ಕಲಬುರಗಿ: ನೂತನ ಮುಖ್ಯಮಂತ್ರಿ ಬೋಮ್ಮಾಯಿಯವರ ನೇತೃತ್ವದ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿ ಮಂಡದಲ್ಲಿ ಸಿಗಬೇಕಾದ ನಮ್ಮ ಪಾಲಿನ ಸಚಿವ ಸ್ಥಾನಗಳು ಸಿಗದಿದ್ದರೆ ಹೋರಾಟ ಅನಿವಾರ್ಯವಾಗುವದು ಎಂದು ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿಮಂಡಲದಲ್ಲಿ ಪ್ರಾತಿನಿದಿತ್ವ ಸಿಗದೆ ಅನ್ಯಾಯ ಮಾಡಲಾಗಿತ್ತು, ವಿಶಾಲ ಬೂ ಪ್ರದೇಶ ಮತ್ತು ಒಂದುವರೆ ಕೋಟಿ ಜನಸಂಖ್ಯೆ ಹೊಂದಿರುವ, ಒಂದು ರಾಜ್ಯಕ್ಕೆ ಸಮಾನಾದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಂತ್ರಿ ಮಂಡಲದಲ್ಲಿಸ್ಥಾನಗಳು ನೀಡದೆ ಜನತೆಗೆ ಲಾವರಿಸ ತರಹ ನೋಡಿ ಕೂಂಡಿರುವದು ಯಾವ ನ್ಯಾಯ?.
ಪದೆ ಪದೇ ಪ್ರಾದೇಶಿಕ ಸಮತೋಲನೆ ಬಗ್ಗೆ ಮತ್ತು ವಿಶೇಷ ಸ್ಥಾನಮಾನಕ್ಕೆ ನ್ಯಾಯ ನೀಡುವ ಕುರಿತು ಮಾತ್ನಾಡುವ ದಕ್ಷಿಣ ಕರ್ನಾಟಕ ಮತ್ತು ಮುಂಬಯಿ ಕರ್ನಾಟಕದ ನಾಯಕರು ಅವಕಾಶಗಳು ಬಂದಾಗ ಕಲ್ಯಾಣ ಕರ್ನಾಟಕಕ್ಕೆ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆ ಮಾಡುತ್ತಾ ಬರುತ್ತಿರುವುದು ಖಂಡನೀಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ಇದೆ ರೀತಿಯ ವರ್ತನೆ ಮುಂದುವರಿದರೆ ನಮ್ಮ ದಾರಿ ನಾವು ನೋಡಿಕೊಳ್ಳುವ ಹೋರಾಟ ಮಾಡುವದು ಅನಿವಾರ್ಯ ಮತ್ತು ಇದು ನಮ್ಮ ಅಸ್ತಿತ್ವದ ಪ್ರಶ್ನೆ ಯಾಗಿದೆ. ನೂತನ ಮುಖ್ಯಮಂತ್ರಿ ಈ ವಿಷಯಕ್ಕೆಗಂಭೀರವಾಗಿ ಪರಿಗಣಿಸಿ ನೂತನ ಮಂತ್ರಿ ಮಂಡಳದಲ್ಲಿ ನ್ಯಾಯ ಒದಗಿಸಲು ಸಮಿತಿ ಭಾಗದ ಪರವಾಗಿ ಮತ್ತೊಮ್ಮೆ ಬಲವಾಗಿ ಒತ್ತಾಯಿಸಿದೆ.
ಕಲ್ಯಾಣ ಕರ್ನಾಟಕದ ಜನ ಪ್ರತಿನಿಧಿಗಳು ಹಳೆ ಮೈಸೂರು ಮತ್ತು ಮುಂಬಯಿ ಕರ್ನಾಟಕದ ನಾಯಕರರಿಂದ ನೇಮಕವಾದೆ, ನಮ್ಮ ಮತದಾರರ ಪ್ರಭುಗಳಿಂದ ಆಯ್ಕೆ ಯಾಗಿದ್ದು,ಮತದಾರರು ಕೊಟ್ಟ ವಿಶೇಷ ಅಧಿಕಾರಕ್ಕೆ ಪೂರಕವಾಗಿ ಸಂಘಟಿತವಾಗಿ ನಮ್ಮ ಪ್ರದೇಶದ ಸಚಿವ ಸ್ಥಾನಗಳ ಹಕ್ಕು ಪಡೆಯಲು ಸಮಿತಿ ಕಲ್ಯಾಣ ಕರ್ನಾಟಕ ಜನಪ್ರತಿನಿಧಿಗಳಲ್ಲಿ ಆಗ್ರಹಿಸಿದ್ದಾರೆ.
ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…