ಕಲಬುರಗಿ: ತೋಟದ ಮನೆಯೊಂದರಲ್ಲಿ ಕಟ್ಟಿಹಾಕಿದ ಗೋವುಗಳ ಮೇಲೆ ಪ್ರಾಣಿಯೊಂದು ದಾಳಿ ಮಾಡಿ ಗೋವುಯೊಂದನ್ನು ಕೊಂದು ಹಾಕಿರುವ ಘಟನೆ ಜೇವರ್ಗಿ ತಾಲ್ಲೂಕಿನ ರಂಜುಣಗಿ ಗ್ರಾಮದ ಹತ್ತಿರದ ವಿರುಮನೆಯಲ್ಲಿ ನಡೆದಿದೆ.
ಅಂದಾಜು 45 ಸಾವಿರ ಮೌಲ್ಯದ ರಘುನಾಥ್ ರಾಮಲಾಲ್ ಅವರಿಗೆ ಸೇರಿದ ಬಲಾಡ್ಯ ಹೊರಿಯನ್ನು ಕೊಂದು ಹಾಕಿದೆ. ಕಳೆದ 4 ದಿನಗಳಿಂದ ತೋಟದಲ್ಲಿ ಐದು ಗೋವುಗಳನ್ನು ಕಟ್ಟಹಾಕಲಾಗುತ್ತಿತ್ತು. ಬೆಳಗ್ಗಿನ ಜಾವ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಗೋವಿಗೆ ಕೊಂದುಹಾಕಿರುವ ಬಗ್ಗೆ ಇಲ್ಲಿಯವರೆಗೂ ಸುಳಿವು ಸಿಕ್ಕಿಲ್ಲ, ದಾಳಿ ಮತ್ತು ಗುರುತುಗಳನ್ನು ಆಧರಿಸಿ ಚಿರತೆ ಇರಬಹುದೆಂದು ಅನುಮಾನ ವ್ಯಕ್ತವಾಗುತ್ತಿದ್ದು, ನಾಯಿ ಮತ್ತು ತೋಳಗಳ ಹೆಜ್ಜೆಗಳು ಸಹ ಚಿರತೆಯ ಹೆಜ್ಜೆಗಳಂತೆ ಕಾಣುತ್ತವೆ ಎಂದು ಅನುಮಾನ ಸೃಷ್ಟಿಸಲಾಗುತ್ತಿದೆ.
ತೋಟದಲ್ಲಿ ರಂಟೆ ಹೊಡೆದಿರುವುದರಿಂದ ಯಾವ ಪ್ರಾಣಿ ದಾಳಿ ಮಾಡಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಅದೆ ರೀತಿಯಾಗಿ ಹೈನಾ ಎಂಬ ಕ್ರೂರ ಪ್ರಾಣಿಯ ದಾಳಿಯಾಗಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದ್ದು, ಆದರೆ ಹೈನಾ ಎಂಬ ಪ್ರಾಣಿಯೋ ಅಥವಾ ಚಿರತೆಯೋ ಎಂದು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
ಈ ದಾಳಿಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಗೋವು ಕಳೆದುಕೊಂಡ ರೈತ ಖಾಸಗಿ ಸಾಲ ಮಾಡಿಕೊಂಡಿದ್ದು, ಈಗ ಗೋವು ಕಳೆದುಕೊಂಡು ಕಂಗಾಲಾಗಿದ್ದಾರೆ.
(1) ಪ್ರವಾದಿಯ ಅನುಯಾಯಿಗಳು ಎಲ್ಲಿ? ನಿನ್ನ ಒಡ ಹುಟ್ಟಿದವರ ವಿರುದ್ಧವಾದರೂ ಸರಿಯೇ ಸತ್ಯವನ್ನೆ ನುಡಿ ಎಂದ ನನ್ನ ಪ್ರವಾದಿಯ ಅನುಯಾಯಿಗಳು…
ಕಲಬುರಗಿ:"ಕಲ್ಯಾಣ ಕರ್ನಾಟಕ ಉತ್ಸವ" ವನ್ನು ಸೆಪ್ಟೆಂಬರ್ "18" ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು "ಕಲ್ಯಾಣ ಕರ್ನಾಟಕ ಪ್ರತ್ಯೇಕ…
ಕಲಬುರಗಿ: ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭ ಮಾಡುವ ತೀರ್ಮಾನ ಕೈಗೊಳಬೇಕೆಂದು ಕಾಳಗಿ ತಾಲೂಕ…
ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಹತ್ತು ವರ್ಷಗಳ ನಂತರ ಬಹುನಿರೀಕ್ಷಿಯ ಸಚಿವ ಸಂಪುಟ ಕಲಬುರಗಿಯಲ್ಲಿ ನಡೆಯುತ್ತಿರುವುದು ಈ ಭಾಗದ…
ಕಲಬುರಗಿ, ಕಳೆದ ಹತ್ತು ವರ್ಷಗಳ ನಂತರ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂದು ಸೆಪ್ಟಂಬರ್ 17ರಂದು ರಾಜ್ಯ ಸಚಿವ ಸಂಪುಟ ಸಭೆ…
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಟಿವಿ ಛಾನೆಲ್ ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ…