ಕಾಮನ್‍ವೆಲ್ತ್ ಹೊಸ ರಾಷ್ಟ್ರಗಳ ಒಕ್ಕೂಟದ ಸಂಸ್ಥೆ
ಕಲಬುರಗಿ: ದ್ವಿತೀಯ ಮಹಾ ಯುದ್ಧದ ನಂತರ ಬ್ರಿಟೀಷ ಸಾಮ್ರಾಜ್ಯ ಪತನವಾಯಿತು. ಆದರೆ ಕಾಮನ್‍ವೆಲ್ತ್ ರಾಷ್ಟ್ರಗಳ ಒಕ್ಕೂಟದ ಪರಿಕಲ್ಪನೆ ಮೂಡಿದ್ದು, 1926ರಲ್ಲಿ ಸ್ವಾಯತ್ತತೆ ಪಡೆದ ಪ್ರದೇಶಗಳು ಈ ಒಕ್ಕೂಟದ ಸದಸ್ಯರಾಗಬಹುದೆಂದು ನಿರ್ಣಯಿಸಲಾಯಿತು. ಬ್ರಿಟೀಷ ಅಧೀನ, ಆಶ್ರಿತ ಹಾಗೂ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳನ್ನೊಳಗೊಂಡ ಈ ಒಕ್ಕೂಟವನ್ನು ಬ್ರಿಟೀಷ ಕಾಮನ್‍ವೆಲ್ತ್ ಎಂಬ ಹೆಸರಿನಿಂದ ಪರಿಗಣಿಸಲಾಗಿದ್ದು, ಹೊಸ ರಾಷ್ಟ್ರಗಳ ಒಕ್ಕೂಟದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಸರಳವಾಗಿ ಜರುಗಿದ ‘ಕಾಮನವೆಲ್ತ್ ಸಂಸ್ಥಾಪನಾ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಮನವೆಲ್ತ್ ಒಕ್ಕೂಟದ ಕಾರ್ಯಾಲಯವು ಲಂಡನನಲ್ಲಿದ್ದು, 1965ರಲ್ಲಿ ಪ್ರಾರಂಭವಾಗಿದೆ. ಇದರ ಕಾರ್ಯವನ್ನು ಜಾರಿಗೊಳಿಸಲು ಪ್ರಧಾನ ಕಾರ್ಯದರ್ಶಿಯವರು ಇರುತ್ತಾರೆ. ಕಾಮನ್‍ವೆಲ್ತ್ ಒಕ್ಕೂಟದಲ್ಲಿ ಒಟ್ಟು 53 ಸದಸ್ಯ ರಾಷ್ಟ್ರಗಳಿವೆ. ಈ ಒಕ್ಕೂಟ ಒಂದು ಅನೌಪಚಾರಿಕ ಸಂಸ್ಥೆಯಾಗಿದೆ. ಯಾವುದೇ ವಿಷಯವನ್ನು ಸಭೆಯಲ್ಲಿ ಚರ್ಚಿಸಬಹುದೆ ಹೊರತು, ಮತಕ್ಕೆ ಹಾಕಿ ನಿರ್ಣಯಿಸುವಂತಿಲ್ಲ. ಒಂದು ಸದಸ್ಯ ರಾಷ್ಟ್ರ ಇನ್ನೊಂದು ಸದಸ್ಯ ರಾಷ್ಟ್ರದಲ್ಲಿ ತನ್ನ ರಾಯಭಾರಿಯನ್ನು ನೇಮಿಸಬಹುದಾಗಿದೆ. ಅವರನ್ನು ‘ಹೈ ಕಮೀಷನರ್’ ಎನ್ನುತ್ತಾರೆ. ಸಾಮಾನ್ಯವಾಗಿ 2 ವರ್ಷಕ್ಕೊಮ್ಮೆ ಶೃಂಗಸಭೆ ಯು.ಕೆ. ಯಲ್ಲಿ ಜರುಗುತ್ತದೆ. ಆದರೆ, ಸದಸ್ಯ ರಾಷ್ಟ್ರಗಳ ವಿನಂತಿ ಮೇರೆಗೆ ಸ್ಥಳ ಬದಲಾವಣೆ ಮಾಡಬಹುದಾಗಿದೆಯೆಂದು ಅದರ ಕಾರ್ಯವಿವರಣೆಯನ್ನು ತಿಳಿಸಿದರು.

ಸಹ ಶಿಕ್ಷಕ ಅಣ್ಣಾರಾಯ.ಎಚ್.ಮಂಗಾಣೆ ಮಾತನಾಡಿ, ಕಾಮನ್‍ವೆಲ್ತ್ ಒಕ್ಕೂಟವು ಒಂದು ನೆನಪಿನ ಸಂಘಟನೆಯಾಗಿದೆ. ಇಲ್ಲಿ ಕೇವಲ ಚರ್ಚೆಯಾಗಬಹುದೆ ಹೊರತು, ನಿರ್ಣಯಕ್ಕೆ ಬರುವಂತಿಲ್ಲ ಎಂಬ ಅಂಶ ನಿಜಕ್ಕೂ ವಿಪರ್ಯಾಸವೇ ಸರಿ. ಸಾಮಾನ್ಯ ಒಕ್ಕೂಟದ ಶೃಂಗ ಸಭೆಯಲ್ಲಿ ಅನೇಕ ವಿಷಯಗಳು ಚರ್ಚೆಯಾಗುತ್ತವೆ. ಅದೇ ರೀತಿ ಅನೇಕ ವಿಷಯಗಳು ಬೆಳಕಿಗೆ ಬರುವಂತಾಗುತ್ತದೆ. ಹಾಗೂ ದೇಶಗಳು ಪ್ರತ್ಯೇಕವಾಗಿ ಗಮನ ಹರಿಸಲು ಸಾಧ್ಯವಾಗುತ್ತದೆಯೆಂದರು.

ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ದೇವಿಂದ್ರಪ್ಪ ಗಣಮುಖಿ, ಸಂಜಯಕುಮಾರ ಖಜೂರಿ, ಶಿವಪುತ್ರಯ್ಯ ಸ್ವಾಮಿ ಬೆಣ್ಣೂರು ಇದ್ದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

1 hour ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

1 hour ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

1 hour ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420