ಸನ್ಮಯ ರುದ್ರವಾಡಿ ಅಮೋಘ ಶತಕ, ಕಲಬುರಗಿಗೆ ಭರ್ಜರಿ ಗೆಲುವು

ಕಲಬುರಗಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಿಂದ ಅಂಡರ್ -16 ರಾಜ್ಯ ತಂಡದ ಆಯ್ಕೆಗಾಗಿ ಇಲ್ಲಿನ ಖಾಜಾ ಬಂದೆ‌ನವಾಜ್ ಟರ್ಫ್ ಮೈದಾನದಲ್ಲಿ‌ ಶುಕ್ರವಾರ ನಡೆದ 50 ಓವರ್ ಗಳ ಸೀಮಿತ ಪಂದ್ಯದಲ್ಲಿ ಸನ್ಮಯ ರುದ್ರವಾಡಿ ಅವರ ಭರ್ಜರಿ ಶಕತದ ನೆರವಿನಿಂದ ಬಾಗಲಕೋಟೆ ತಂಡದ ವಿರುದ್ಧದ ಪಂದ್ಯದಲ್ಲಿ ಕಲಬುರಗಿ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಅಯ್ದುಕೊಂಡ ಬಾಗಲಕೋಟೆ ತಂಡದ ನಾಯಕ ಪ್ರಭು ಸೊಸಾಲಟ್ಟಿ ಕಲಬುರಗಿ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಅವಕಾಶ ನೀಡಿದರು. ಅದರಂತೆ ಕಲಬುರಗಿ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ 280 ರನ್ ಗಳಿಸಿ ಎದುರಾಳಿ ತಂಡಕ್ಕೆ ಬೃಹತ್ ಮೊತ್ತದ ಸವಾಲು ಒಡ್ಡಿತು.

ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂದು ಹೆತ್ತ ತಾಯಿ ಮೇಲೆ ಕಲ್ಲು ಹಾಕಿ ಹತ್ಯೆ

ಆರಂಭಿಕ ಅಟಗಾರನಾಗಿ ಕಣಕ್ಕಿಳಿದ ಕಲಬುರಗಿಯ ಯುವಕ ಸನ್ಮಯ ರುದ್ರವಾಡಿ ಅವರು 14 ಬೌಂಡರಿ, 4 ಸಿಕ್ಸರ್ ಸಿಡಿಸುವುದದೊಂದಿಗೆ ಅಮೋಘ ಶತಕ ಬಾರಿಸಿ ಪ್ರೇಕ್ಷಕರ‌ ಚಪ್ಪಾಳೆ ಗಿಟ್ಟಿಸಿದರು. ಪರಿಣಾಮ ಕಲಬುರಗಿ ತಂಡ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.147 ಎಸೆತದಲ್ಲಿ 128 ರನ್ ಗಳಿಸಿದ ಸನ್ಮಯ ರುದ್ರವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ತಂಡದ ಮತ್ತೋರ್ವ ಬ್ಯಾಟ್ಸ್ ಮೆನ್ ಸುಹಾಸ ಮಾಲಿಪಾಟೀಲ ಅವರೊಂದಿಗೆ 100 ಕ್ಕೂ ಹೆಚ್ಚಿನ ರನ್ ಗಳ ಜೊತೆಯಾಟವು ಹೆಚ್ಚಿನ ರನ್‌ ಪೇರಿಸಲು ಸಹಾಯವಾಯಿತು.

ಕಲಬುರಗಿ ತಂಡದ ಬೃಹತ್ ಮೊತ್ತ‌ ಬೆನ್ನತ್ತಿದ ಬಾಗಲಕೋಟೆ ತಂಡ 24.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 85 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಕಲಬುರಗಿ ತಂಡದ ಬೌಲರ್ ಗಳ ಮಾರಕ ದಾಳಿ ಬಾಗಲಕೋಟೆ ತಂಡವನ್ನು ಎರಡಂಕಿಗೆ ಕಟ್ಟಿಹಾಕಿತು. ಅಂತಿಮವಾಗಿ 195 ರನ್ ಗಳೊಂದಿಗೆ ಲಕ್ಷ್ಮೀಕಾಂತ ಸೂರ್ಯವಂಶಿ ಅವರ ನಾಯಕತ್ವದ ಕಲಬುರಗಿ ತಂಡ ಗೆಲುವಿನ ನಗೆ ಬೀರಿತು.

ಕೋವಿಡ್ ಹಿನ್ನೆಲೆ: ಡಿ.ಸಿ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದೂಡಿಕೆ

ರುದ್ರವಾಡಿಗೆ ಮ್ಯಾನ್ ಆಪ್ ದಿ‌ ಮ್ಯಾಚ್: ಅಮೋಘ ಶತಕದಿಂದ ಕಲಬುರಗಿ ತಂಡದ ಗೆಲುವಿಗೆ ಕಾರಣರಾದ ಸನ್ಮಯ ರುದ್ರವಾಡಿ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಘೋಷಿಸಿ ಪಂದ್ಯದ ನಂತರ‌ ಮೆಡೆಲ್‌ ನೀಡಿ ಗೌರವಿಸಲಾಯಿತು.

emedialine

Recent Posts

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

50 mins ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

57 mins ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

1 hour ago

PDA ಕಾಲೇಜಿನಲ್ಲಿ ಸೆ. 13,14 ರಂದು ವಿಚಾರ ಸಂಕಿರಣ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಾಳೆಯಿಂದ ಎರಡುದಿನಗಳ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ…

1 hour ago

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

1 hour ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420