ಬಿಸಿ ಬಿಸಿ ಸುದ್ದಿ

ಲಸಿಕಾ ಶಿಬಿರ: 200ಕ್ಕೂ ಹೆಚ್ಚು ಕೊವಿಡ ಲಸಿಕೆ ವಿತರಣೆ

ಕಲಬುರಗಿ: ಕಮಲಾಪುರ ತಾಲೂಕಿನ ಸುಕ್ಷೇತ್ರ ಸೊಂತದ ಶ್ರೀ ಶಂಕರಲಿಂಗ ಮಹಾರಾಜರ ಆಶ್ರಮದಲ್ಲಿ ಕೊವಿಡ್ ಲಸಿಕಾ ಶಿಬಿರವನ್ನು ಮಾಡಲಾಯಿತು. ಪೂಜ್ಯ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಸೂಮಾರು ೨೦೦ಕ್ಕೂ ಹೆಚ್ಚು ಕೊವಿಡ ಲಸಿಕೆಯನ್ನು ನಿಡಲಾಯಿತು.

ಈ ಕೊವಿಡ ಲಸಿಕೆಯಿಂದ ಹಳ್ಳಿಗಳ ಸಾರ್ವಜನಿಕರಲ್ಲಿ ಭಯ ಭಿತಿ ವಾತಾವರಣ ಸೃಷ್ಟಿ ಆಗಿದ ಹಿನ್ನೆಲೆಯಲ್ಲಿ ಸ್ವತಃ ಪೂಜ್ಯ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ಲಸಿಕೆಯನ್ನು ಪಡೆದುಕೊಂಡು ನಂತರ ಎಲ್ಲಾ ಭಕ್ತಾಧಿಗಳಿಗೆ ನಿಡಲು ಆಮಂತ್ರಿಸಿದರು, ಲಸಿಕೆ ಪಡೆಯಲು ದೂರದ ಊರುಗಳಿಂದ ಆಗಮಿಸಿದ ಸಾರ್ವಜನಿಕರಿಗೆ ಮಾಸ್ಕ, ಸ್ಯಾನಿಟೈಜರ, ಹಾಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಯಿತು.

ಇದೆ ಸಂಧರ್ಭದಲ್ಲಿ ನಿರೂಪಕರಾದ ಎಸ್.ಎಂ.ಭಕ್ತ ಕುಂಬಾರ ರವರು ಕೂಡ ಕೊವಿಡ ಲಸಿಕೆಯನ್ನು ಪಡೆದುಕೊಂಡರು, ಸಂತೋಷಕುಮಾರ ರಾಯಚೂರಕರ, ಸೊಂತ ಗ್ರಾಂ.ಪಂ.ಅಧ್ಯಕ್ಷ ಉದಯಕುಮಾರ ಪಾಟೀಲ, ಮಾಜಿ ಅಧ್ಯಕ್ಷ ನವರಂಗ ಜಾದವ, ಸದಸ್ಯ ಅಮರನಾಥ ಕೋಟಿ, ಉಮೇಶ ವಕಿಲರು ಇದ್ದರು.

ನಾವು ದಿನ ನಿತ್ಯವು ಹಳ್ಳಿ ಹಳ್ಳಿಗಳಿಗೆ ಹಾಗೂ ಥಾಂಡಗಳಿಗೆ ಹೊಗಿ ಜಗ್ರತಿ ಮಾಡಿದರು ಕೂಡ ಯಾರು ಕೂಡ ಲಸಿಕೆಯನ್ನು ಪಡೆಯಲಿಲ್ಲ ಆದರೆ ಇಂದು ಕೇವಲ ಮೂರು ತಾಸಿನಲ್ಲಿ ಎರಡು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಲಸಿಕೆಯನ್ನು ಪಡೆದದ್ದು ತುಂಬಾ ಸಂತಸ ತಂದಿದೆ ಎಂದು ಡಾ.ಕಿಶ್ವರಜಹಾಂ ಆಡಳಿತ ವೈದ್ಯಾಧಿಕಾರಿ ಸೊಂತ ಪ್ರಾಥಮಿಕ ಆರೋಗ್ಯ ಕೇಂದ್ರ ಸೊಂತ ಇದೆ ವೇಳೆ ಡಾ.ಪ್ರಮೊದ-ಜಿ, ಮನೋಹರ ಕುಂಬಾರ, ಆರೋಗ್ಯ ಸಹಾಯಕಿ ಶ್ರೀಮತಿ ಲಲಿತಾ ಶ್ರೀಮತಿ ರೇಖಾ, ಹಾಗೂ ಆಶಾ ಕಾರ್ಯಕರ್ತೆಯರು ಕೂಡ ಸಾಕ್ಷಿ ಯಾಗಿದ್ದರು. ಆಶ್ರಮದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜರು ವೈದ್ಯರಿಗೆ ಹಾಗೂ ಆರೋಗ್ಯ ಸಹಾಯಕರಿಗೆ ಶಾಲು ಹೊದಿಸಿ ಆಶಿರ್ವದಿಸಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago