ಮನೆಯಿಂದಾನೆ ಯುಗಾದಿ
ಯುಗದ ಆದಿ ದಿನವಿಂದು ಯುಗಾದಿ.
ಹರುಷದ ಹಾದಿ, ಹೊಸ ವರ್ಷದ ದಿನವಿದು ಯುಗಾದಿ.
ಕರೋನಾದಿಂದ ಅಳಿಸಲಾಗದ ಘಟಿಮನಸ್ಸಿನ
ಮನೆಯಿಂದಾನೆ ಯುಗಾದಿ.

ಬ್ರಹ್ಮ ದೇವನು ವಿಶ್ವ ಸೃಷ್ಟಿಸಿದ ದಿನವಿದು ಯುಗಾದಿ.
ವರ್ಷದ ಆರಂಭದ ದಿನವಿದು ಯುಗಾದಿ.
ಕರೋನಾದಿಂದ ತಡೆಯಲಾಗದ ಸುಚಿ ಮನಸ್ಸುಗಳ ಹಬ್ಬವಿದು
ಮನೆಯಿಂದಾನೆ ಯುಗಾದಿ.

ಚೈತ್ರಶುದ್ದ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ
ಜೀವಸಂಕುಲವು ಜನಸಿದ ದಿನವಿದು ಯುಗಾದಿ.
ಕರೋನಾದಿಂದ ನಮ್ಮಿಂದ ಅಗಲಿಸಲಾಗದ ಹಬ್ಬವಿದು
ಮನೆಯಿಂದಾನೆ ಯುಗಾದಿ.

ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕವಾದ ದಿನವಿದು ನಮ್ಮ ಯುಗಾದಿ.
ಚೀದಿರಾಜ್ಯದರಸನಿಗೆ ಇಂದ್ರನು ವೈಜಯಂತಿ ಮಾಲೆಯನ್ನು
ಕೊಟ್ಟ ದಿನವಿದು ಯುಗಾದಿ.
ಕರೋನಾದಿಂದ ನಮ್ಮ ಆಚರಣೆ ನಿಲ್ಲದ ಹಬ್ಬವಿದು
ಮನಯಿಂದಾನೆ ಯುಗಾದಿ

ವಿಶ್ವಕ್ಕೆ ಬೆಳಕು ನೀಡಿದ ಸೂರ್ಯಚಂದ್ರರನ್ನು ಪೂಜಿಸುವ
ಪವಿತ್ರವಾದ ಹಬ್ಬವಿದು ನಮ್ಮ ಯುಗಾದಿ.
ಹೊಸ ಚೀಗುರಿನಿಂದ ಪ್ರಾರಂಭವಾಗುವ ಹೊಸ ವರ್ಷದ
ಹಬ್ಬವಿದು ನಮ್ಮ ಯುಗಾದಿ.
ಕರೋನಾ ಹುಟ್ಟುಸಾವಿನ ದಿನವನ್ನು ಅಳಿಸಲಾಗದೆ ಭದ್ರವಾಗಿ
ಬರೆದಿಡುವಂತಹ ಪಂಚಾಂಗದ ಹಬ್ಬವಿದು
ಮನಯಿಂದಾನೆ ಯುಗಾದಿ

ಕಲಿಯುಗದಲ್ಲಿ ಸಂಗಮಸಮಯದ ಹಬ್ಬವಿದು ನಮ್ಮ ಯುಗಾದಿ
ಮೂಡನಂಬಿಕೆ ಎಂದವರಿಗೆಲ್ಲಾ ಉತ್ತರಕೊಟ್ಟ ಚೀಗುರಿನ,ಬೇವಿನ, ಬೆಲ್ಲದ ಆರೋಗ್ಯಕರವಾದ ಹಬ್ಬವಿದು ನಮ್ಮ ಯುಗಾದಿ.
ಕರೊನಾ ವೈರಸನ ಅಂತ್ಯ ಆರಂಭಿಸಿದ ದಿನವಿದು
ಮನೆಯಿಂದಾನೆ ಯುಗಾದಿ

ಸಿಹಿ-ಕಹಿ ಸಮಾನಾಗಿ ಸ್ವೀಕರಿಸೇಂದು ಸಾರುವ
ಬೇವು-ಬೆಲ್ಲದ ಹಬ್ಬವಿದು ಯುಗಾದಿ.
ಸುಖ-ದುಖಃ, ಬೇವು-ಬೆಲ್ಲವಿದಂತೆ,
ಸುಖಬಂದಾಗ ಹಿಗ್ಗದಿರು, ದುಖಃ ಬಂದಾಗ ಕುಗ್ಗದಿರಿ
ಎಂದು ದೈರ್ಯ-ಸ್ತೈರ್ಯ ತುಂಬುವ ಸೌರ್ಯದ
ಹಬ್ಬವಿದು ಯುಗಾದಿ.
ಕರೋನಾವೆಂಬ ಮೃತ್ಯವಿಗೆ ಕುಗ್ಗಬಾರದೆಂಬ ತತ್ವಸಾರುವ ದಿನವಿಂದು
ಮನೆಯಿಂದಾನೆ ಯುಗಾದಿ.

ಇತಿಹಾಸದ ದಿನವಿಂದ, ಇತಿಹಾಸದ ಕವನ
ಬರೆದ ನನ್ನ ಬರಹಕ್ಕೆ ಇತಿಹಾಸದ ಯುಗಾದಿಯಿಂದು.
ಅಳಿಸದ ವಿಷಯಗಳನ್ನು ಜಗತ್ತಿಗೆ ತಿಳಿಸಿದ
ಹಿಂದುಗಳ ಪಾಲಿನ ಧಾರ್ಮಿಕ ಹಬ್ಬವಿದು ಯುಗಾದಿ.
ಕರೋನಾ ಕೊಲ್ಲುವ ನನ್ನ ಕವನದ ಮುನ್ನುಡಿಯ ಹಬ್ಬವಿದು
ಮನೆಯಿಂದಾನೆ ಯುಗಾದಿ.

ಯುವ ಸಾಹಿತಿ:ರಾಜು ಎಮ್ ಹಿರೇಮಠ

7353106211

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

1 hour ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

5 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

23 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420