ಕಾಯಕದಿಂದಲೇ ರಾಷ್ಟ್ರದ ಸಮ್ಮೃದ್ಧಿ: ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ

ಕಲಬುರಗಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಕಾಯಕ ದಿನಾಚರಣೆ ಹಾಗೂ ಶರಣ ಮಡಿವಾಳ ಮಾಚಿ ದೇವರ ಜಯಂತಿಯನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕೋವಿಡ್ ಹನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿರುವ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರುತಮ್ಮ ಸಾನಿಧ್ಯ ನುಡಿಯಲ್ಲಿಕಾಯಕದ ಹಿರಿಮೆಯನ್ನು ತಿಳಿಸಿದರು. ಬಸವಾದಿ ಶರಣರುಕಾಯಕವೇ ಕೈಲಾಸ ಎಂದು ಸಾರಿದರು. ಬಸವಣ್ಣನವರ ಚಳುವಳಿ ನಿಜಾರ್ಥದಲ್ಲಿಕಾಯಕ ಜೀವಿಗಳ ಚಳುವಳಿಯಾಗಿತ್ತು ಬಸವಣ್ಣನವರ ನಾಯಕತ್ವದಲ್ಲಿ ಅಂದಿನ ದಿನಮಾನದಎಲ್ಲಕಾಯಕ ಜೀವಿಗಳನ್ನು ಅನುಭವ ಮಂಟಪದಲ್ಲಿ ಸೇರಿದರು. ಶರಣ ಮಡಿವಾಳ ಮಾಚಿದೇವರು ಬಟ್ಟೆಯನ್ನು ತೊಳೆಯುವ ಕಾಯಕ ಮಾಡುತ್ತಿದ್ದರು.

ಕುಂಬಾರಗುಂಡಯ್ಯಾನವರಕಾಯಕಕ್ಕೆ ಮೆಚ್ಚಿ ಶಿವನೇ ಪ್ರತ್ಯಕ್ಷನಾಗಿ ನಿನಗೆ ಕೈಲಾಸಕ್ಕೆ ಕರೆದೊಯ್ಯುವೆಎಂದರುಗುಂಡಯ್ಯಾ ನವರು ಬೇಡೆನಗೆ ಕೈಲಾಸ ಬಾಡಿತುಕಾಯಕಎಂದುಕಾಯಕ ನಿಷ್ಠೆಯನ್ನು ಮೆರೆದರು.  ತಮ್ಮತಮ್ಮಕಾಯಕವನ್ನೇ ಮಾಡುತ್ತ ಲಿಂಗಾಂಗ ಸಾಮರಸ್ಯದ ಸುಖವನ್ನು ಪಡೆದರು. ಜಗತ್ತಿನಲ್ಲಿಕಾಯಕತತ್ವವನ್ನೇಎತ್ತಿ ಹಿಡಿದಿರುವಧರ್ಮಅದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತಧರ್ಮವಾಗಿದೆ. ಬಸವಾದಿ ಶರಣರ ವಾರಸುದಾರರಾದ ನಾವು ಪ್ರತಿ ನಿತ್ಯ ಸತ್ಯ ಶುಧ್ಧಕಾಯಕವನ್ನು ಮಾಡಲೇಬೆಕುಕಾಯಕದಿಂದಲೇಕುಟುಂಬ ಸಮಾಜ ಹಾಗೂ ರಾಷ್ಟ್ರ ಸಮ್ಮೃಧವಾಗಲು ಸಾಧ್ಯವಿದೆ. ಎಂದು ಪರಮಪೂಜ್ಯರು ಆಶೀರ್ವಚನದಲ್ಲಿ ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ಶರಣ ಮಡಿವಾಳ ಮಾಚಿದೇವರಜೀವನಚರಿತ್ರೆಯ ಮೇಲೆ ಬೆಳಕು ಚೆಲ್ಲಿದರು. ಮಡಿವಾಳ ಮಾಚಿದೇವರುಗಣಾಚಾರಿ ಶರಣರು. ವಚನ ಸಾಹಿತ್ಯರಕ್ಷಣೆಯಲ್ಲಿ ಮಾಚಿದೇವರ ಪಾತ್ರತುಂಬ ಮಹತ್ವದಿದೆ. ಅವರುತಮ್ಮ ಪ್ರಾಣವನ್ನೇ ಬದೆಗಿಟ್ಟು ವಚನಸಾಹಿತ್ಯರಕ್ಷಣೆಗಾಗಿ ಹೋರಾಡಿದರು. ಅವರ ಸಂಘರ್ಷ ಹಾಗೂ ತ್ಯಾಗದಿಂದಲೇಇಂದು ನಮಗೆ ವಚನ ಸಾಹಿತ್ಯವುದೊರೆಯುತ್ತಿದೆ. ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ವಿಶ್ವಗುರು ಬಸವಣ್ಣನವರ ಹಾಗೂ ಶರಣ ಮಡಿವಾಳ ಮಾಚಿದೇವರುಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ರಾಮಚಂದ್ರ ಯರನಾಳೆ ವಚನಗಾಯನ ಮಾಡಿದರು. ಬಾಬು ಬೆಲ್ದಾಳ ನಿರುಪಿಸಿದರು. ಶರಣರಾಜುಜುಬರೆ ವಂದಿಸಿದರು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

49 mins ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

12 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

14 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

14 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

15 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420