ಬಿಸಿ ಬಿಸಿ ಸುದ್ದಿ

ಅರ್ಚಕ, ಪುರೋಹಿತರ ಹಿತಕಾಯುವುದು ಅಗತ್ಯ: ಡಾ. ಕೃಷ್ಣಾಜೀ ಕುಲಕರ್ಣಿ

ಕಲಬುರಗಿ: ಸಮಾಜದ ಸರ್ವ ಜನತೆಯ ಹಿತ ಕಾಯುವ ಅರ್ಚಕರ ಹಾಗೂ ಪುರೋಹಿತರ ಕುರಿತು ಚಿಂತಿಸುವುದು ತುರ್ತು ಕಾರ್ಯವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕ / ಪುರೋಹಿತರ ಬದುಕು ಕಷ್ಟಸಾಧ್ಯವಾಗಿದ್ದು, ಈ ದಿಶೆಯಲ್ಲಿ ಸಮಾಜ ಅವರ ಸಂಕಷ್ಟಕ್ಕೆ ಸ್ಪಂಧಿಸುವುದು ಅಗತ್ಯವಾಗಿದೆಯೆಂದು ರಾಜಕೀಯ ಧುರೀಣರಾದ ಡಾ. ಕೃಷ್ಣಾಜೀ ಕುಲಕರ್ಣಿ ಅಭಿಪ್ರಾಯಪಟ್ಟರು.

ಡಾ. ಕೃಷ್ಣಾಜೀ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ನಗರದ ಜಗತ್ ವೃತ್ತದ ಜಗಜ್ಯೋತಿ ಬಸವೇಶ್ವರ ಮೂರ್ತಿ ಆವರಣದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಗುರುಪರಂಪರೆಯಲ್ಲಿರುವ ಜಂಗಮ ಅರ್ಚಕ ಪುರೋಹಿತರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದ ಅವರು ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ತಿಳಿಸಿಕೊಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಸಾರುತ್ತ ಸರ್ವೇ ಜನ ಸುಖಿನೋ ಭವಂತು ಎನ್ನುವ ತತ್ವವನ್ನು ಅಳವಡಿಸಿಕೊಂಡು ಲೋಕಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಸಮರ್ಪಣೆ ಮಾಡಿಕೊಂಡಿರುವ ವೈದಿಕರನ್ನು ಗೌರವಿಸುವುದರ ಜೊತೆಗೆ ಅವರ ಬದುಕಿಗೆ ಒಂದಿಷ್ಟು ಆಸರೆಯಾಗುವುದು ಇಂದಿನ ಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ನುಡಿದರು.

ಅವರು ಕಲಾವಿದರು ಸಮಾಜದ ಸಂಪತ್ತಾಗಿದ್ದು, ಸಮಾಜ ಸರ್ವವ್ಯಾಪ್ತಿ ಸುಂದರವಾಗಿ ಕಾಣಲು ಕಲೆ ಮತ್ತು ಕಲಾವಿದರ ಸೇವೆ ಮುಂದಿನ ಪೀಳಿಗೆಗೆ ಜತನಾಗಿ ಕಟ್ಟಿಕೊಡುವುದು ನಮ್ಮ ಮೇಲೆ ಇರುವ ಬಹು ದೊಡ್ಡ ಜವಾಬ್ದಾರಿಯಾಗಿದ್ದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪುರಾಣ ಪ್ರವಚನದ ಮೂಲಕ ಧರ್ಮದ ಕುರಿತು, ಬದುಕಿನ ಕುರಿತು ತಿಳಿ ಹೇಳುವ ಪ್ರವಚನಕಾರರು ಹಾಗೂ ಅರ್ಚಕರು  ಬಡತನದಲ್ಲಿ ಜೀವಿಸುತ್ತಿದ್ದು ಇವರ ನೆರವಿಗೆ ಸಮಾಜ ಮತ್ತು ಸರ್ಕಾರ ಮುಂದೆ ಬರುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀ ವೆಂಕಟೇಶ  ಪಾಟೀಲ ಮಳಖೇಡ, ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಬ್ರಾಹ್ಮಣ ಸಮಾಜದ ಹಿರಿಯರಾದ ಚಂದ್ರಕಾಂತ ದೇಶಮುಖ, ಉದ್ದಿಮೆದಾರರಾದ ಗೋಪಾಲ ಮಳಖೇಡ, ಹಿರಿಯ ಕಲಾವಿದರಾದ ಗುರುಲಿಂಗಯ್ಯ ಶಾಸ್ತ್ರಿ ಹಿತ್ತಲಸಿರೂರ, ಸಾಹಿತಿ ಶಿವಕವಿ ಹಿರೇಮಠ ಜೋಗೂರ, ಖ್ಯಾತ ಪ್ರವಚನಕಾರರಾದ ಶರಣಕುಮಾರ ಶಾಸ್ತ್ರಿ ಹಿತ್ತಲಸಿರೂರ, ಅರವಿಂದ ಸ್ವಾಮಿ ಭೂಪಾಲ ತೆಗನೂರ, ಶಿವಕುಮಾರ ಶಾಸ್ತ್ರಿ ಧುತ್ತರಗಾಂವ, ಸೂರ್ಯಕಾಂತ ಶಾಸ್ತ್ರಿ ಧುತ್ತರಗಾಂವ, ಉದಯ ಶಾಸ್ತ್ರಿ ಭೀಮಳ್ಳಿ, ಶಿವಲಿಂಗಯ್ಯ ಶಾಸ್ತ್ರಿ ಗರೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಚಳವಳಿ, ಹೋರಾಟದಿಂದಲೇ ದಲಿತ ಸಾಹಿತ್ಯ ಉದಯ: ದಲಿತ ಚಳವಳಿ ಸಾಹಿತ್ಯ ಸಮ್ಮೇಳನ

ಕಲಬುರಗಿ: ದಲಿತ, ಹಿಂದುಳಿದವರು, ದೀನರು ಎಂದು ಹೇಳಿಕೊಂಡು ಎಷ್ಟು ದಿನ ಅಂತಾ ಜೀವನ ಸಾಗಿಸಬೇಕು. ಸಾಧನೆ ಮಾಡಿ ಸಾಧಕರಾಗಿ ಸಾಯೋಣ.…

16 hours ago

ಕಲಬುರಗಿ ಪ್ರವಾಸಿ ತಾಣಗಳ ಆಯ್ಕೆಗೆ ಆನ್‌ಲೈನ್‌ ಮೂಲಕ ವೋಟ್‌ ಮಾಡಲು ಡಿ.ಸಿ. ಮನವಿ

ಕಲಬುರಗಿ: ಕೇಂದ್ರದ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸಾರ್ವವಜನಿಕರು ಮತ್ತು ಪ್ರವಾಸಿಗರೆ ಪ್ರವಾಸೋದ್ಯಮ ತಾಣಗಳನ್ನು ಆಯ್ಕೆ…

17 hours ago

ಎರಡನೇ ದಿನದ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಹೋರಾಟದ ಸಾಗರಕ್ಕೆ ಡಾ. ಡಿ.ಜಿ. ಸಾಗರ ಅವರ ಮಹಾ ಸಾಗರವೇ ಆಗಿದ್ದಾರೆ. ನೋವು, ಅವಮಾನ ಸಹಿಸಿ ಬಹು ಎತ್ತರಕ್ಕೆ…

17 hours ago

ಶ್ರೀ ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ನಾಳೆ

ಕಲಬುರಗಿ: ಧಾರ್ಮಿಕ ದತ್ತಿ ಇಲಾಖೆಯ ಕಾಳಗಿ ತಾಲ್ಲೂಕಿನ ರೇವಗ್ಗಿ ರಟಕಲ್ ಶ್ರೀ ರೇವಣಸಿದ್ದೇಶ್ವರ ಗುಡ್ಡದಲ್ಲಿ ನಾಳೆ ಶ್ರಾವಣ ಮಾಸದ ನಡುವಿನ…

19 hours ago

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ

ಕಲಬುರಗಿ; ನಗರದ ಎಐಟಿಸಿ ಕಚೇರಿಯ ಹತ್ತಿರದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (CPI) ನಗರ ಹಾಗೂ ತಾಲ್ಲೂಕಾ ಸಮಾವೇಶ…

19 hours ago

ಬೂಟು ಧರಿಸಿ ಧ್ವಜಾರೋಹಣ ಮಾಡಿದ ಶಿಕ್ಷಕನ ಅಮಾನತಿಗೆ ಆಗ್ರಹ

ಸುರಪುರ: ಆಗಷ್ಟ್ 15 ರಂದು ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದ ಸರಕಾರಿ ಹಿರಿಯ…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420