ಕಲಬುರಗಿ: ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ನೂತನ ಯಡ್ರಾಮಿ ತಾಲೂಕು ಕೇಂದ್ರದಲ್ಲಿಯೂ ಆಕ್ಸಿಜನ್ ಬೆಡ್ಗಳಿರುವ 30 ಹಾಸಿಗೆಯ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್ ಆದಷ್ಟು ಬೇಗ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿವರಿಗೆ ಶಾಸಕ ಡಾ. ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಅವರು ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಯವರು ಮೈಸೂರು ಜಿ¯್ಲÁಧಿಕಾರಿಗಳ ಕಚೇರಿಯಿಂದಲೆ ಕಲಬುರಗಿ ಜಿ¯್ಲÁಡಳಿತದ ಅಧಿಕಾರಿಗಳು ಮತ್ತು ಜಿ¯್ಲÉಯ ಶಾಸಕ- ಸಂಸದರೊಂದಿಗೆ ನಡೆಸಿದಂತಹ ಝೂಮ್ ಮೀಟ್ನಲ್ಲಿ ಪಾಲ್ಗೊಂಡು ಮಾತನಾಡುತ್ತ 64 ಹಲ್ಳಿಗಳ ವ್ಯಾಪ್ತಿಯ ಯಡ್ರಾಮಿಯಲ್ಲಿ ಸೋಂಕಿಗೆ ತುತ್ತಾದವರಿಗೆ ಆಕ್ಸೀಜನ್ ಚಿಕಿತ್ಸೆ ಬೇಕಾದಲ್ಲಿ ಕಲಬುರಗಿಗೆ ಬರುವುದು ತುಂಬ ಕಷ್ಟದ ಕೆಲಸ. 80 ಇರಂದ 90 ಕಿಮೀ ಕ್ರಮಿಸಿ ಕಲಬುರಗಿಗೆ ಬೂರಬೇಕಾಗುತ್ತದೆ. ಹೀಗಾಗಿ ಯಡ್ರಾಮಿಯಲ್ಲೇ ಕೋವಿಡ್ ಸೆಂಟರ್ ಆರಂಭಿಸಿದಲ್ಲಿ ಸೋಂಕಿತರಿಗೆ ಅನುಕೂಲವಾಗುತ್ತದೆ. ಬಡ ಜನರ ಪ್ರಾಣ ಉಳಿಯುತ್ತವೆ ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಜೇವರ್ಗಿ ತಾಲೂಕಾಸ್ಪತ್ರೆಯಲ್ಲಿ ಈಗಾಗಲೇ ಧರಂಸಿಂಗ್ ಫೌಂಡೇಷನ್ 24 ಆಕ್ಸಿಜನ್ ಸಿಲಿಂಡರ್ ನೀಡಿದೆ. ಇನ್ನೂ 50 ಆಕ್ಸೀಜನ್ ಸಿಲಿಂಡರ್ಗಳನ್ನು ಇಂಡೋನೇಷಿಯಾದಿಂದ ತರಿಸುತ್ತಿದೆ. ಫೌಂಡೇಷನ್ನಿಂದ ಯಡ್ರಾಮಿಗೂ ಸಿಲಿಂಡರ್ ನೀಡಲಾಗುತ್ತದೆ. ಬೇಗ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಯಾಗಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡುತ್ತಿರುವುದು ಆತಂಕದ ವಿಷಯವಾಗಿದೆ. ಇದನ್ನು ತಡೆಗಟ್ಟಲು ಹಳ್ಳಿಗಳಲ್ಲಿ ಮಾಸ್ಕ್ ಧರಿಸದೆ ಮಾತಾಡಿಕೊಂಡು ಕೂಡುವ ಹರಟೆ ಕಟ್ಟೆಗೆ ಬ್ರೆಕ್ ಹಾಕಬೇಕು. ಕೋವಿಡ್ ಮೂರನೇ ಅಲೆಯ ಭೀತಿಯ ಕಾರಣ ಈಗಿನಿಂದಲೇ ಪೂರ್ವಸಿದ್ಧತೆ ಕೈಗೊಂಡು ಎಲ್ಲರಿಗೂ ಕೋವಿಡ್ ಲಸಿಕೆ ನೀಡುವಲ್ಲಿ ರಾಜ್ಯ ಸರ್ಕಾರ ಪ್ರಥಮಾದ್ಯತೆ ನೀಡಬೇಕು. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಜಿ¯್ಲÉಯಲ್ಲಿ 250 ಹಾಸಿಗೆ ಮೀಸಲಿರಿಸಿದ್ದು, ಇದು ಸಾಕಾಗುವುದಿಲ್ಲ. ಅಕ್ಕಪಕ್ಕದ ಜಿ¯್ಲÉಗಳಿಂದ ಚಿಕಿತ್ಸೆಗೆ ರೋಗಿಗಳು ಕಲಬುರಗಿ ಜಿಮ್ಸ್ ಅಸ್ಪತ್ರೆಗೆ ಬರುತ್ತಿದ್ದು, ಹಾಸಿಗೆ ಹೆಚ್ಚಳ ಮಾಡಬೇಕು ಎಂದರು.
3 ಲಕ್ಷ ಜನ ವಸತಿಯ ಜೇವರ್ಗಿ ಮತಕ್ಷೇತ್ರದಲ್ಲಿ ಲಸಿಕೆಗೆ ಅರ್ಹರು 1. 52 ಲಕ್ಷ ಜನರಿದ್ದರೂ ಇಂದುವರೆಗೂ ಲಸಿಕೆಯಲ್ಲಿ ಶೇ. 20 ರಷ್ಟು ಮಾತ್ರ ಪ್ರಗತಿಯಾಗಿದೆ. ಇದು ನಿರಾಶಾದಾಯಕ ಬೆಳವಮಿಗೆ. ಬೇಗ ಲಸಿಕೆ ಹೆಚ್ಚಿಗೆ ಪೂರೈಸುವ ಮೂಲಕ ಜೇವರ್ಗಿ ಸೇರಿದಂತೆ ಜಿಲ್ಲೆಯ ಜನರಿಗೆಲ್ಲರಿಗೂ ಲಸಿಕೆ ದೊರಕುವಂತೆ ಮಾಡಿರೆಂಬ ಡಾ. ಅಜಯ್ ಸಿಂಗ್ ಆಗರಹಕ್ಕೆ ಸ್ಪಂದಿಸಿರುವ ಸಚಿವ ನಿರಾಣಿ ಈ ವಿಚಾರದಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ಜಿ¯್ಲÉಗೆ ಲಸಿಕೆ ಹಂಚಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…