ಕಲಬುರಗಿ: ರಾಜ್ಯ ವಿಧಾನ ಪರಿಷತ್ ನೂತನ ಸದಸ್ಯ ಹಾಗೂ ಕಾಯಕ ಶರಣರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ್ ಅವರನ್ನು ಅವರ ಗಂಗಾನಗರದ ನಿವಾಸದಲ್ಲಿ ಕಾಯಕ ಶರಣರ ಸಮಾಜದ ಸೇವಾ ಸಂಘದ ಪದಾಧಿಕಾರಿಗಳು ಹೂಮಾಲೆ ಹಾಕಿ, ಶಾಲು ಹೊದಿಸಿ, ಸ್ಮರಣಿಕೆ ಕೊಟ್ಟು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಭೀಮಣ್ಣ ಬೋನಾಳ್, ಉಪಾಧ್ಯಕ್ಷ ಭಾಷಾ ಚೋಗೇ, ಪ್ರಧಾನ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಗೌಳಿ, ಡಿ.ಬಿ. ಭಜಂತ್ರಿ, ಸಾಯಬಣ್ಣಾ ಹೋಳ್ಕರ್, ಎಂ.ಎನ್. ಸಗಂದಿ, ಬಿ.ಎಚ್. ಬರಗಾಲಿ (ಕುಸನೂರು) ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಗೌಳಿ ಅವರು ಮಾತನಾಡಿ, ಸಂಘವು ನಿಜಶರಣ ಅಂಬಿಗರ ಚೌಡಯ್ಯ, ಬಿದಿರು ಕಾಯಕದ ಮೇದಾರ ಕೇತಯ್ಯ, ನೂಲಿಯ ಚಂದಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚೆನ್ನಯ್ಯ, ಉರಿಲಿಂಗ ಪೆದ್ದಿ, ಕುರುಬ ಗೊಲ್ಲಾಳೇಶ್ವರ್, ಜೇಡರ ದಾಸಿಮಯ್ಯ, ಗಾಣದ ಕಣ್ಣಪ್ಪ, ಸಿದ್ಧರಾಮೇಶ್ವರ್, ಒಕ್ಕಲಿಗ ಮುದ್ದಣ್ಣ, ಯಾಳವಾರ್ ಭೃಂಗೇಶ್ವರ್, ಮಸಣಸಿದ್ದಯ್ಯ, ಹೆಂಡದ ಮಾರಯ್ಯ, ಹೂಗಾರ್ ಮಾದಯ್ಯ, ಹಡಪದ್ ಅಪ್ಪಣ್ಣ, ಕುಂಬಾರ್ ಗುಂಡಯ್ಯ, ಗಾಳದ ಕಣ್ಣಪ್ಪ, ವೈದ್ಯ ಸಂಗಣ್ಣ, ಕಿನ್ನರಿ ಬಮ್ಮಯ್ಯ, ಮಡಿವಾಳ್ ಮಾಚಯ್ಯ ಮುಂತಾದ ಸಮಾಜಗಳನ್ನು ಒಳಗೊಂಡಿದ್ದು, ಆ ಎಲ್ಲ ಸಮಾಜದಲ್ಲಿನ ಪ್ರತಿಭಾವಂತ ಮಕ್ಕಳಿಗೆ ಜುಲೈನಲ್ಲಿ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸಂಘದ ಬೇಡಿಕೆಗಳನ್ನು ಮುಂದಿಟ್ಟ ಅವರು, ಕಲ್ಯಾಣ ಮಂಟಪ ನಿರ್ಮಾಣವು ಅಗತ್ಯವಾಗಿದ್ದು, ಆ ಕುರಿತು ಬೇಡಿಕೆ ಇಡೇರಿಸಬೇಕು ಎಂದು ಮನವಿ ಮಾಡಿದರು. ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಮಾತನಾಡಿ, ನಾನು ಸದಾ ನಿಮ್ಮೊಂದಿಗಿದ್ದೇನೆ. ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…