ಬಿಸಿ ಬಿಸಿ ಸುದ್ದಿ

ಸಡಗರದ ಮಣ್ಣೆತ್ತಿನ ಅಮವಾಸ್ಯೆ ಆಚರಣೆ

ಸುರಪುರ: ತಾಲೂಕಿನಾದ್ಯಂತ ಜನರು ಸಡಗರದ ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಮಾಡಿದರು.

ಅಮವಾಸ್ಯೆ ಅಂಗವಾಗಿ ನಗರದ ಮಹಾತ್ಮ ಗಾಂಧಿ ವೃತ್ತ, ಸರದಾರ್ ವಲ್ಲಭಬಾಯಿ ಪಟೇಲ್ ವೃತ್ತ,ರಂಗಂಪೇಟೆ,ತಿಮ್ಮಾಪುರ ಮತ್ತಿತರೆಡೆಗಳಲ್ಲಿ ಕುಂಬಾರ ಸಮುದಾಯದ ಅನೇಕರು ಮಣ್ಣೆತ್ತುಗಳ ಮಾರಾಟದಲ್ಲಿ ತೊಡಗಿದ್ದರು.ಎಲ್ಲಡೆಯು ಅನೇಕ ಜನರು ಮಣ್ಣೆತ್ತುಗಳನ್ನು ಖರಿದಿಸಿ ತಂದು ಮನೆಯಲ್ಲಿ ಮಣ್ಣೆತ್ತುಗಳಿಗೆ ವಿಶೇಷ ಅಲಂಕಾರ ಮಾಡಿ,ನಂತರ ಮನೆಯಲ್ಲಿನ ಜಗುಲಿಯ ಮೇಲೆ ಮಣ್ಣೆತ್ತುಗಳನ್ನಿಟ್ಟು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.

ಮಣ್ಣೆತ್ತಿನ ಅಮವಾಸ್ಯೆಯ ಕುರಿತು ರೈತ ಮುಖಂಡ ಮಲ್ಲಣ್ಣ ಹುಬ್ಬಳ್ಳಿ ಕುಂಬಾರಪೇಟೆ ಮಾತನಾಡಿ,ರೈತರಿಗೆ ಎತ್ತುಗಳೆ ಜೀವಾಳ,ಎತ್ತುಗಳಿಂದಲೆ ರೈತನ ಬದುಕು ಮತ್ತು ಕುಟುಂಬ ಸಾಗುವುದು.ಆದ್ದರಿಂದ ಎತ್ತುಗಳನ್ನು ರೈತ ತನ್ನ ಬಂಧುಗಳಂತೆ ಕಾಣುತ್ತಾನೆ.ಆದ್ದರಿಂದ ಜೀವಂತ ಎತ್ತುಗಳನ್ನು ಬಸವಣ್ಣ ಎಂದು ಗೌರವಿಸುತ್ತಾನೆ,ಆದರೆ ಆ ಎತ್ತುಗಳನ್ನು ಮನೆಯಲ್ಲಿಟ್ಟು ಪೂಜಿಸಲಾಗದು ಎನ್ನುವ ಕಾರಣಕ್ಕೆ ಗತಕಾಲದಿಂದಲೂ ಮಣ್ಣಿನ ಎತ್ತುಗಳನ್ನು ಮಾಡಿ ರೈತರು ಕೃಷಿ ಚಟುವಟಿಕೆ ಆರಂಭಿಸುವ ಪೂರ್ವದಲ್ಲಿ ಮನೆಯಲ್ಲಿನ ಜಗುಲಿಯ ಮೇಲಿಟ್ಟು ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಗುತ್ತದೆ.ಅದನ್ನು ಎಲ್ಲರು ಒಂದೇ ದಿನ ಆಚರಿಸುವ ಮೂಲಕ ಮಣ್ಣೆತ್ತಿನ ಪೂಜೆಯ ಹಬ್ಬವಾಗಿ ಆಚರಿಸುವುದಾಗಿ ಸಂತೋಷದಿಂದ ನುಡಿಯುತ್ತಾರೆ.

ಈಬಾರಿಯ ಮಣ್ಣೆತ್ತಿನ ವ್ಯಾಪಾರದ ಕುರಿತು,ಕುಂಬಾರ ಸಮುದಾಯದ ಮಹಿಳೆ ಮಹಾದೇವಿ ಬಸವರಾಜ ಅವರು ಮಾತನಾಡಿ, ಮಾರುಕಟ್ಟೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಣ್ಣಿನ ಎತ್ತುಗಳು ಬಂದಿದ್ದರಿಂದ ನಾವು ಮಾಡುವ ಮಣ್ಣಿನ ಎತ್ತುಗಳ ಮಾರಾಟಕ್ಕೆ ತುಂಬಾ ಹೊರೆಯಾಗಿದೆ.ಇದರಿಂದ ನಮ್ಮ ಬದುಕು ನಡೆಯುವುದು ಕಷ್ಟ ಎನ್ನುವಂತಾಗಿದೆ. ಸರಕಾರ ನಮ್ಮ ಬಡ ಕುಂಬಾರರತ್ತ ಗಮನ ಹರಿಸಿ ನಮಗೆ ನೆರವಾಗಬೇಕು ಎಂದು ಮನವಿ ಮಾಡುತ್ತಾರೆ.

ಒಟ್ಟಾರೆಯಾಗಿ ಕಳೆದ ಮೂರು ತಿಂಗಳಿನಿಂದ ಲಾಕ್‍ಡೌನ್ ಕಾರಣದಿಂದ ಸಮಸ್ಯೆ ಅನುಭವಿಸಿದ್ದ ತಾಲೂಕಿನ ಜನರು ಲಾಕ್‍ಡೌನ್ ತೆರವಿನ ನಂತರ ಬಂದ ಮೊದಲ ಹಬ್ಬವಾದ ಮಣ್ಣೆತ್ತಿನ ಅಮವಾಸ್ಯೆಯನ್ನು ಎಲ್ಲರು ತುಂಬಾ ಸಂತೋಷದಿಂದ ಆಚರಿಸಿದರು.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

52 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

60 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago