ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮದ ಹೊಳಿ ಯಲ್ಲಮ್ಮಾ ದೇವಿಯ ಸ್ನಾನ ಘಟ್ಟದ ಭೀಮಾನದಿಯ ಮೊದಲ ಹಂತದ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಬ್ರಿಗೇಡ ಸಂಚಾಲಕರಾದ ಆನಂದ ಶೆಟ್ಟಿ ಹಾಗೂ ರಾಹುಲ ಸುತಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಕ್ಷೇತ್ರ ಮಣ್ಣೂರ ಗ್ರಾಮದ ಹೊಳಿ ಯಲ್ಲಮ್ಮಾ ದೇವಿಯ ದೇವಸ್ಥಾನ ಭೀಮಾ ನದಿಯ ದಡದಲ್ಲಿ ಇರುವುದರಿಂದ ದೇವಿಯ ದರ್ಶನಕ್ಕೆ ದಿನಾಲು ವಿವಿದಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ ಭೀಮಾನದಿಯಲ್ಲಿ ಸ್ನಾನ ಮಾಡುತ್ತಾರೆ ಹೀಗಾಗಿ ನದಿಯಲ್ಲಿ ಕಸ, ಕಡ್ಡಿ, ಪ್ಲಾö್ಯಸ್ಟಿಕ್ ಬಾಟಲಿಗಳು, ಹಾಗೂ ಭಕ್ತರು ಮಡಿ ಬಟ್ಟೆಗಳನ್ನು ನದಿಯಲ್ಲಿ ಬಿಡುವದರಿಂದ ನದಿಯಲ್ಲಿ ತ್ಯಾಜ್ಯ ಹೆಚ್ಚಾಗಿದೆ ಹೀಗಾಗಿ ನದಿಯ ನೀರು ಕಲುಷಿತಗೊಳ್ಳುತ್ತಿರುವುದನ್ನು ನೋಡಿ ನಮ್ಮ ಬ್ರಿಗೇಡ್ ತಂಡ ತರುಣರು ಸೇರಿ ಸ್ವಚ್ಚತೆಗೆ ಮುಂದಾಗಿದ್ದೇವೆ ಎಂದರು.
ಶೀಘ್ರದಲ್ಲಿ ಬೇಡಿಕೆ ಇಡೇರದಿದ್ದರೆ ಹೋರಾಟ ಖಚಿತ ಉಮೇಶ
ಈ ಸ್ವಚ್ಚತಾ ಕಾರ್ಯದಲ್ಲಿ ಸುಮಾರು ೪೦ಕ್ಕೂ ಹೆಚ್ಚು ಬ್ರಿಗೇಡ ಕಾರ್ಯಕರ್ತರು ಭಾಗಿಯಾಗಿ ಸುಮಾರು ೬ ಟಾಕ್ಟರ್ನಷ್ಟು ತ್ಯಾಜ್ಯವನ್ನು ಹೊರತೆಗೆಯಲಾಗಿದೆ ಎಂದು ಹೇಳಿದ ಅವರು ಈ ಸ್ವಚ್ಚತಾ ಕಾರ್ಯ ತಾಲೂಕಿನ ಗುಡಿ-ಗುಂಡಾರ, ದೇವಸ್ಥಾನಗಳ ಆವರಣ, ಗೂಪೂರಗಳು ಸುತ್ತ-ಮುತ್ತ, ಪುರಾತನ ದೇಗುಲಗಳ ರಕ್ಷಣೆ ಹಾಗೂ ಸ್ವಚ್ಚತೆ ಮಾಡಲಾಗುತ್ತಿದೆ ಅಷ್ಟೇ ಅಲ್ಲದೇ ತಾಲೂಕಿನ ವಿವಿಧ ಮಹಾಪುರಷರ, ಶರಣರ, ಸಂತರ, ಋಷಿಮುನಿಗಳ ವೃತ್ತಗಳ ಸುತ್ತ ಮುತ್ತ ಸ್ವಚ್ಚತೆ ಕಾಪಾಡುವ ಕೆಲಸ ಬ್ರಿಗೇಡ ಯುವ ತರುಣರಿಂದ ನಿರಂತರ ಸಮಾಜಮುಖಿ ಸೇವೆ ಮಾಡಲಾಗುತ್ತಿದೆ ಎಂದ ಅವರು ಮಣ್ಣೂರನಲ್ಲಿ ನಡೆತ್ತಿರುವ ಸ್ವಚ್ಚತಾ ಕಾರ್ಯ ತಾಲೂಕಿನ ಸುಕ್ಷೇತ್ರ ಚಿನ್ಮಯಗಿರಿ ಮಠದ ಶ್ರೀ ವೀರ ಮಹಾಂತ ಶಿವಾಚಾರ್ಯರ ಜನ್ಮ ದಿನದ ಅಂಗವಾಗಿ ಅವರಿಗೆ ಈ ಸೇವೆ ಸಮರ್ಪಣೆ ಮಾಡಲಾಗುವುದು ಎಂದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…