ಬಿಸಿ ಬಿಸಿ ಸುದ್ದಿ

ಉದ್ಯೋಗಕ್ಕಾಗಿ ಆಗ್ರಹಿಸಿ ಎಐಡಿವೈಒ ಸಹಿ ಸಂಗ್ರಹ ಚಳುವಳಿ

ವಾಡಿ: ಉದ್ಯೋಗ ಭರ್ತಿ ಹಾಗೂ ನಿರುದ್ಯೋಗ ಭತ್ತೆಗಾಗಿ ಆಗ್ರಹಿಸಿ ಎಐಡಿವೈಒ ಸಂಘಟನೆ ವತಿಯಿಂದ ಗುರುವಾರ ವಾಡಿ ಪಟ್ಟಣದಲ್ಲಿ ಸಹಿ ಸಂಗ್ರಹ ಚಳುವಳಿ ನಡೆಯಿತು.

ಚಳುವಳಿ ಉದ್ದೇಶಿಸಿ ಮಾತನಾಡಿದ ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಪಾಣೇಗಾಂವ, ಕಲ್ಯಾಣ ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಎಪ್ಪತ್ತು ಸಾವಿರ ಮತ್ತು ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಇನ್ನೊಂದೆಡೆ ಲಕ್ಷಾಂತರ ಯುವಜನರು ಅಂಕಪಟ್ಟಿಗಳನ್ನು ಹಿಡಿದುಕೊಂಡು ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ.

ದೇಶದಲ್ಲಿ ವರ್ಷಕ್ಕೆ ೧.೩೫ ಕೋಟಿ ಯುವಕರು ನಿರುದ್ಯೋಗಿ ಪಟ್ಟಿಗೆ ಸೇರುತ್ತಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಕನಿಷ್ಠ ಎರಡು ಲಕ್ಷ ಉದ್ಯೋಗವೂ ಸೃಷ್ಠಿಸಲಿಲ್ಲ. ಬದಲಿಗೆ ಹುದ್ದೆಯಲ್ಲಿರುವವರನ್ನು ಬೀದಿಗೆ ತಳ್ಳುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವೇ ದಿನಗಳಲ್ಲಿ ವಿಸ್ಟ್ರಾನ್‌ ಕಂಪನಿಯ ಉತ್ಪಾದನೆ ಪುನರಾರಂಭ: ಸಚಿವ ಜಗದೀಶ್‌ ಶೆಟ್ಟರ್‌

ದೇಶದಲ್ಲಿ ಬಡತನ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಜ್ವಲಂತ ಸಮಸ್ಯೆಗಳು ಜನತೆಯನ್ನು ಕಾಡುತ್ತಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯ ದಿನಗಳು ಬರುತ್ತವೆ ಎಂದರು. ಅದರೆ ಒಳ್ಳೆಯ ದಿನಗಳು ಬಂದಿದ್ದು ಮಾತ್ರ ದೇಶದ ಬಂಡವಾಳಶಾಹಿ ಶೋಷಕರಾದ ಅಂಬಾನಿ ಮತ್ತು ಅದಾನಿಗಳಿಗೆ ಎಂದು ಟೀಕಾಪ್ರಹಾರ ನಡೆಸಿದ ಪಾಣೆಗಾಂವ, ದುಡಿಯುವ ಎಲ್ಲಾ ಕೈಗಳಿಗೂ ಉದ್ಯೋಗ ನೀಡಬೇಕು. ಉದ್ಯೋಗ ನೀಡುವವರೆಗೆ ನಿರುದ್ಯೋಗ ಭತ್ತೆ ಜಾರಿಗೊಳಿಸಬೇಕು. ಖಾಲಿ ಇರುವ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡಬೇಕು. ಉದ್ಯೋಗ ಮೂಲಭೂತ ಹಕ್ಕಾಗಬೇಕು. ಖಾಯಂ ಉದ್ಯೋಗ ಖಾತ್ರಿಪಡಿಸಬೇಕು. ಶ್ರಮಾದಾರಿತ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿದ್ದ ನಗರದ ಗಣ್ಯವ್ಯಕ್ತಿ ವೀರಭದ್ರಪ್ಪ ಕೇಶ್ವಾರ ಅವರು ನಿರುದ್ಯೋಗ ಸಮಸ್ಯೆಯ ವಿರುದ್ಧ ಸಹಿ ಹಾಕುವ ಮೂಲಕ ಚಳುವಳಿಗೆ ಚಾಲನೆ ನೀಡಿದರು. ಎಐಡಿವೈಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ಉಪಾಧ್ಯಕ್ಷ ರಾಜು ಒಡೆಯರ, ಗೌತಮ ಪರತೂರಕರ, ಶ್ರೀಶೈಲ ಕೆಂಚಗುಂಡಿ, ವಿಠ್ಠಲ ರಾಠೋಡ, ಬಸವರಾಜ ನಾಟೇಕರ, ಸಾಯಬಣ್ಣ ಯಾದವ, ಮಹೆಬೂಬ ಪಟೇಲ ಪಾಲ್ಗೊಂಡಿದ್ದರು.

ಕೆಲವೇ ದಿನಗಳಲ್ಲಿ ವಿಸ್ಟ್ರಾನ್‌ ಕಂಪನಿಯ ಉತ್ಪಾದನೆ ಪುನರಾರಂಭ: ಸಚಿವ ಜಗದೀಶ್‌ ಶೆಟ್ಟರ್‌

sajidpress

Recent Posts

ಹೊಸಬರಿಗೆ ಅವಕಾಶ ನೀಡಲು ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದೇವೆ

ಸುರಪುರ: ಕಳೆದ 12 ವರ್ಷಗಳಿಂದ ತಾಲೂಕಿನ ಸಮಾಜದ ಸೇವೆ ಮಾಡಲು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮೂಲಕ ಸೇವೆ…

2 mins ago

ಹತೀಮ್ ಫರೀದಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ

ಸುರಪುರ: ನಗರದ ಉರ್ದು ಪತ್ರಿಕೆ ವರಿದಿಗಾರ ಖಾಜಾ ಕಲೀಮುದ್ದೀನ್ ಫರೀದಿ ಅವರ ಪುತ್ರ ಹತೀಮ್ ಫರೀದಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ…

4 mins ago

ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಅಗತ್ಯ

ಶಹಾಬಾದ: ಶಿಕ್ಷಣ ಒಂದು ಪ್ರಬಲ ಅಸ್ತ್ರ.ಅದನ್ನು ಅಲಂಕರಿಸಲು ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮಾಡಬೇಕೆಂದು ಭಂಕೂರಿನ ಕರ್ನಾಟಕ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ…

5 mins ago

ಶಹಾಬಾದ: ವ್ಯಕ್ತಿತ್ವ ವಿಕಸನ ಶಿಬಿರ

ಶಹಾಬಾದ: ಶಿಕ್ಷಣ ಒಂದು ಪ್ರಬಲ ಅಸ್ತ್ರ.ಅದನ್ನು ಅಲಂಕರಿಸಲು ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮಾಡಬೇಕೆಂದು ಭಂಕೂರಿನ ಕರ್ನಾಟಕ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ…

7 mins ago

32ನೇ ಶ್ರಾವಣಮಾಸ ಔತಣ ಕೂಟ, ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ

ಕಲಬುರಗಿ: ಹೊಸ ಜೇವರ್ಗಿ ರಸ್ತೆಯಲ್ಲಿರುವ ನಿಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಜಮಶೆಟ್ಟಿ ಪರಿವಾರದಿಂದ ಆಯೋಜಿಸಿದ 32 ನೇ ಶ್ರಾವಣಮಾಸ ಔತಣ ಕೂಟ…

10 mins ago

ಶ್ರೀ ಗುರು ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ 13ನೇ ವಾರ್ಷಿಕ ಸಭೆ

ಕಲಬುರಗಿ: ನಗರದ ನೆಹರು ಗಂಜ್ ಪ್ರದೆಶದಲ್ಲಿರುವ ಗುಲಬರ್ಗಾ ದಾಲ್ ಮಿಲ್ಲರ್ ಅಸೋಸಿಯನ್ ಆಡಿಟೋರಿಯಮ್‍ನಲ್ಲಿ ಭಾನುವಾರ ಶ್ರೀ ಗುರು ಸೌಹಾರ್ದ ಪತ್ತಿನ…

15 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420