ಬಿಸಿ ಬಿಸಿ ಸುದ್ದಿ

ರಂಗ ಪರಂಪರೆಗೆ ಗಿರೀಶ ಕಾರ್ನಾಡರ ಕೊಡುಗೆ ಅನನ್ಯ: ಸಾಹಿತಿ ಶಿವಕುಮಾರ

ಸುರಪುರ: ಕರ್ನಾಟಕದ ರಂಗ ಪರಂಪರೆಗೆ ಹಾಗೂ ನಾಟಕ ಕ್ಷೇತ್ರಕ್ಕೆ ಅನೇಕರನ್ನು ಪರಿಚಯಿಸಿ ಆ ಕ್ಷೇತ್ರದ ಬೆಳವಣಿಗೆಯಲ್ಲಿ ಕಾರ್ನಾಡರ ಕೊಡುಗೆ ಅನನ್ಯವಾಗಿದೆ ಎಂದು ಯುವ ಸಾಹಿತಿ ಶಿವಕುಮಾರ ಅಮ್ಮಾಪೂರ ಅಭಿಮತ ವ್ಯಕ್ತಪಡಿಸಿದರು.

ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಬಳಗದ ವತಿಯಿಂದ ಆಯೋಜಿಸಿದ್ದ ಗಿರೀಶ ಕಾರ್ನಾಡರ ಸ್ಮರಣೆ ಹಾಗೂ ಸಮಗ್ರ ಸಾಹಿತ್ಯ ಅವಲೋಕನ ಕಾರ್ಯಕ್ರಮದಲ್ಲಿ ಕಾರ್ನಾಡರ ಕುರಿತು ಮಾತನಾಡಿದ ಅವರು ಯಯಾತಿ, ಹಯವದನ, ಹಿಟ್ಟಿನಹುಂಜ ಸೇರಿದಂತೆ ಅನೇಕ ಕೃತಿ ನಾಟಕಗಳನ್ನು ನಾಡಿಗೆ ಪರಿಚಯಿಸಿದ ಕಾರ್ನಾಡರು ಮಿತಭಾಷಿ ಯಾಗಿದ್ದರು, ಅವರ ಸಂಪೂರ್ಣ ಕೃತಿಯನ್ನು ಅವಲೋಕಿಸಿದಾಗ ನಮಗೆ ಪೌರಾಣಿಕಥೆ ಒಳಗಿರುವ ಮೌಡ್ಯವನ್ನು ವಿರೋಧಿಸಿದ್ದಾರೆ ಎಂದು ಸ್ಪಷ್ಟವಾಗುತ್ತದೆ.

ಕನ್ನಡ ಚಲನಚಿತ್ರ ರಂಗಕ್ಕೆ ಅನೇಕ ಉದಯೋನ್ಮೂಖ ಪ್ರತಿಭೆಗಳನ್ನು ಪರಿಚಯಿಸಿದ ಕಾರ್ನಾಡರು ತಾವುಕುಡ ನಟರಾಗಿ, ನಿರ್ಮಾಪಕರಾಗಿ, ಪೊಷಕನಟರಾಗಿ ನಟಿಸಿ ನಾಡಿನ ಗಮನ ಸೇಳೆದಿದ್ದರು. ಬಾಲ್ಯದ ಶಿರಸಿಯ ಯಕ್ಷಗಾನ ನಂತರದ ದಿನಗಳ ಧಾರವಾಡದ ನಾಟಕ ಅವರ ಮೇಲೆ ಪ್ರಭಾವ ಬಿರಿದ್ದು ವೈಚಾರಿಕತೆಯನ್ನು ಎತ್ತಿ ಸಾರಿದ್ದರು ಎಂದರು.

ಸುರಪುರ ತಾಲೂಕಾ ಸಹಾಯಕ ಖಜಾನೆ ಅಧಿಕಾರಿ ಡಾ. ಮೊನಪ್ಪ ಶಿರವಾಳ ಮಾತನಾಡಿ ಪರಿಸರದ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಿಕೊಳ್ಳಬೇಕಾಗಿದೆ ಜೊತೆಗೆ ಇಂದಿನ ವಿದ್ಯಾರ್ಥಿಗಳು ಸಾಹಿತ್ಯದ ಅಧ್ಯಾಯನದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ, ನ್ಯಾಯವಾದಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಬಿಲಾಲ್ ಮಖಾಂದಾರ ಕಾರ್ನಾಡರ ಸಾಹಿತ್ಯ ಕುರಿತು ವಿವರಿಸಿದರು. ಚಕೋರ ಬಳಗದ ಪ್ರತಿನಿಧಿ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಮತ್ತೊಬ್ಬ ಪ್ರತಿನಿಧಿ ವೀರಣ್ಣ ಕಲಿಕೇರಿ ಸ್ವಾಗತಿಸಿದರು, ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಡಾ. ಯಂಕಣ್ಣಗೌಡ ಪಾಟೀಲ್ ನಿರೂಪಿಸಿದರು, ಶರಣು ಕಾಡಂಗೇರಾ ವಂದಿಸಿದರು, ಪ್ರಮುಖರಾದ ಕನಕಪ್ಪ ವಾಗಣಗೇರಿ, ಹೆಚ್.ರಾಥೊಡ್, ಸಿದ್ದಯ್ಯಮಠ ರಂಗಂಪೇಟ, ಪ್ರಕಾಶ ಅಲಬನೂರು, ಶಂಕರ ಹುಲಕಲ್, ನಿಂಗಣ್ಣ ತಡಿಬಿಡಿ, ಶಿವಪ್ಪ ಹೆಬ್ಬಾಳ, ಶಿವಶರಣಪ್ಪ ಹೆಡಿಗಿನಾಳ, ಅಮರೇಶ ಕುಂಬಾರ, ಬಸವರಾಜ ಚನ್ನಪಟ್ನ, ಮೌನೇಶ ಐನಾಪೂರ ಸೇರಿದಂತೆ ಇತರರು ಇದ್ದರು.

emedialine

Recent Posts

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

2 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

7 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

7 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

9 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

20 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420