ಶಹಾಬಾದ: ಕೋವಿಡ್ ೧೯ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರದಲ್ಲಿ ರವಿವಾರ ನಡೆಯುವ ವಾರದ ಸಂತೆಯನ್ನು ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಪಿಎಸ್ಐ ಯಲ್ಲಮ್ಮ ಅವರ ನೇತೃತ್ವದಲ್ಲಿ ಸಂಪೂರ್ಣ ಬಂದ್ ಮಾಡಿಸಲಾಯಿತು.
ಬೆಳಿಗ್ಗೆ ೬:೩೦ ಗಂಟೆಗ ತರಕಾರಿ ಮಾರುಕಟ್ಟೆಗೆ ಪ್ರವೇಶ ಮಾಡಿದ ಅಧಿಕಾರಿಗಳು ಕೆಲವೇ ಜನರು ವ್ಯಾಪಾರ ಮಾಡುತ್ತಿರುವುದನ್ನು ಕಂಡು ತರಾಟೆಗೆ ತೆಗೆದುಕೊಂಡರು.ಅಲ್ಲದೇ ಅವರನ್ನು ಅಲ್ಲಿಂದ ತೆರಳುವಂತೆ ಮಾಡಿದರು.ಆಗ ಒಬ್ಬರಿಬ್ಬರು ಅಧಿಕಾರಿಗಳ ಜತೆಗೆ ತಕರಾರು ಮಾಡಲು ಪ್ರಾರಂಭಿಸಿದರು.ಆಗ ತಹಸೀಲ್ದಾರ ಸುರೇಶ ವರ್ಮಾ ಅವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬನ ಕರ್ತವ್ಯ.ಒಂದು ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದರೇ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಹಾಬಾದ: ವಾರಾಂತ್ಯ ಕರ್ಫ್ಯೂಗೆ ತಾಲೂಕಿನ ಜನತೆ ಸಂಪೂರ್ಣ ಬೆಂಬಲ
ಅಲ್ಲದೇ ಜಗತ್ತಿನಲ್ಲಿಯೇ ಕೊರೊನಾ ರೋಗ ಸಾಕಷ್ಟು ಪ್ರಾಣ ಹಾನಿ ಮಾಡಿ ದಿಗಲೆಬ್ಬಿಸಿದೆ.ಆದರೂ ಜೀವದ ಮೇಲೆ ಹಂಗಿಲ್ಲದೆ ವ್ಯಾಪಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ.ನಾವು ಬದುಕಿದ್ದರೇ ಎಲ್ಲಾ. ಈ ರೀತಿಯ ವರ್ತನೆಯಿಂದ ಕೊರೊನಾ ಸಮುದಾಯದ ಮಟ್ಟಕ್ಕೆ ಹರಡುತ್ತಿದೆ.ಈಗಾಗಲೇ ದೇಶದಲ್ಲಿಯೇ ಆಕ್ಸಿಜನ್ ಸಿಗುತ್ತಿಲ್ಲ, ಬೆಡ್ ,ವೆಂಟಿಲೇಟರ್ ಸಿಗುತ್ತಿಲ್ಲ. ಸಾಕಷ್ಟು ರೋಗಿಗಳು ಸಾಯುತ್ತಿದ್ದಾರೆ.
ಸಾಕಷ್ಟು ಜನರು ರೋಗದಿಂದ ಬಳಲುತ್ತಿದ್ದಾರೆ.ಅಲ್ಲದೇ ದಿನದಿಂದ ದಿನಕ್ಕೆ ವೈರಸ್ ಹರಡುವ ವೇಗ ಹೆಚ್ಚುತ್ತಿದೆ.ಆದರೂ ಮೊಂಡುತನ ಮಾಡುವುದು ಸರಿಯಲ್ಲ.ಕೂಡಲೇ ಅಂಗಡಿ ಬಂದ್ ಮಾಡಿ ಹೋದರೇ ಸರಿ.ಇಲ್ಲವಾದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೆನೆ ಎಂದು ಹೇಳಿದ ಬಳಿಕ, ವ್ಯಾಪಾರಸ್ಥರು ಅಲ್ಲಿಂದ ಜಾರಿದರು.ನಂತರ ನಗರದ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದರು.ಕೆಲವು ಕಡೆ ೧೦ ಗಂಟೆಯ ನಂತರವೂ ವ್ಯಾಪಾರ ಮಾಡುತ್ತಿರುವವರನನ್ನು ಗದರಿಸಿದರು.ಅಲ್ಲದೇ ಮಾಸ್ಕ್ ಕಡ್ಡಾಯವಾಗಿ ಹಾಕದವರ ವಿರುದ್ಧ ದಂಡ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ನಿಗದಿಪಡಿಸಿದ ಬೆಡ್ ಚಾರ್ಚ್ ಮಾತ್ರ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಪಿಎಸ್ಐ ಯಲ್ಲಮ್ಮ, ಸಿಬ್ಬಂದಿಗಳಾದ ನಿಂಗಣ್ಣಗೌಡ ಪಾಟೀಲ, ಹುಸೇನ ಪಾಷಾ, ಶಿವರಾಜ ಇತರರು ಇದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…