ಕಲಬುರಗಿ: ಮಳೆಗಾಲ ಬಂದಿತೆಂದರೆ ಬಹುತೇಕ ಸರಕಾರಿ ಕಚೇರಿಯ ಕಟ್ಟಡಗಳು ‘ಸೋರುತಿಹದು ಮನೆಯ ಮಾಳಿಗೆ’ ಎನ್ನುವಂತಾಗುತ್ತವೆ.
ಇದಕ್ಕೆ ತಾಜ ನಿದರ್ಶನವೆಂಬತೆ ಜೇವರ್ಗಿಯ ಅರಣ್ಯ ಇಲಾಖೆಯ ಕಚೇರಿ ಕಟ್ಟಡ ಇಂದು ಸುರಿದ ಭಾರೀಮಳೆಯಿಂದಾಗಿ ಕಟ್ಟಡದ ತುಂಬೆಲ್ಲ ನೀರು ತುಂಬಿಕೊಂಡಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಣ್ಯ ಇಲಾಖೆ ಹಣೆ ಬರಹ ಇದು. ಮಳೆ ಬಂದರೆ ಸಾಕು ಕಚೇರಿಯ ಮುಂದೆ ನೀರಿ ಹೊಳೆನೆ ತುಂಬಿರುತೆ, ಕಚೇರಿ ಒಳಗೆ ಹೋಗಬೇಕೆಂದರೆ ಬಲು ಕಷ್ಟವನ್ನೆ ಪಡಬೇಕು ಇದು ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಗೋಳು.
ಅರಣ್ಯ ಇಲಾಖೆಯ ಮುಂದೆ ಭಾರೀಮಳೆ ಬಂದ ಕಾರಣ ಮಳೆಯ ನೀರು ಕಚೇರಿಯಲ್ಲಿ ಹೋಗಿದ್ದು ಮೇಲೆನ ಚಿತ್ರಗಳಲ್ಲಿ ವಿಕ್ಷಕರು ಗಮನಿಸಬಹುದು. ಸಮಸ್ಯೆ ಕುರಿತು ಇಲ್ಲಿನ ಮೇಲಧಿಕಾರಿಗಳಿಗೆ ಅನೇಕ ಸಲ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು, ಕ್ಯಾರೆ ಎನ್ನುತಿಲ್ಲ ಎಂಬ ಸುದ್ದಿ ಲಭ್ಯವಾಗಿದ್ದು, ಸರಕಾರಿಯ ಇಲಾಖೆ ಈ ಪರಿಸ್ಥಿಯಿಂದ ಕಚೇರಿಯ ಕಡತಗಳು ನಾಶವಾದ್ದರೆ ಯಾರು ಜವಾಬ್ದಾರರು ಎಂಬುವುದು ಸಾರ್ವಜನಿಕರಲ್ಲಿ ಅಭಿಪ್ರಾಯ ಮೂಡುತಿದೆ. ಮಳೆಗೆ ಅಧಿಕಾರಿಗಳಲ್ಲಿ ಆತಂಕ ಸೃಷ್ಠಿಯಾಗುವಂತಿದೆ.
ಅದೇ ರೀತಿಯಾಗಿ ಇಲ್ಲಿನ ಜೇವರ್ಗಿ ಪಟ್ಟಣದಲ್ಲಿರುವ ಕಲಬುರಗಿ, ಯಾದಗಿರಿ, ಸಹಕಾರ ಸಂಘದ ಕಚೇರಿಯ ಕಟ್ಟಡದಲ್ಲು ಸಹ ನೀರು ನುಗ್ಗಿವೆ ಎಂದು ಹೇಳಲಾಗುತ್ತಿದೆ.
ಈ ಕಟ್ಟಡದ ಮುಂಭಾಗದಲ್ಲಿಯೇ ಚರಂಡಿ ಹರಿಯುತ್ತಿರುವುದರಿಂದ ಚರಂಡಿ ನೀರು ಕಚೇರಿ ಯೊಳಗೆ ನುಗ್ಗಿದರಿಂದ ಬ್ಯಾಂಕ್ ನ ಸಿಬ್ಬಂದಿಗಳು ಕಚೇರಿ ಕಡತಗಳನ್ನು ಜುಪಾನವಾಗಿ ಎತ್ತಿಟ್ಟುಕೊಂಡು ಕಚೇರಿಗೆ ಬೀಗ ಹಾಕಿ ಮನೆಗೆ ತೆರಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…