ಬಿಸಿ ಬಿಸಿ ಸುದ್ದಿ

ಹಿರಿಯರನ್ನು ಗೌರವಿಸುವ ಮನೋಭಾವ ಯುವಜನತೆ ಬೆಳೆಸಿಕೊಳ್ಳಬೇಕು: ಜಯಶ್ರೀ ಮತ್ತಿಮಡು

ಕಲಬುರಗಿ: ಸಮಾಜದಲ್ಲಿನ ಹಿರಿಯರನ್ನು ಗೌರವಿಸುವ ಮನೋಭಾವ ಇಂದಿನ ಯುವಜನತೆ ಬೆಳೆಸಿಕೊಳ್ಳುವುದರ ಮೂಲಕ ಅವರ ಜೀವನ ಅನುಭವ ಹಾಗೂ ಮಾರ್ಗದರ್ಶನ ಪಡೆದು ಸುಂದರ ಬದುಕು ರೂಪಿಸಿಕೊಳ್ಳುವಂತೆ ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮಡು ಕರೆ ನೀಡಿದರು.

ನಗರದ ಸೈಯದ ಚಿಂಚೋಳಿಸ ರಸ್ತೆಯಲ್ಲಿರುವ ಮಹಾದೇವಿ ವೃದ್ಧಾಶ್ರಮದಲ್ಲಿ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರಾದ ಸುರೇಶ ಎಸ್.ತಂಗಾ ಅವರು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರ ಜನ್ಮ ದಿನದ ಅಂಗವಾಗಿ ಆಯೋಜಿಸಿದ ಪ್ರಸಾದ ವಿತರಣೆ ಸಮಾರಂಭವನ್ನು ಹಿರಿಯರಿಗೆ ಊಟ ಬಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದ ಜೊತೆಗೆ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ನೀಡುವುದು ಅತ್ಯವಶ್ಯವಾಗಿದ್ದು ಸಂಸ್ಕಾರ ಕಲಿತ ಮಗು ಸಂತಸದಿಂದ ಹಾಗೂ ಸಮಾಜಕ್ಕೆ ಶಕ್ತಿಯಾಗಿ ಬೆಳೆಯಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.  ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ ಸುರೇಶ ತಂಗಾ ಅವರಿಗೆ ಮತ್ತಿಮಡು ರವರು ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಶಹಾಬಾದ ನಗರ ಸಭೆಯ ಸದಸ್ಯರಾದ ರವಿ ರಾಠೋಡ, ಜೈನ ಸಮಾಜದ ಯುವ ಮುಖಂಡರಾದ ರಾಜೇಂದ್ರ ಕುಣಚಗಿ, ಬಿ.ಜೆ.ಪಿ. ಮಹಿಳಾ ಪ್ರಮುಖರಾದ ಭಾಗೀರಥಿ ಗುನ್ನಾಪೂರ ಮುಖಂಡರಾದ ಮಂಜುನಾಥ ವಾರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಂ.ಡಿ.ಸಿ. ನಿರ್ದೇಶಕರಾದ ಸುರೇಶ ಎಸ್.ತಂಗಾ ವಹಿಸಿದ್ದರು. ವೃದ್ಧಾಶ್ರಮದಲ್ಲಿರುವ ವಯೋವೃದ್ಧರಿಗೆ ಜನ್ಮ ದಿನದ ಅಂಗವಾಗಿ ಹೋಳಿಗೆ, ಹಾಲು, ತುಪ್ಪದ ಪ್ರಸಾದ ವ್ಯವಸ್ಥೆ ಮಾಡಿರುವ ಕಾರ್ಯ ಎಲ್ಲರಿಂದ ಪ್ರಶಂಸನೆಗೊಳಗಾಯಿತು.

emedialine

Recent Posts

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. 'ವ' ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ…

11 mins ago

ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ

ಕಲಬುರಗಿ: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ…

16 mins ago

ತಾಜಸುಲ್ತಾನಪುರ: ಶಾಲಾ ಸಂಸತ್ತು ರಚನೆ

ಕಲಬುರಗಿ: ನಗರ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಕೆಎಸ್ ಆರ್ ಪಿ ಸರಕಾರ ಪ್ರೌಢ ಶಾಲೆ ಕೆ. ಎಸ್. ಆರ್. ಪಿ…

20 mins ago

“ಸಸ್ಯಾಗ್ರಹ”-ಸಸಿ ನೆಡುವ ಕಾರ್ಯಕ್ರಮಕ್ಕೆ ಡಾ. ತೇಜಸ್ವಿನಿ ಅನಂತಕುಮಾರ ಚಾಲನೆ

ಕಲಬುರಗಿ: ನಗರದ ವಾರ್ಡ್ ನಂಬರ್ 55ರಲ್ಲಿ ಬರುವ ಸಾಯಿರಾಂ ಕಾಲೋನಿ ಉದ್ಯಾನವನದಲ್ಲಿ ಅದಮ್ಯ ಚೇತನ ವತಿಯಿಂದ ಆಯೋಜಿಸಿದ್ದ "ಸಸ್ಯಾಗ್ರಹ"-ಸಸಿ ನೆಡುವ…

24 mins ago

ಪಿಎಸ್ಐ ಯಶೋಧ ಕಟಕೆಗೆ ಸನ್ಮಾನ

ಕಲಬುರಗಿ: ನಗರದ ಬ್ರಹ್ಮಪುರ ಪೆÇಲೀಸ ಠಾಣೆಗೆ ಅಧಿಕಾರ ವಹಿಸಿಕೋಂಡ ಪಿಎಸ್‍ಐ ಯಶೋಧ ಕಟಕೆ ಅವರುನ್ನು ಶ್ರೀ ಶರಣ ಡೋಹರ ಕಕ್ಕಯ್ಯ…

26 mins ago

ಮೇಯರ್ ವಿಶಾಲ ದರ್ಗಯಿಂದ ಪ್ಲೇಟ್ ಬ್ಯಾಂಕ್‍ ಉದ್ಘಾಟನೆ

ಕಲಬುರಗಿ: ಬಸವೇಶ್ವರ ಆಸ್ಪತ್ರೆಯ ಪಕ್ಕದಲ್ಲಿರುವ ಸ್ವಾಭಿಮಾನ್ ಸ್ವದೇಶಿ ಮಾರ್ಟ್‍ನಲ್ಲಿ ಅದಮ್ಯ ಚೇತನ ವತಿಯಿಂದ ಅನಂತ ಪ್ಲೇಟ್ ಬ್ಯಾಂಕ್‍ನ್ನು ಮೇಯರ್ ವಿಶಾಲ…

29 mins ago