆದ ಅವಧಿಯಲ್ಲಿ ತಮ್ಮ ತಂಡವು ಮಾಡಿದ ಕೆಲಸಗಳನ್ನು ಮೆಚ್ಚಿಕೊಂಡು ಜಿಲ್ಲೆಯ ಸರ್ಕಾರಿ ನೌಕರರು ದಾಖಲಾತ್ಮಕವಾದ ತಮ್ಮ ತಂಡದ ೫೦ ಸದಸ್ಯರನ್ನು ಗೆಲ್ಲಿಸಿ ಆಶಿರ್ವದಿಸಿದ್ದಾರೆ. ಸರ್ಕಾರಿ ನೌಕರರ ವಿಶ್ವಾಸವನ್ನು ಉಳಿಸಿಕೊಂಡು ಪ್ರಮಾಣಿಕವಾಗಿ ಸರ್ಕಾರಿ ನೌಕರರ ಸೇವೆಯಲ್ಲಿ ತೊಡಗಿಸಿಕೊಳ್ಳುವೆನೆಂದು ಹೇಳಿದರು. ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ತಂಡವೇ ಗೆಲ್ಲುವುದು ನಿಶ್ಚಿತವೆಂದು ಘೋಷಿಸಿದರು.

ರಾಜಕುಮಾರ್ ಪಾಟೀಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಚಪ್ಪ ಪಾಟೀಲ್, ಪ್ರಕಾಶ್ ಮಾಳಗೆ, ಮಾಣಿಕಪ್ಪ ಗೋರನಾಳೆ, ರಾಜೇಂದ್ರ ಜೊನ್ನಿಕೇರಿ, ಕುಶಾಲರಾವ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here