ಸುರಪುರ:ತಾಲೂಕಿನ ತಿಂಥಣಿ ಬ್ರಿಡ್ಜ ಬಳಿಯಿರುವ ಶ್ರೀ ಕನಕಗುರುಪೀಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಧಾರ್ಮೀಕ ಸಭೆಯನ್ನು ಶ್ರೀ ಮಠದಲ್ಲಿ ಸಸಿ ನಡುವ ಮೂಲಕ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸಿದರು.
ನಂತರ ಮಾತನಾಡಿದ ಆರ್.ವಿ.ನಾಯಕ, ಈ ಭಾಗದಲ್ಲಿ ಕನಕ ಗುರುಪೀಠವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಧರ್ಮವನ್ನು ರಕ್ಷೀಸುತ್ತಾ ಬಂದಿದೆ ಇಲ್ಲಿಯ ಗುರುಗಳಾದ ಶ್ರೀ ಶ್ರೀ ಸಿದ್ಧರಾಮನಂದಪುರಿ ಸ್ವಾಮೀಜಿಯವರು ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡುತ್ತಾ ಬಂದಿದ್ದಾರೆ ಅವರ ಮಾರ್ಗದರ್ಶನದಲ್ಲಿ ಸಮಾಜವು ಮಾದರಿಯಾಗಿ ಹೊರಹೊಮ್ಮುತ್ತಿದೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಇರಬೇಕು ಎಂದರು.
ಕಳೆದ ಕೆಲವುದಿನಗಳಿಂದ ಶ್ರೀಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಏಳಿಗೆಗೆ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಅನಾರೋಗ್ಯದಿಂದ ಬಳುತ್ತಿರುವುದು ನಮ್ಮ ಎಲ್ಲಾ ಭಕ್ತರಿಗೆ ಗಾಬರಿಯಾಗಿದೆ ದೇಶದ ಧಾರ್ಮೀಕ ಜಗತ್ತು ಬೆಳೆಯಲು ಶ್ರೀಗಳ ಆರೋಗ್ಯವು ಬೇಗ ಸುಧಾರಿಸಲು ನಾವೆಲ್ಲಾ ಭಕ್ತರುಗಳು ಆ ದೇವರಲ್ಲಿ ಪ್ರಾರ್ಥಿಸೋಣ ಎಂದರು.
ಶ್ರೀ ಸಿದ್ಧರಾಮನಂದಪುರಿ ಸ್ವಾಮೀಜಿಯವರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಮುಂಖಡರಾದ ವಿಠ್ಠಲ ಯಾದವ, ಬ್ಲಾಕ ಕಾಂಗ್ರೇಸ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹುಕಾರ, ರವಿ ಸಾಹುಕಾರ ಆಲ್ದಾಳ, ಹೆಚ್.ಆರ್.ಮಕಾಶಿ, ಭಂಡಾರಿ ನಾಟೇಕರ, ಯಮುನಪ್ಪ ಮಾಸ್ಟರ ಬಪ್ಪರಗಿ, ಯಮನೂರಿ ಯಣ್ಣೀವಡಗೇರಿ, ಬಸವರಾಜ ದೊಡಮನಿ, ಮಾನಯ್ಯ ಸಾಹುಕಾರ ಬಂಡೊಳಿ, ದೇವಪ್ಪ ಗುರು ಹುಣಸಿಹೊಳೆ, ಕನಕಾಚಲ ನಾಯಕ ಜಾಗೀರದಾರ, ಮಾನಯ್ಯ ಮೇಟಿ ಬಂಡೊಳ್ಳಿ, ಶರಣು ಶಾಂತಪೂರ ಸೇರಿದಂತೆ ಇತರರಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…